ಸುದ್ದಿ 

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 18,500ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ: ಮಧು ಬಂಗಾರಪ್ಪ..

Taluknewsmedia.com

Taluknewsmedia.comರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 18,500ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ: ಮಧು ಬಂಗಾರಪ್ಪ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈ ವರ್ಷ 18,500ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಮುಂದಿನ ಶೈಕ್ಷಣಿಕ ವರ್ಷದ ಆರಂಭದೊಳಗೆ ಎಲ್ಲಾ ಹಂತಗಳೂ ಪೂರ್ಣಗೊಳ್ಳಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌. ಮಧು ಬಂಗಾರಪ್ಪ ತಿಳಿಸಿದ್ದಾರೆ. ಸೋಮವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದ ಸರ್ಕಾರಿ ಶಾಲೆಗಳಿಗೆ ಸುಮಾರು 13 ಸಾವಿರ ಶಿಕ್ಷಕರ ಹಾಗೂ ಅನುದಾನಿತ ಶಾಲೆಗಳಿಗೆ 5,800ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ನಡೆಯಲಿದೆ. ನ್ಯಾ. ನಾಗಮೋಹನ್‌ದಾಸ್ ಅವರ ವರದಿಯ ಶಿಫಾರಸುಗಳನ್ನು ಅನುಸರಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಡಚಣೆಗಳಿದ್ದ ಕಾರಣ ಸ್ವಲ್ಪ ವಿಳಂಬವಾಗಿತ್ತು. ಈಗ ಎಲ್ಲ ಹಂತದ ತಾಂತ್ರಿಕ ಹಾಗೂ ಕಾನೂನು ವಿಚಾರಗಳು ಸರಿಯಾಗಿ ಪೂರ್ಣಗೊಂಡಿವೆ,” ಎಂದು ಹೇಳಿದರು. “ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ 4,700…

ಮುಂದೆ ಓದಿ..
ಸುದ್ದಿ 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವ್ಯಾಪ್ತಿಯಲ್ಲೂ ತೀವ್ರ ಚರ್ಚೆ ನಡೆಯುತ್ತಿದೆ.

Taluknewsmedia.com

Taluknewsmedia.comಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವ್ಯಾಪ್ತಿಯಲ್ಲೂ ತೀವ್ರ ಚರ್ಚೆ ನಡೆಯುತ್ತಿದೆ. ಈ ಕುರಿತು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿದ್ದು, ಸಮೀಕ್ಷೆ ಒಂದು ರಾಜ್ಯಮಟ್ಟದ ಮಹತ್ವದ ಕಾರ್ಯವಾಗಿದ್ದು, ಅದು ಪ್ರತಿ ಪ್ರದೇಶದ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಅಳೆಯಲು ನೆರವಾಗಲಿದೆ ಎಂದು ಹೇಳಿದರು. ಅವರು ಮತ್ತಷ್ಟು ವಿವರಿಸಿ —“ಸಮೀಕ್ಷೆ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಪ್ರತಿ ಮನೆ, ಪ್ರತಿ ಕುಟುಂಬದ ಸಾಮಾಜಿಕ ಹಾಗೂ ಶೈಕ್ಷಣಿಕ ಹಿನ್ನಲೆಯನ್ನು ಸರಿಯಾಗಿ ದಾಖಲಿಸುವುದೇ ಇದರ ಉದ್ದೇಶ. ಸಮೀಕ್ಷೆಯ ಅಂಕಿಅಂಶಗಳು ಭವಿಷ್ಯದಲ್ಲಿ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ನಿರ್ಧಾರಕ್ಕೆ ಆಧಾರವಾಗುತ್ತವೆ. ಆದ್ದರಿಂದ ಈ ಕಾರ್ಯದಲ್ಲಿ ಎಲ್ಲರೂ ಸಹಕಾರ ನೀಡಬೇಕು,” ಎಂದು ಮಹೇಶ್ವರ್ ರಾವ್ ವಿನಂತಿಸಿದರು. ಅವರು ಮುಂದುವರಿಸಿ ಹೇಳಿದರು:“ಕೆಲವು ಪ್ರದೇಶಗಳಲ್ಲಿ ಜಿಯೋ ಟ್ಯಾಗಿಂಗ್, ಡೇಟಾ ಅಪ್‌ಲೋಡ್ ಸೇರಿದಂತೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಈ…

ಮುಂದೆ ಓದಿ..
ಸುದ್ದಿ 

ಈ ವರ್ಷದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್‌ 9ರಿಂದ 23ರವರೆಗೆ ಅದ್ಧೂರಿಯಾಗಿ..

Taluknewsmedia.com

Taluknewsmedia.comಹಾಸನಾಂಬೆ ಜಾತ್ರೆ : ನಂಬಿಕೆಯ ನವರಂಗದಲ್ಲಿ ಶೃಂಗಾರಗೊಂಡ ಹಾಸನ ಹಾಸನ ನಗರ ಇಂದು ಭಕ್ತಿ, ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಗಮವಾಗಿ ಪರಿವರ್ತಿತವಾಗಿದೆ. ಮಲಯಮಾರುತ್ತದ ತಂಪಿನ ಮಧ್ಯೆ ನವರಾತ್ರಿಯ ನಾದ ಪ್ರತಿಧ್ವನಿಸುತ್ತಿರುವಾಗ, ಹಾಸನಾಂಬೆ ದೇವಿಯ ದೈವೀ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಕಾದಿದ್ದಾರೆ. ಈ ವರ್ಷದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್‌ 9ರಿಂದ 23ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಈಗಾಗಲೇ ನಗರದ ಪ್ರತಿಯೊಂದು ಬೀದಿ ದೇವಿಯ ಆರಾಧನೆಯ ಆಲೋಚನೆಯಲ್ಲಿದೆ. 🌺 ಒಡವೆಗಳ ಮೆರವಣಿಗೆ – ಭಕ್ತಿಭಾವದ ಆಭರಣ ಸೋಮವಾರ ಬೆಳಿಗ್ಗೆ ನಗರದ ಸಾಲಗಾಮೆ ರಸ್ತೆಯ ಬಳಿ ಇರುವ ಜಿಲ್ಲಾ ಖಜಾನೆಯಿಂದ ದೇವಿಯ ಅಮೂಲ್ಯ ಆಭರಣಗಳನ್ನು ಮೆರವಣಿಗೆಯ ರೂಪದಲ್ಲಿ ದೇವಾಲಯಕ್ಕೆ ಸಾಗಿಸಲಾಯಿತು. ಹಾಸನ ತಹಸೀಲ್ದಾರ್ ಗೀತಾ ಅವರ ಪೂಜೆ ನಂತರ ಬೆಳ್ಳಿ ರಥದಲ್ಲಿ ಮಂಗಳವಾದ್ಯಗಳ ನಾದದ ನಡುವೆ ಮೆರವಣಿಗೆ ಪ್ರಾರಂಭವಾಯಿತು. ಪೌರಾಣಿಕ ಸಂಪ್ರದಾಯದಂತೆ ಹಾಸನಾಂಬೆಯ ಆಭರಣಗಳು ದೇವಾಲಯದತ್ತ ಸಾಗುತ್ತಿದ್ದಂತೆ, ಮಾರ್ಗದಲ್ಲಿದ್ದ ಭಕ್ತರು…

ಮುಂದೆ ಓದಿ..
ಸುದ್ದಿ 

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌..

Taluknewsmedia.com

Taluknewsmedia.comಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಯನ್ನು ಕೈಬಿಡಬೇಕೇ ಅಥವಾ ಮುಂದುವರೆಸಬೇಕೇ ಎಂಬ ಕುರಿತು ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗದ ನಡುವೆ ಒಮ್ಮತ ಅಭಿಪ್ರಾಯ ಮೂಡಿಲ್ಲ. ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್‌, ವಾಲ್ಮೀಕಿ ಕ್ರಿಶ್ಚಿಯನ್‌, ಆದಿ ಆಂಧ್ರ ಕ್ರಿಶ್ಚಿಯನ್‌, ಆದಿ ದ್ರಾವಿಡ ಕ್ರಿಶ್ಚಿಯನ್‌, ಆದಿ ಕರ್ನಾಟಕ ಕ್ರಿಶ್ಚಿಯನ್‌, ಅಕ್ಕಸಾಲಿಗ ಕ್ರಿಶ್ಚಿಯನ್‌, ಬಣಜಿಗ ಕ್ರಿಶ್ಚಿಯನ್‌, ಬಂಜಾರ ಕ್ರಿಶ್ಚಿಯನ್‌, ಬಾರಿಕಾರ್‌ ಕ್ರಿಶ್ಚಿಯನ್‌, ಬೆಸ್ತರು ಕ್ರಿಶ್ಚಿಯನ್‌, ಬಿಲ್ಲವ ಕ್ರಿಶ್ಚಿಯನ್‌, ಬುಡುಗ ಜಂಗಮ ಕ್ರಿಶ್ಚಿಯನ್‌, ಚರೋಡಿ ಕ್ರಿಶ್ಚಿಯನ್‌, ದೇವಾಂಗ ಕ್ರಿಶ್ಚಿಯನ್‌, ಗೊಲ್ಲ ಕ್ರಿಶ್ಚಿಯನ್‌, ಗೌಡಿ ಕ್ರಿಶ್ಚಿಯನ್‌, ಹೊಲೆಯ ಕ್ರಿಶ್ಚಿಯನ್‌, ಜಲಗಾರ ಕ್ರಿಶ್ಚಿಯನ್‌, ಜಾಡರ್‌ ಕ್ರಿಶ್ಚಿಯನ್‌, ಜಂಗಮ ಕ್ರಿಶ್ಚಿಯನ್‌, ಕಮ್ಮ ಕ್ರಿಶ್ಚಿಯನ್‌, ಕಮ್ಮ…

ಮುಂದೆ ಓದಿ..
ಸುದ್ದಿ 

ಈ ಹೆಚ್ಚಳದ ದರಗಳು 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

Taluknewsmedia.com

Taluknewsmedia.comಕರ್ನಾಟಕದ ಮುಜರಾಯಿ ಇಲಾಖೆ ನಿಯಂತ್ರಣದಲ್ಲಿರುವ 14 ಪ್ರಮುಖ ದೇವಸ್ಥಾನಗಳಲ್ಲಿ ಸೇವಾ ಶುಲ್ಕ (seva / ritual charges) ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹೆಚ್ಚಳದ ದರಗಳು 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಈ ಸೇವಾ ಶುಲ್ಕದ ಆದೇಶವು “ದೇವಾಲಯಗಳ ಆಡಳಿತ ಮಂಡಳಿಗಳ ತೀರ್ಮಾನದ ಅನುಸಾರವಾಗಿದೆ, ಸರ್ಕಾರದ ಸ್ವಯಂ ನಿರ್ಧಾರವಲ್ಲ” ಎಂಬಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಕೆಳಗಿನ ಕೆಲವು ದೇವಾಲಯಗಳು ಸೇವಾ ಶುಲ್ಕ ಏರಿಕೆಗೆ ಒಳಗೊಂಡಿವೆ:

ಮುಂದೆ ಓದಿ..
ಸುದ್ದಿ 

ನಾಗಮಂಗಲ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಪೆಟ್ರೋಲ್ ಬಂಕುಗಳಲ್ಲಿ ರೈತರಿಗೆ ಮೋಸ..

Taluknewsmedia.com

Taluknewsmedia.comನಾಗಮಂಗಲ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಪೆಟ್ರೋಲ್ ಬಂಕುಗಳಲ್ಲಿ ರೈತರಿಗೆ ಮೋಸ.. ತೆರೆದ ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿ ನೀಡುವ ಆಯಿಲ್ ನಂಬದಿರಿ.. ಕಳಪೆ ಆಯಿಲ್ – ರೈತನ ಶ್ರಮಕ್ಕೆ ಕಲ್ಲು ಹಾಕುವಂತದ್ದು! ನಿಮ್ಮ ಮುಂದೆ ಪ್ಯಾಕ್ ಓಪನ್ ಮಾಡಿಸಿ.. ಇಂದನ ತುಂಬಿಸಿ. ಈಗಾಗಲೇ ತಪ್ಪು ಮಾಡುತ್ತೀರುವ ಪೆಟ್ರೋಲ್ ಬಂಕುನವರಿಗೆ ರೈತರೂ ನೇರವಾಗಿ ಹೇಳಿದರೂ ಕೇಳುತ್ತಿಲ್ಲ.. ಇಂದಿನ ದಿನಗಳಲ್ಲಿ ನಗರದಲ್ಲೋ, ಹಳ್ಳಿಯಲ್ಲೋ, ಸ್ಕೂಟರ್, ಬೈಕ್, ಟ್ರ್ಯಾಕ್ಟರ್, ಪಂಪುಮೆಷಿನ್, ಅಥವಾ ಥ್ರೆಷರ್‌ಗಳ ಉಪಯೋಗ ಪ್ರತಿದಿನವೂ ಹೆಚ್ಚುತ್ತಿದೆ. ಇವುಗಳೆಲ್ಲವೂ ಸರಿಯಾಗಿ ಕೆಲಸಮಾಡಬೇಕಾದರೆ, ಅವುಗಳಿಗೆ ಬಳಸುವ ಎಂಜಿನ್ ಆಯಿಲ್ ಅತ್ಯಂತ ಮುಖ್ಯ. ಆದರೆ ಈಗ ಕಳಪೆ ಆಯಿಲ್ (Adulterated/Low Grade Oil) ಗಳ ಬಳಕೆ ಮುಕ್ತಿ ಕೊಡುವಂತೆ ಆಗಿದೆ. ಇದು ಗಾಡಿಯನ್ನಷ್ಟೇ ಅಲ್ಲ, ರೈತನ ದುಡಿಮೆಯನ್ನೂ ನಾಶಪಡಿಸುತ್ತದೆ. ಕಳಪೆ ಆಯಿಲ್ ಎಂದರೇನು? : ಕಳಪೆ ಆಯಿಲ್ ಎಂದರೆ: ಶುದ್ಧ ಎಂಜಿನ್ ಆಯಿಲ್‌ಗೆ ಬೇರೆ ಕಿಮಿಕಲ್…

ಮುಂದೆ ಓದಿ..
ಸುದ್ದಿ 

ಬಾಲಕನ ಅಪಹರಿಸಿ ಬರ್ಬರ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು..

Taluknewsmedia.com

Taluknewsmedia.comಬೆಂಗಳೂರು: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್‌ನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಗಳಾಗಿ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಗುರುವಾರ ತಡರಾತ್ರಿ ಕಗ್ಗಲೀಪುರ ರಸ್ತೆಯ ಬಳಿಯಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಳಿಮಾವು ಠಾಣೆ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ, ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್ಐ ಅರವಿಂದ್ ಕುಮಾರ್ ಅವರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.ಘಟನೆಯಲ್ಲಿ ಗುರುಮೂರ್ತಿಯ ಎರಡೂ ಕಾಲುಗಳು ಮತ್ತು ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಬೆಂಗಳೂರು ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ನಿಶ್ಚಿತ್ ಮತ್ತು ಅವನ ಪೋಷಕರು ವಾಸಿಸುತ್ತಿದ್ದರು. ನಿಶ್ಚಿತ್‌ನ ತಂದೆ ನಗರದ ಪ್ರತಿಷ್ಠಿತ…

ಮುಂದೆ ಓದಿ..
ಸುದ್ದಿ 

ವರದಿಗಾರಿಕೆಗೂ ರೋಬೋಟ್ಗಳು ಲಗ್ಗೆಯಿಡುವ ಕಾಲ ಸನ್ನಿಹಿತ : ನಿರ್ಮಲಾನಂದಶ್ರೀ

Taluknewsmedia.com

Taluknewsmedia.comನಾಗಮಂಗಲ : ಪತ್ರಕರ್ತರು ಗುಡ್ಡಗಾಡು ಕಣಿವೆ ಯುದ್ಧ ಪ್ರವಾಹ ಭೀತಿಯ ಪ್ರದೇಶಗಳಿಗೂ ತೆರಳಿ ಸುದ್ದಿ ಪ್ರಕಟಿಸುವ ಸಂದಿಗ್ದತೆ ರೋಬೋಟ್ ಗಳಿಂದ ದೂರವಾಗಲಿದೆ. ಆಯಾ ಪ್ರದೇಶಗಳಲ್ಲಿ ಒಂದೊಂದು ರೋಬೋಟ್ ಸುದ್ದಿ ಪ್ರಕಟಿಸುವ ಕಾರ್ಯ ಮಾಡುವ ದಿನ ಸನ್ನಿಹಿತ ಎಂದು ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಭವಿಷ್ಯ ನುಡಿದರು. ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಅಭಿನಂದನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸತ್ಯ ನಿಖರ ಮತ್ತು ವಸ್ತುನಿಷ್ಠ ವರದಿಯನ್ನು ಹುಡುಕಿ ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪತ್ರಿಕಾರಂಗವು ಸಂವಿಧಾನದ ನಾಲ್ಕನೇ ಅಂಗವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತರು ಪೆನ್ ಮತ್ತು ಕ್ಯಾಮೆರಾಗಳನ್ನು ಸಮಾಜದ ಹಿತಕ್ಕಾಗಿ ಬಳಸಬೇಕು ಹಿಂದೆ ಶಿಕ್ಷಣ ಮುಖ್ಯವಾಗಿತ್ತು ಇಂದು ಕೌಶಲ್ಯ…

ಮುಂದೆ ಓದಿ..
ಸುದ್ದಿ 

su_from_so ಸುಲೋಚನ_ಫ್ರಾಮ್_ಸೋಮೇಶ್ವರ

Taluknewsmedia.com

Taluknewsmedia.comsu_from_so ಸುಲೋಚನ_ಫ್ರಾಮ್_ಸೋಮೇಶ್ವರ ಬೇರೆ_ಯಾರೋ_ನಿರ್ದೇಶಕರಾಗಿದ್ದರೆ_ಈ_ಚಿತ್ರವನ್ನು_ಕೇವಲ_ತುಳು_ಭಾಷೆಗೆ_ಸೀಮಿತ_ಮಾಡುತ್ತಿದ್ದರೇನೂ_ಈ ವಿಷಯದಲ್ಲಿ ನಿರ್ದೇಶಕರ ಜಾಣ್ಮೆ ಅಡಗಿದೆ. ಕೊಟ್ಟ ಹಣಕ್ಕೆ ಮೊಸವೇನಿಲ್ಲ! ಚಿತ್ರ ನೋಡಿ ನಕ್ಕು ಬರುವುದು ಖಂಡಿತಾ. ಸಾಮಾನ್ಯವಾಗಿ ಹೇಳೋದೇ ಆದರೆ ನಮ್ಮ ಉತ್ತರ ಕರ್ನಾಟಕದವರಿಗೆ ರುಚಿಸದು ನನ್ನ ಪ್ರಕಾರ. ಆದರೆ ಮಲೆನಾಡಿನವರಿಗೆ ಮೃಷ್ಟಾನ್ನ ಭೋಜನ. ಚಿತ್ರದಲ್ಲಿ ಅಂತದ್ದು ಹೊಸ ವಿಷಯವೇನು ಹೇಳದೆ ಇದ್ದರೂ ಸಾಮಾನ್ಯರ ಜೊತೆಗೂಡಿ ಒಂದು ಅಸಾಮಾನ್ಯ ಚಿತ್ರವನ್ನು ನಿರ್ಮಿಸಬಹುದುದೆನ್ನುವುದಕ್ಕೆ ಇದೊಂದು ಉದಾಹರಣೆ. ಅಬ್ಬರದ ಸಂಗೀತವಿಲ್ಲ, ಬೇಕೆಂದೇ ಸೃಟ್ಟಿಸಿದ ದೃಶ್ಯ ವ ಹಾಡುಗಳಿಲ್ಲ. ಕರಾವಳಿಯಲ್ಲಿ ಈಗಲೂ ಚಾಲ್ತಿಯಲ್ಲಿರುವ ಮೂಢನಂಬಿಕೆಗಳ ಮೇಲೆ ಕಥೆ ಸಾಗುತ್ತೆ. ಯಾರ್ ಹೀರೋ, ಯಾರ್ ಹೀರೋಹಿನ್ ಅಂತಾ ನೀವೇ ಊಹಿಸಕೊಳ್ಳಬೇಕು ಅಷ್ಟರಮಟ್ಟಿಗಿನ ಸಾಮಾನ್ಯ ಚಿತ್ರ. ನೋಡಿಸಿಕೊಂಡು ಹೋಗುವ ವೇಗ, ಸೆಳೆತ ಚಿತ್ರಕ್ಕಿದೆ. ಈ ವರ್ಷದ ಹೊಸಬರ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಡಬೇಕು ಅಂತಿದ್ದರೆ ಇದೇ ಮೊದಲ ಚಿತ್ರವೆಂದು ಧಾರಾಳವಾಗಿ ಹೇಳಬಹುದು. Vijay Iliger

ಮುಂದೆ ಓದಿ..
ಸುದ್ದಿ 

ಪದವೀಧರರ ಆಲೋಚನೆಗಳು ಯೋಜನೆಗಳು ದೇಶಕ್ಕೆ ಕೊಡುಗೆಯಾಗಬೇಕಿದೆ : ಡಾ.ಸೋಮನಾಥ್

Taluknewsmedia.com

Taluknewsmedia.comನಾಗಮಂಗಲ : ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ ‌ ಹೆಚ್ಚುತ್ತಿರುವ ಪದವೀಧರರ ಆಲೋಚನೆಗಳು ಯೋಜನೆಗಳು ದೇಶಕ್ಕೆಕೊಡುಗೆಯಾಗಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆದ ಡಾ.ಎಸ್.ಸೋಮನಾಥ್ ಅಭಿಪ್ರಾಯ ಪಟ್ಟರು. ತಾಲ್ಲೂಕಿನ ಬಿ.ಜಿ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಐದನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು. ಇಲ್ಲಿಯವರೆಗೆ ನಿಮ್ಮ ಬದುಕಿನ ದಿಕ್ಕೇ ಬೇರೆ. ಪದವೀಧರರಾದ ನಿಮಗೆ ಇಂದಿನಿಂದ ಖಾಸಗಿ ಹಾಗೂ ವೃತ್ತಿಪರ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಇಂದಿನಿಂದ ನಿಮ್ಮಲ್ಲಿರುವ ಜ್ಞಾನದ ಜೊತೆಗೆ ಕೌಶಲ್ಯ ಕೂಡ ನೆರವಿಗೆ ಬರುತ್ತದೆ. ನಿಮ್ಮ ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಮನ್ನಣೆ ನೀಡಿ ಎಂದರು. ಇಂದು ಭಾರತ ವಿಶ್ವಕ್ಕೆ ತನ್ನ ಸಂಸ್ಕೃತಿಯ ಮೂಲಕ ಅನೇಕ ಕೊಡುಗೆ ನೀಡಿದೆ. ಅದೇ ರೀತಿ…

ಮುಂದೆ ಓದಿ..