ಗೋಹತ್ಯೆ ಕಾಯ್ದೆ ತಿದ್ದುಪಡಿಗೆ ಸರ್ಕಾರ ಮುಂದಾದ ಕುರಿತು ಶಾಸಕ ವೇದವ್ಯಾಸ ಕಾಮತ್ ಕಿಡಿಕಾರಿಕೆ
Taluknewsmedia.comಗೋಹತ್ಯೆ ಕಾಯ್ದೆ ತಿದ್ದುಪಡಿಗೆ ಸರ್ಕಾರ ಮುಂದಾದ ಕುರಿತು ಶಾಸಕ ವೇದವ್ಯಾಸ ಕಾಮತ್ ಕಿಡಿಕಾರಿಕೆ ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರಲ್ಲಿ ಬದಲಾವಣೆ ತರಲು ಯತ್ನಿಸುತ್ತಿದೆ ಎಂಬ ಸುದ್ದಿಗಳು ಹೊರಬಿದ್ದ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹಿಂದಿನ ಬಿಜೆಪಿ ಆಡಳಿತವು ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾನೂನು ಪ್ರಕಾರ, ಅಕ್ರಮ ಗೋ ಸಾಗಣೆಗಾಗಿ ಬಳಸಿದ ವಾಹನಗಳನ್ನು ಜಪ್ತಿ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. vozವಾಹನವನ್ನು ತೆರವುಗೊಳಿಸಲು ಬ್ಯಾಂಕ್ ಗ್ಯಾರಂಟಿ ಕಡ್ಡಾಯವಾಗಿದ್ದು, ಇದರಿಂದ ಅಕ್ರಮ ಗೋ ಸಾಗಾಟ ಮತ್ತು ಅನಧಿಕೃತ ಕಸಾಯಿಖಾನೆಗಳ ಚಟುವಟಿಕೆಗಳು ಗಣನೀಯವಾಗಿ ಕುಂಠಿತವಾಗಿದ್ದವು ಎಂದು ಕಾಮತ್ ನೆನಪಿಸಿದರು. ಕಾಯ್ದೆ ತಿದ್ದುಪಡಿ ಪ್ರಸ್ತಾಪವೇ ಗೋ ಕಳ್ಳರು ಹಾಗೂ ಅಕ್ರಮ ಸಾರಿಗಾ ಜಾಲಗಳಿಗೆ ಸರ್ಕಾರದ ಪರೋಕ್ಷ ಬೆಂಬಲದಂತೆ ಕಾಣುತ್ತಿದೆ ಎಂದು ಕಾಮತ್…
ಮುಂದೆ ಓದಿ..
