ಸುದ್ದಿ 

ಚೆಕ್ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಜಗಳ – ಮಹಿಳೆಗೆ ಜೀವ ಬೆದರಿಕೆ, ದೂರು ದಾಖಲಿಸಿ ತನಿಖೆ ಆರಂಭ

Taluknewsmedia.com

Taluknewsmedia.comಬೆಂಗಳೂರು, ಜುಲೈ 31 2025ಚೆಕ್ ಮೂಲಕ ಹಣದ ವ್ಯವಹಾರದಲ್ಲಿ ಉಂಟಾದ ಗೊಂದಲದಿಂದ ಮಹಿಳೆಯೊಬ್ಬರು ತೀವ್ರವಾಗಿ ಮಾನಸಿಕವಾಗಿ ಪರಿತಪಿಸುತ್ತಿದ್ದು, ಜೀವನಕ್ಕೆ ಬೆದರಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಂಬಂಧಿತ ಮಹಿಳೆಯ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ರುಕ್ಮಿಣಿ ಅವರ ಪ್ರಕಾರ, ಅವರು 2024ರ ಸೆಪ್ಟೆಂಬರ್ 25ರಂದು ಚಿನ್ಮಯಿ ಎಂಬವರೊಂದಿಗೆ ವಿವಾಹವಾಗಿದ್ದರು. ಇವರಿಗೆ ಶೋಭಾ ಎಂಬ ಮಹಿಳೆ ಹಲವಾರು ತಿಂಗಳಿಂದ ಪರಿಚಿತರಾಗಿದ್ದರು. ಶೋಭಾ ಅವರಿಗೆ 2025ರ ಜನವರಿ 23ರಂದು ₹3,00,000 ಮೌಲ್ಯದ ಬ್ಯಾಂಕ್ ಚೆಕ್ ನೀಡಲಾಗಿತ್ತು. ಅದರಿಂದ ನಂತರ ನಿರಂತರವಾಗಿ ಬಡ್ಡಿಯ ಸಹಿತ ಹಣ ಪಾವತಿಸುತ್ತಿದ್ದರು. ಆದರೆ, ಮೇ 26, 2025 ರಂದು ಅವರು ಶೋಭಾ ಅವರ ಮನೆಗೆ ತೆರಳಿ ಹಣ ಹಿಂತಿರುಗಿಸಿ ಚೆಕ್ ವಾಪಸ್ ಕೇಳಿದಾಗ ಕೊಡುವುದಾಗಿ ಹೇಳಿ ನಂತರ ನೀಡಲಿಲ್ಲ. ಪುನಃ ಕೇಳಿದಾಗ, ದೂರಿನ ಪ್ರಕಾರ, ಶೋಭಾ ಅವರು ದೂರುದಾರ ಹಾಗೂ ಅವರ…

ಮುಂದೆ ಓದಿ..
ಸುದ್ದಿ 

ನಮ್ಮ ನಿಷ್ಠೆ ಪ್ರಕೃತಿಗೆ…….

Taluknewsmedia.com

Taluknewsmedia.comನಮ್ಮ ನಿಷ್ಠೆ ಪ್ರಕೃತಿಗೆ……. ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ…… ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು……. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು……. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು…… ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು…….. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ ಫಲಿತಾಂಶ ಬಂದಿರಬಹುದು…… ಆಕಸ್ಮಿಕವಾಗಿ ನಾವು ಶಪಿಸಿದಂತೆ ನಮ್ಮ ವಿರೋಧಿಗಳಿಗೆ ಆಘಾತ ಸಂಭವಿಸಿರಬಹುದು…….. ಹರಕೆಗಳು ಸಂಭವಿಸಲು ಅವು ನಮ್ಮ ಮಿತಿಯಲ್ಲಿರಬೇಕು.ಮದುವೆ, ಮಕ್ಕಳು, ಪರೀಕ್ಷೆ, ಉದ್ಯೋಗ, ಆರೋಗ್ಯ, ಆಸ್ತಿ, ಅಧಿಕಾರ ಎಲ್ಲವೂ ಕನಿಷ್ಟ ನಾವು ಸ್ಪರ್ಧೆಯಲ್ಲಿ ಇದ್ದಾಗ ಮಾತ್ರ ಸಂಭವಿಸುವ ಸಾಧ್ಯತೆ ಇರುತ್ತದೆ. ಸ್ಪರ್ಧೆಯಲ್ಲಿ ಇಲ್ಲದೆ ಕೇವಲ ಪ್ರೇಕ್ಷಕರೋ, ವೀಕ್ಷಕರೋ ಆಗಿದ್ದರೆ ಹರಕೆ ಪೂರೈಕೆಯಾಗುವುದಿಲ್ಲ. ಉದಾಹರಣೆಗೆ…… ನೀವು ಮದುವೆ ವಯಸ್ಸಿನವರಾಗಿದ್ದು, ವಧು ವರರ ಹುಡುಕಾಟದಲ್ಲಿ ಇದ್ದಾಗ, ಉದ್ಯೋಗದ ಹುಡುಕಾಟದಲ್ಲಿ ಇದ್ದಾಗ, ವೈದ್ಯಕೀಯ ಭಾಷೆಯಲ್ಲಿ ಮಕ್ಕಳಾಗುವ ಸಾಧ್ಯತೆ ಇದ್ದಾಗ, ಸಾವಿನ ಖಚಿತತೆ ಇಲ್ಲದಿದ್ದಾಗ, ರಾಜಕೀಯ…

ಮುಂದೆ ಓದಿ..
ಸುದ್ದಿ 

ವರದಿಗಾರಿಕೆಗೂ ರೋಬೋಟ್ಗಳು ಲಗ್ಗೆಯಿಡುವ ಕಾಲ ಸನ್ನಿಹಿತ : ನಿರ್ಮಲಾನಂದಶ್ರೀ

Taluknewsmedia.com

Taluknewsmedia.comನಾಗಮಂಗಲ : ಪತ್ರಕರ್ತರು ಗುಡ್ಡಗಾಡು ಕಣಿವೆ ಯುದ್ಧ ಪ್ರವಾಹ ಭೀತಿಯ ಪ್ರದೇಶಗಳಿಗೂ ತೆರಳಿ ಸುದ್ದಿ ಪ್ರಕಟಿಸುವ ಸಂದಿಗ್ದತೆ ರೋಬೋಟ್ ಗಳಿಂದ ದೂರವಾಗಲಿದೆ. ಆಯಾ ಪ್ರದೇಶಗಳಲ್ಲಿ ಒಂದೊಂದು ರೋಬೋಟ್ ಸುದ್ದಿ ಪ್ರಕಟಿಸುವ ಕಾರ್ಯ ಮಾಡುವ ದಿನ ಸನ್ನಿಹಿತ ಎಂದು ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಭವಿಷ್ಯ ನುಡಿದರು. ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಅಭಿನಂದನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸತ್ಯ ನಿಖರ ಮತ್ತು ವಸ್ತುನಿಷ್ಠ ವರದಿಯನ್ನು ಹುಡುಕಿ ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪತ್ರಿಕಾರಂಗವು ಸಂವಿಧಾನದ ನಾಲ್ಕನೇ ಅಂಗವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತರು ಪೆನ್ ಮತ್ತು ಕ್ಯಾಮೆರಾಗಳನ್ನು ಸಮಾಜದ ಹಿತಕ್ಕಾಗಿ ಬಳಸಬೇಕು ಹಿಂದೆ ಶಿಕ್ಷಣ ಮುಖ್ಯವಾಗಿತ್ತು ಇಂದು ಕೌಶಲ್ಯ…

ಮುಂದೆ ಓದಿ..
ಸುದ್ದಿ 

ಹೊಂಗಸಂದ್ರ ನಿವಾಸಿಗೆ ರಸ್ತೆ ಅಪಘಾತ: ಬಿಎಂಟಿಸಿ ಬಸ್ ಡಿಕ್ಕಿಯಿಂದ ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 29 – ನಗರದ ಹೊರವಲಯದಲ್ಲಿನ ವರ್ತೂರು–ದೊಮ್ಮಸಂದ್ರ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ತೀವ್ರ ಅಪಘಾತದಲ್ಲಿ ಆಟೋ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಬೆಂಗಳೂರಿನ ಹೊಂಗಸಂದ್ರ ನಿವಾಸಿಯಾದ ವಿನಾಯಕ್ ನಾಯಕ್ (ವಯಸ್ಸು: 45) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸುಮಾರು 1:15ರ ವೇಳೆಗೆ ವಿನಾಯಕ್ ನಾಯಕ್ ಅವರು ತಮ್ಮ ಆಟೋ (ನಂ: KA-01-AN-2247) ಚಾಲನೆ ಮಾಡಿಕೊಂಡು ವರ್ತೂರು ಕಡೆಯಿಂದ ದೊಮ್ಮಸಂದ್ರ ಕಡೆಗೆ ಹೋಗುತ್ತಿದ್ದರು. ಈ ವೇಳೆ, ಹೆಗೊಂಡನಹಳ್ಳಿ ಬಳಿಯ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ, ಹಿಂದಿನಿಂದ ಬಂದಿದ್ದ ಬಿಎಂಟಿಸಿ ಬಸ್ (ನಂ: KA-57-F-6111) ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ, ಆಟೋ ಸಂಪೂರ್ಣ ಜಖಂಗೊಂಡಿದ್ದು, ವಿನಾಯಕ್ ನಾಯಕ್ ಅವರಿಗೆ ತಲೆಗೆ ಹಾಗೂ ಬಲಗಾಲಿಗೆ ತೀವ್ರ ಗಾಯಗಳಾಗಿವೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಕೂಡಲೇ ಸಾರ್ವಜನಿಕರ ನೆರವಿನಿಂದ ಸ್ವಸ್ತಿಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಡಿತರ ಸಂಬಂಧಿಕರು ನೀಡಿದ…

ಮುಂದೆ ಓದಿ..
ಸುದ್ದಿ 

ಸರ್ಜಾಪುರರಸ್ತೆ ಬಳಿ ಭೀಕರ ಬೈಕ್ ಅಪಘಾತ – ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲೆ

Taluknewsmedia.com

Taluknewsmedia.comಸರ್ಜಾಪುರ, ಜುಲೈ 29, 2025:ಸರ್ಜಾಪುರ-ಬಾಗಲೂರು ರಸ್ತೆಯ ಸರ್ಜಾಪುರ ಬಾರ್ಡರ್ ಬಳಿ ಭೀಕರ ಮೋಟಾರ್ ಸೈಕಲ್ ಅಪಘಾತ ಸಂಭವಿಸಿದ್ದು, 26 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈತನ ಜೊತೆಯಲ್ಲಿದ್ದ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಸರ್ಜಾಪುರ ಟೌನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ರಾಜ್ಯದ ಗೌನ್ ನಗರ ಮೂಲದ ಹರಿಕೃಷ್ಣ ಗುರಿಯ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಬಪ್ಪ ಸರ್ಕಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಳೆದ 5-6 ತಿಂಗಳಿಂದ ಸರ್ಜಾಪುರ ಟೌನ್‌ನ ಹರ್ಬನ್ ಗ್ರೀನ್ ವಿಲಾಸ್ ಹಿಂಭಾಗದ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದರು. ಅಪಘಾತದ ವಿವರ:ದಿನಾಂಕ 28-07-2025ರಂದು ಮಧ್ಯಾಹ್ನ ಸುಮಾರು 2:00 ಗಂಟೆ ವೇಳೆಗೆ, ಹರಿಕೃಷ್ಣ ಗುರಿಯ ಹಾಗೂ ಬಪ್ಪ ಸರ್ಕಾರ್ ತಮಿಳುನಾಡು ಬಾರ್ಡರ್ ಭಾಗದಿಂದ ಮೀನನ್ನು ತಂದುಕೊಳ್ಳಲು ಹೋಗಿ ಮೋಟಾರ್ ಸೈಕಲ್ ಮೂಲಕ ವಾಪಸ್ಸು ಬರುತ್ತಿದ್ದರು. ಈ ವೇಳೆ ಹರಿಕೃಷ್ಣ ಗುರಿಯನು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಾವ್ಯ ಅನುಮಾನಾಸ್ಪದ ರೀತಿಯಲ್ಲಿ ಕಾಣೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 29:ನಗರದ ವಸತಿ ಪ್ರದೇಶವೊಂದರಲ್ಲಿ ವಾಸವಿದ್ದ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಾವ್ಯ ಎಂಬ ಯುವತಿ ದಿನಾಂಕ 27 ಜುಲೈ 2025ರಂದು ರಾತ್ರಿ ಸಂಶಯಾಸ್ಪದ ರೀತಿಯಲ್ಲಿ ಕಾಣೆಯಾದ ಘಟನೆ ವರದಿಯಾಗಿದೆ. ಕಾವ್ಯನ ತಂದೆ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದಿನಾಂಕ 27ರಂದು ರಾತ್ರಿ ಸುಮಾರು 9.00 ಗಂಟೆಗೆ ಅವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಊಟ ಮುಗಿಸಿ ಮಲಗಿದ್ದರು. ಮಧ್ಯರಾತ್ರಿ ಸುಮಾರು 1.00 ಗಂಟೆಗೆ ಎದ್ದು ನೋಡಿದಾಗ ಮಗಳು ಮಲಗಿದ್ದ ಸ್ಥಳದಲ್ಲಿ ಕಾಣಿಸದಿದ್ದಾಳೆ. ತಕ್ಷಣವೇ ಕುಟುಂಬದವರು ಪರಿಸರದಲ್ಲಿ ಹಾಗೂ ಸಂಬಂಧಿತ ಜಾಗಗಳಲ್ಲಿ ಹುಡುಕಾಡಿದರೂ ಯಾವುದೇ ಮಾಹಿತಿ ದೊರಕಲಿಲ್ಲ. ಅನಂತರ ದಿನಾಂಕ 28 ಜುಲೈ 2025ರಂದು ಬೆಳಿಗ್ಗೆ 10.30ರ ವೇಳೆಗೆ ಶಿವರಾಜ್‍ರವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾವ್ಯನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಸ್ಥಳೀಯ ನಿವಾಸಿಗಳಿಂದ…

ಮುಂದೆ ಓದಿ..
ಸುದ್ದಿ 

ಆನೇಕಲ್ ರೈಲ್ವೇ ನಿಲ್ದಾಣ ಪಾರ್ಕಿಂಗ್‌ನಲ್ಲಿ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನ ಕಳವು

Taluknewsmedia.com

Taluknewsmedia.comಆನೇಕಲ್, ಜುಲೈ 30:ಆನೇಕಲ್ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಯಾರೋ ಅಜ್ಞಾತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ನೇತ್ರಾ ರಾಜೇಶ್ ರುದ್ರಗೋಪಾಲ್ ಎಂಬವರು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಅವರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ತಮ್ಮ ಸ್ವಂತ KA-17-U-6841 ನಂಬರಿನ ಕಪ್ಪು ಬಣ್ಣದ ಹೊಂಡಾ ಆಕ್ಟಿವಾ (ಮಾದರಿ: 2005) ದ್ವಿಚಕ್ರ ವಾಹನವನ್ನು ಬಳಸಿಕೊಂಡು ಆನೇಕಲ್ ರೈಲ್ವೇ ನಿಲ್ದಾಣದ ಪಾರ್ಕಿಂಗ್‌ನಲ್ಲಿ ನಿಲ್ಲಿಸಿ, ರೈಲಿನಲ್ಲಿ ಬೆಳ್ಳಂದೂರಿಗೆ ಕೆಲಸಕ್ಕೆ ತೆರಳುತ್ತಿದ್ದರು. ಜುಲೈ 25ರ ಬೆಳಿಗ್ಗೆ 8:30ರ ಸಮಯದಲ್ಲಿ ಅವರು ಎಂದಿನಂತೆ ತಮ್ಮ ವಾಹನವನ್ನು ಪಾರ್ಕಿಂಗ್‌ನಲ್ಲಿ ನಿಲ್ಲಿಸಿ ಕೆಲಸಕ್ಕೆ ಹೋದರು. ಸಂಜೆ 4:00 ಗಂಟೆಗೆ ವಾಪಸ್ಸು ಬಂದಾಗ ವಾಹನವು ಅಲ್ಲಿಯೇ ಕಾಣೆಯಾಗಿದ್ದುದಾಗಿ ಅವರು ದೂರು ನೀಡಿದ್ದಾರೆ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗದ ಕಾರಣ ಜುಲೈ…

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ಪ್ರೈಓವರ್‌ನಲ್ಲಿ ಲಾರಿ ನಿಲ್ಲಿಸಿದ ಚಾಲಕನ ವಿರುದ್ಧ ಕ್ರಮ

Taluknewsmedia.com

Taluknewsmedia.comಬೆಂಗಳೂರು, ಜುಲೈ 29:ನಗರದ ಹೆಬ್ಬಾಳ ಪ್ರದೇಶದ ಪ್ರೈಓವರ್ ಮೇಲೆ ಈ ಬೆಳಗ್ಗೆ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಲಾರಿ ಚಾಲಕನ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. ದಿನಾಂಕ 28.07.2025 ರಂದು ಬೆಳಗ್ಗೆ 7.00 ಗಂಟೆಯ ವೇಳೆಗೆ, ಕೋಬ್ರಾ ಕರ್ತವ್ಯದಲ್ಲಿ ಗಸ್ತು ಮಾಡುತ್ತಿದ್ದ ಠಾಣಾ ಸಿಬ್ಬಂದಿ ಹೆಬ್ಬಾಳ ಪ್ರೈಓವರ್ ಕಡೆಗೆ ಸಾಗುತ್ತಿದ್ದ ಸಂದರ್ಭ, ಲಾರಿ ವಾಹನ ಸಂಖ್ಯೆ HR-55-AG-1073 ಅನ್ನು ಮಧ್ಯ ರಸ್ತೆಯಲ್ಲಿ ನಿಲ್ಲಿಸಲಾಗಿದ್ದು, ಇದರಿಂದ ವಾಹನಗಳ ಸಂಚಾರಕ್ಕೂ ಹಾಗೂ ಸಾರ್ವಜನಿಕರ ಓಡಾಟಕ್ಕೂ ತೀವ್ರ ತೊಂದರೆಯುಂಟಾಗಿತ್ತು. ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಲಾರಿ ಚಾಲಕನನ್ನು ವಿಚಾರಿಸಿದಾಗ, ತನ್ನ ಹೆಸರು ತಾಹೀರ್ ಬಿನ್ ಜಲೇಬ್ ಖಾನ್ (34) ಎಂದು ತಿಳಿಸಿದ್ದು, ಹರಿಯಾಣದ ಪಾಲ್ಮಾಲ್ ಜಿಲ್ಲೆಯ ರಾಮಗಂಜ್ ಬಜಾರ್ ನ ನಿವಾಸಿಯಾಗಿದ್ದಾನೆ. ಚಾಲಕನ ವರ್ತನೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲಿಯೇ ಲಾರಿಗೆ ದಂಡ ವಿಧಿಸಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಚಾಲಕನ…

ಮುಂದೆ ಓದಿ..
ಸುದ್ದಿ 

ಫೇಕ್ ಫೋಟೋ ಆಧಾರವಾಗಿ ಬೆದರಿಕೆ – 60 ಲಕ್ಷ ರೂಪಾಯಿ ವಂಚನೆ ಪ್ರಕರಣ ದಾಖಲಾದ್ಮೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 30:ಯುವಕನ ಮಾರ್ಪಡ್ (Morpped) ಫೋಟೋವನ್ನು ಇನ್‌ಸ್ಟಾಗ್ರಾಂ ಮೂಲಕ ಹರಡಿ, ಅವರ ಪೋಷಕರನ್ನು ಬೆದರಿಸಿ ಸುಮಾರು 60 ಲಕ್ಷ ರೂಪಾಯಿ ವಂಚಿಸಿದ ಗಂಭೀರ ಪ್ರಕರಣ ಬೆಂಗಳೂರಿನ ಯಲಹಂಕ ಉಪನಗರ ಠಾಣೆಯಲ್ಲಿ ದಾಖಲಾಗಿದೆ. ಲವಿಕ್‌ ಅವರ ಸ್ನೇಹಿತ ದೇವರಾಜ್ ಮೂಲಕ, ಚಿನ್ಮಯ್ ಎಂಬಾತನು ಲವಿಕ್‌ನ ಮಾರ್ಪಡ್ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಗೆ ಕಳುಹಿಸಿದ್ದಾನೆ. ಈ ಕುರಿತು ಸ್ಪಷ್ಟನೆ ಪಡೆಯಲು ಪಿರ್ಯಾದಿದಾರರು ಚಿನ್ಮಯ್‌ನ್ನು ವಿಚಾರಿಸಿದಾಗ, ಚಿನ್ಮಯ್‌ನ ಅಣ್ಣ ಜಗದೀಶ್ ಮತ್ತು ದೇವರಾಜ್‌ ಅವರು ಪಿರ್ಯಾದಿದಾರರ ಮೇಲೆ ಬಲ ಹಾಕಿ ಹಲವಾರು ಬಾರಿ ಮಾತುಕತೆ ನಡೆಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಜಗದೀಶ್‌ ಅವರು ವಕೀಲರ ಮೂಲಕ ಪ್ರಕರಣ ಬಗೆಹರಿಸಿಕೊಡುತ್ತೇನೆ ಎಂದು ಹೇಳಿ, 20 ಲಕ್ಷ ರೂ. ವಕೀಲರ ಪೀಸಾಗಿ ಕೇಳಿದ್ದಾರೆ. ಬಳಿಕ ಫೋಟೋ ಪ್ರಕರಣವನ್ನು NDPS (ಮಾದಕ ವಸ್ತು ನಿರೋಧಕ ಕಾಯಿದೆ) ಪ್ರಕರಣವನ್ನಾಗಿ ಬದಲಾಯಿಸುವುದಾಗಿ ಬೆದರಿಸಿ, “ನಿನ್ನ ಮಗನನ್ನು ಜೈಲಿಗೆ ಕಳುಹಿಸುತ್ತೇನೆ” ಎಂಬ…

ಮುಂದೆ ಓದಿ..
ಸುದ್ದಿ 

ಆಸ್ತಿ ಪ್ರಕರಣದಲ್ಲಿ ಹಲ್ಲೆ: ನ್ಯಾಯಾಲಯ ಆದೇಶದ ಬಳಿಕ ತೀವ್ರ ವಾಗ್ಮಿತೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 30, 2025:ನಗರದ ಮಾನ್ಯ ಪೊಲೀಸ್ ಮೇಲಾಧಿಕಾರಿಗಳ ಕಚೇರಿಗೆ ಸಲ್ಲಿಸಲಾದ ಅರ್ಜಿಯ ಆಧಾರದ ಮೇಲೆ, ಶ್ರೀ ಜಯಪ್ರಕಾಶ್, ಸೌಮ್ಮ, ಮತ್ತು ವಿಷ್ಣು ವೈಷ್ಣವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಶಿವು ವಿ ಆರ್ ಅವರು ನೀಡಿದ ಮಾಹಿತಿಯಂತೆ, ಈ ಮೂವರು ಸಂಬಂಧಿತ ಖಾತೆ ಸಂಖ್ಯೆಯ ಮೂಲಕ ಲಕ್ಷಾಂತರ ರೂಪಾಯಿಗಳ ಆಸ್ತಿ ವ್ಯವಹಾರ ನಡೆಸಿದ್ದು, ಇದನ್ನು ಸಂಬಂಧಪಟ್ಟ ನ್ಯಾಯಾಲಯವು ಪರಿಶೀಲಿಸಿ, ಅಂತಿಮ ಆದೇಶವನ್ನು 27 ಜೂನ್ 2025 ರಂದು ಹೊರಡಿಸಿತ್ತು. ನ್ಯಾಯಾಲಯದ ಆದೇಶದಂತೆ, ಯಲಹಂಕ ಪೊಲೀಸ್ ಸಹಾಯದಿಂದ ವಿವಾದಿತ ಆಸ್ತಿ ವಶಪಡಿಸಿಕೊಳ್ಳಲಾಯಿತು. ಆದರೆ, 5 ಜುಲೈ 2025 ರಂದು ಬೆಳಗ್ಗೆ 11 ಗಂಟೆಗೆ, ಜಯಪ್ರಕಾಶ್, ವೆಂಕಟಪ್ಪ, ರತ್ನಮ್ಮ, ಸೌಮ್ಮ ಮತ್ತು ವಿಷ್ಣು ವೈಷ್ಣವ್ ಆಸ್ತಿಗೆ ಬಂದು, ಸೆಕ್ಯುರಿಟಿ ಗಾರ್ಡ್ನ ಮೇಲೆ ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ಬೈದು, ದೂರುದಾರರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ,…

ಮುಂದೆ ಓದಿ..