ಸುದ್ದಿ 

ಬೆಂಗಳೂರು ನಗರದಲ್ಲಿ ಬೈಕ್ ಕಳ್ಳತನ – 2017ರ ಹೊಂಡಾ ಡಿಯೋ ಕಳವು

Taluknewsmedia.com

Taluknewsmedia.comಬೆಂಗಳೂರು, ಜುಲೈ 7: ನಗರದಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳ್ಳತನದ ಘಟನೆ ನಡೆದಿದೆ. 2017ರ ಮಾದರಿಯ ಹೊಂಡಾ ಡಿಯೋ ಬೈಕ್‌ನ್ನು ಮನೆಯ ಮುಂದಿನಿಂದ ಕಳ್ಳರು ಕಳವು ಮಾಡಿರುವ ಘಟನೆ ದಿನ ಬೆಳಕಿಗೆ ಬಂದಿದೆ. ಶ್ವೇತಾ ರವರು ತಮ್ಮ ದಿನನಿತ್ಯದ ಪ್ರಯಾಣಕ್ಕೆ ಬಳಸುತ್ತಿದ್ದ ಹೊಂಡಾ ಡಿಯೋ (ನೋಂದಣಿ ಸಂಖ್ಯೆ KA-04-JN-3035) ಬೈಕ್‌ನ್ನು ಜುಲೈ 2, 2025 ರಂದು ರಾತ್ರಿ ಸುಮಾರು 10 ಗಂಟೆಗೆ ತಮ್ಮ ನಿವಾಸದ ಮುಂಭಾಗ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ, ಜುಲೈ 3ರಂದು ಬೆಳಿಗ್ಗೆ 8:30 ಸಮಯದಲ್ಲಿ ಕೆಲಸಕ್ಕೆ ಹೊರಡುವಾಗ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣಿಸದೇ ಹೋದ ಬಗ್ಗೆ ತಿಳಿದುಬಂದಿದೆ. ಬೈಕ್ ಸುತ್ತಮುತ್ತ ಎಲ್ಲೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆ, ಬೈಕ್ ಕಳ್ಳತನವಾಗಿರುವ ಶಂಕೆಯೊಂದಿಗೆ ಶ್ವೇತಾರವರು ಸೋಲದೇವನ ಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ವಾಹನದ ಮಾಹಿತಿ: ಮಾದರಿ: Honda Dio ನೋಂದಣಿ ಸಂಖ್ಯೆ: KA-04-JN-3035 ಚಾಸಿಸ್…

ಮುಂದೆ ಓದಿ..
ಸುದ್ದಿ 

ಶ್ರೀಶೈಲ ಹೋಟೆಲ್‌ ಬುಕಿಂಗ್ ನೆಪದಲ್ಲಿ 77,600 ರೂ. ಮೋಸ – ಬೆಂಗಳೂರಿನಲ್ಲಿ ವ್ಯಕ್ತಿಯಿಂದ ದೂರು

Taluknewsmedia.com

Taluknewsmedia.comಬೆಂಗಳೂರು, 7 ಮೇ 2025: ನಗರ ನಿವಾಸಿಯೊಬ್ಬರು ಶ್ರೀಶೈಲದ ಹೋಟೆಲ್‌ನಲ್ಲಿ ರೂಮ್ ಬುಕಿಂಗ್ ಮಾಡುವ ನೆಪದಲ್ಲಿ 77,600 ರೂಪಾಯಿ ಮೊತ್ತವನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಜಯನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀ ರಮೇಶ್ ಅವರು ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆ (ಖಾತೆ ಸಂಖ್ಯೆ: 914010057499191) ಬಳಸಿ, ದಿನಾಂಕ: 22.05.2025 ರಂದು ಆಂಧ್ರ ಪ್ರದೇಶದ ಶ್ರೀಶೈಲಾ ದೇವಸ್ಥಾನದ ಬಳಿಯ ಹರಿತಾ ಹೋಟೆಲ್ ಅಂಡ್ ರೆಸಾರ್ಟ್‌ನಲ್ಲಿ ರೂಮ್‌ ಬುಕಿಂಗ್ ಮಾಡಲು ಪ್ರಯತ್ನಿಸಿದರು. ಹೋಟೆಲ್ ಸಿಬ್ಬಂದಿಯಾಗಿ ಪರಿಚಯಿಸಿಕೊಂಡ ವ್ಯಕ್ತಿಗಳು ಫೋನ್‌ಪೇ ಮೂಲಕ ಪಾವತಿ ಮಾಡಲು ಆಗ್ರಹಿಸಿದ್ದು, ನಂಬಿದ ರಮೇಶ್ ಅವರು ಹಂತ ಹಂತವಾಗಿ ಒಟ್ಟು ₹77,600 ಹಣವನ್ನು ವರ್ಗಾಯಿಸಿದರು. ಆದರೆ ನಂತರ ಯಾವುದೇ ರೂಮ್‌ ಕಾನ್ಫರ್ಮೇಶನ್ ದೊರಕದೇ ಹೋದಿದ್ದು, ಹೋಟೆಲ್ ಸಂಪರ್ಕಕ್ಕೂ ಸಿಗದೆ ಮೋಸವಾಗಿ ಹೋಗಿದ್ದಾರೆ ಎಂದು ಪಿರ್ಯಾದಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಸಂಜಯ ನಗರ…

ಮುಂದೆ ಓದಿ..
ಸುದ್ದಿ 

ನಕಲಿ ಬ್ರಾಂಡ್ ಬಟ್ಟೆ ಮಾರಾಟ – ಕಂಪನಿಯಿಂದ ಕಾನೂನು ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ7,2025: ಪ್ರಸಿದ್ಧ ಫ್ಯಾಷನ್ ಬ್ರಾಂಡ್‌ಗಳಾದ ‘ಇಂಡಿಯನ್ ಗ್ಯಾರೇಜ್’ ಮತ್ತು ‘ಹಾರ್ಡ್ ಸೋಡಾ’ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಅಂಗಡಿಯ ವಿರುದ್ಧ ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶ್ರೀ ಸುರೇಶ್ ಕುಮಾರ್ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿರುವುದಂತೆ, ಅವರು ಬೆಂಗಳೂರಿನ ಸ್ಟೈಲ್ರ್ಸ್ ಲೈಫ್‌ಸ್ಟೈಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಚೀಫ್ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕಂಪನಿಗೆ ‘ಇಂಡಿಯನ್ ಗ್ಯಾರೇಜ್’ ಮತ್ತು ‘ಹಾರ್ಡ್ ಸೋಡಾ’ ಎಂಬ ಬಟ್ಟೆ ಬ್ರಾಂಡ್‌ಗಳ ಮಾಲೀಕತ್ವವಿದೆ. ದಿನಾಂಕ 24/06/2025 ರಂದು, ಸಂಜಯನಗರ ಮುಖ್ಯರಸ್ತೆಯಲ್ಲಿರುವ ಅರುಣ್ ಅಡ್ಡ ಎಂಬ ಬಟ್ಟೆ ಅಂಗಡಿಯಲ್ಲಿ ಕಂಪನಿಯ ಬ್ರಾಂಡ್ ಹೆಸರುಗಳನ್ನು ನಕಲು ಮಾಡಿ ಬಟ್ಟೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಅವರಿಗೆ ಲಭಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕಂಪನಿಯಿಂದ ಅಧಿಕೃತ ನಿರ್ದೇಶನ ನೀಡಲಾಗಿತ್ತು. ದಿನಾಂಕ 25/06/2025 ರಂದು ಮಧ್ಯಾಹ್ನ ಸುಮಾರು 12:30ರ…

ಮುಂದೆ ಓದಿ..
ಸುದ್ದಿ 

ಜಕ್ಕೂರಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ: ರಸ್ತೆ ಮಧ್ಯೆ ನಿಲ್ಲಿಸಿದ್ದ ಕಾರು ವಶಕ್ಕೆ

Taluknewsmedia.com

Taluknewsmedia.comಬೆಂಗಳೂರು, ಜುಲೈ 7, 2025:ಜಕ್ಕೂರಿನ ಕೆ.ವಿ ಜಯರಾಮ್ ರಸ್ತೆಯಲ್ಲಿ ಒಂದು ಕಾರು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವಂತೆ ನಿಲ್ಲಿಸಲಾಗಿದ್ದು, ಪೊಲೀಸರು ಆ ವಾಹನವನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ದಿನಾಂಕ 04.07.2025 ರಂದು ಸಂಜೆ ಸುಮಾರು 6 ಗಂಟೆಯ ಸುಮಾರಿಗೆ, ಹೆಡ್ ಕಾನ್ಸ್‌ಟೆಬಲ್ ಗುರುಪ್ರಸಾದ್ ಎಂ.ಆರ್ (ಎಚ್.ಸಿ 12280) ಹಾಗೂ ಉಪ ನಿರೀಕ್ಷಕ ಶ್ರೀ ಸುರೇಶ್ ಎಲ್ ಅವರು ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ, ಕೃಷ್ಣರಾಜ ಸಾಗರ ಹೋಟೆಲ್ ಬಳಿ, ಲಿಕ್ಕರ್ ಟಾಪ್ ಎಂ.ಆರ್.ಪಿ ಬಾರ್ ಎದುರು KA-03-NA-3253 ನಂಬರ್‌ನ ಕಾರು ರಸ್ತೆಯಲ್ಲೇ ನಿಲ್ಲಿಸಲಾಗಿದ್ದು, ಇದು ವಾಹನಗಳ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆಯುಂಟುಮಾಡುತ್ತಿರುವುದು ಗಮನಕ್ಕೆ ಬಂತು. ಪೊಲೀಸರು ಸ್ಥಳದಲ್ಲೇ ವಾಹನದ ಚಾಲಕನ ಮಾಹಿತಿ ತಿಳಿದುಕೊಳ್ಳಲು ಯತ್ನಿಸಿದರೂ ಯಾವುದೇ ವಿವರ ಸಿಕ್ಕಿಲ್ಲ. ಇದರಿಂದ ಪೊಲೀಸರು ತಕ್ಷಣ ಕಾರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು, ಚಾಲಕನ ವಿರುದ್ಧ ಕಾನೂನು ಕ್ರಮ…

ಮುಂದೆ ಓದಿ..
ಸುದ್ದಿ 

ಬೈಕ್ ಕಳವು ಪ್ರಕರಣ: ವಾಡಿಕೆದಾರನ ದ್ವಿಚಕ್ರ ವಾಹನ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು, 7 ಮೇ 2025:ನಗರದ ಸೀತಪ್ಪ ಲೇಔಟ್ ಪ್ರದೇಶದಲ್ಲಿ ದ್ವಿಚಕ್ರ ವಾಹನ ಕಳವುಗೆ ಸಂಬಂಧಿಸಿದ ಪ್ರಕರಣವೊಂದು ದಾಖಲಾಗಿದೆ. ಸೋನು ಬಿಗಿನ್ ತಮ್ಮ ದೂರಿನಲ್ಲಿ ಅವರು ಬಾಡಿಗೆ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದು, ತಮ್ಮ ಹೆಸರಿನಲ್ಲಿ ಖರೀದಿಸಿದ 2022ನೇ ಸಾಲಿನ SPLENDOR+ ಮೋಟಾರ್‌ಸೈಕಲ್ (ರಿಜಿಸ್ಟ್ರೇಷನ್ ಸಂಖ್ಯೆ: KA04KJ6442) ಅನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ. ತಮ್ಮ ದೂರಿನಲ್ಲಿ, ದಿನಾಂಕ 31.05.2025 ರಂದು ಮಧ್ಯಾಹ್ನ 1 ಗಂಟೆಗೆ ಕೆಲಸಕ್ಕೆ ಹೋದ ಬಳಿಕ, ಅವರ ಜೊತೆಯಲ್ಲಿ ಕೆಲಸಮಾಡುವ ಮಟೋಲಿ ಎಂಬುವವರ ಮನೆ (ಸೀತಪ್ಪ ಲೇಔಟ್, 3ನೇ ಕ್ರಾಸ್, ಮನೆ ನಂ.43) ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಮಧ್ಯಾಹ್ನ 3 ಗಂಟೆಗೆ ಬಂದು ನೋಡಿದಾಗ, ವಾಹನ ಹತ್ತಿರ ಕಾಣಿಸಿಕೊಂಡಿಲ್ಲ. ಅವರು ವಾಹನವನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ಕಳವುಗೊಂಡ ವಾಹನದ ವಿವರಗಳು ಹೀಗಿವೆ:ಮಾಡೆಲ್: 06/2022 SPLENDOR+ 13S DR.CST.SSಚೆಸಿಸ್…

ಮುಂದೆ ಓದಿ..
ಸುದ್ದಿ 

ಕೆ ಆರ್ ಪಕ್ಷ ಇದುವರೆಗೂ ಮಾಡಿದ್ದು ಕಾನೂನಿನ ವಿರುದ್ಧ ಹೋರಾಟವೇ.

Taluknewsmedia.com

Taluknewsmedia.comಆತ್ಮೀಯ ಬಂಧುಗಳೇ, KRS ಪಕ್ಷದ ವಿರುದ್ಧ ಮತ್ತು ಪಕ್ಷದ ಕಾರ್ಯಕರ್ತ/ಪದಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡುವ, ಸುಳ್ಳುಕೇಸುಗಳನ್ನು ದಾಖಲಿಸುವ, ಸಾರ್ವಜನಿಕವಾಗಿ ಅವಮಾನಿಸುವ ಷಡ್ಯಂತ್ರಗಳು ಕೆಲವರಿಂದ ರೂಪುಗೊಳ್ಳುತ್ತಿವೆ ಎನ್ನುವ ಖಚಿತ ಮಾಹಿತಿಗಳು ನಮಗೆ ದೊರಕಿವೆ. ನೀತಿಭ್ರಷ್ಟ, ಅಯೊಗ್ಯ, ಜನವಿರೋಧಿ ರಾಜಕಾರಣಿಗಳು ಮತ್ತು ಭ್ರಷ್ಟ, ಅದಕ್ಷ, ಲಂಚಕೋರ ಅಧಿಕಾರಿಗಳು ಈ ಪಿತೂರಿಗಳ ಭಾಗವಾಗಿರುವುದು ಹಾಗೂ ವಿವಿಧ ಸರ್ಕಾರಿ ಅಂಗಗಳನ್ನು ಮತ್ತು ಮಾಧ್ಯಮಗಳನ್ನು ಅದಕ್ಕಾಗಿ ಬಳಸಲಿರುವುದು ನಮಗೆ ಗೋಚರವಾಗುತ್ತಿದೆ. ಈ ಹಿನ್ನೆಲೆಯಲ್ಲಿ KRS ಪಕ್ಷದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸೈನಿಕರಿಗೆ ಸರ್ಕಾರಿ ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ವಿಚಾರವಾಗಿ ನಾನು ಇಲ್ಲಿ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿದ್ದೇನೆ. ಪಕ್ಷದ ಎಲ್ಲಾ ಶಿಸ್ತಿನ ಸಿಪಾಯಿಗಳು ದಯವಿಟ್ಟು ಇದನ್ನು ಗಮನಿಸಬೇಕು ಮತ್ತು ಪಾಲಿಸಬೇಕು ಎಂದು ಈ ಮೂಲಕ ಕೋರುತ್ತೇನೆ. ? ನಿಮ್ಮ ನೆಂಟರು ಅಥವ ಆಪ್ತರಲ್ಲದ ಯಾವುದೇ ಸರ್ಕಾರಿ ಅಧಿಕಾರಿಯನ್ನು ಸಾರ್ವಜನಿಕ ಕೆಲಸಕ್ಕಾಗಿ ಖಾಸಗಿಯಾಗಿ ಭೇಟಿ…

ಮುಂದೆ ಓದಿ..
ಸುದ್ದಿ 

ಅಗ್ರಹಾರ್ ಲೇಔಟ್‌ನಲ್ಲಿ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನ

Taluknewsmedia.com

Taluknewsmedia.com ಬೆಂಗಳೂರು, ಜುಲೈ 6 2025 ನಗರದ ಅಗ್ರಹಾರ್ ಲೇಔಟ್ ಪ್ರದೇಶದಲ್ಲಿ ವಾಹನ ಕಳ್ಳತನದ ಪ್ರಕರಣ ವರದಿಯಾಗಿದೆ. ಕುವೆಂಪು ಲೇಔಟ್ 2ನೇ ಮುಖ್ಯ ರಸ್ತೆಯ ಮನೆಯೊಂದರ ಎದುರು ನಿಲ್ಲಿಸಲಾಗಿದ್ದ ಬೈಕ್ ಅನ್ನು ಗುರುತು ತಿಳಿಯದ ಕಳ್ಳರು ಕದ್ದೊಯ್ದಿದ್ದಾರೆ.ಸಯಾದ್ ನಸೀರ್ ಅಹ್ಮದ್ ಅವರ ಮಾಹಿತಿ ಪ್ರಕಾರ, ಅವರು 27/06/2025 ರಂದು ಸಂಜೆ 5 ಗಂಟೆಗೆ ತಮ್ಮ ಮನೆ ಮುಂದೆ ಕೆಎ 50 ಆರ್ 4438 ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ಲಸ್ (ಮಾದರಿ 2013) ಬೈಕ್ ನಿಲ್ಲಿಸಿದ್ದರು. ಆದರೆ, ಮರು ದಿನ ಬೆಳಿಗ್ಗೆ 7 ಗಂಟೆಗೆ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣಿಸದಿರುವುದನ್ನು ಅವರು ಗಮನಿಸಿದರು.ಸಯಾದ್ ನಜೀರ್ ಅಹ್ಮದ್ ಅವರು ಸುತ್ತಮುತ್ತಲೆಲ್ಲಾ ಹುಡುಕಿದರೂ ವಾಹನ ಪತ್ತೆಯಾಗದೆ ಇರುವುದರಿಂದ ಅವರು ತಡವಾಗಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಯಾರು ಕಳ್ಳರು ಅಂತಹದಾಗಿ ಶಂಕಿಸಿ ಕಾನೂನು ಕ್ರಮ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ನಿವೃತ್ತ ಸೈನಿಕರ ಆಸ್ತಿಯ ಮೇಲೆ ವಂಚನೆ: ಕುಟುಂಬದ ದೂರಿನ ಮೇಲೆ ತನಿಖೆ ಪ್ರಾರಂಭ

Taluknewsmedia.com

Taluknewsmedia.comಬೆಂಗಳೂರು, ಜುಲೈ 6 2025 ಯಲಹಂಕದಲ್ಲಿ ನಿವೃತ್ತ ಭಾರತೀಯ ಸೇನಾ ಯೋಧನಿಗೆ ಸರ್ಕಾರದಿಂದ ಮಂಜೂರಾದ ನಿವೇಶನವನ್ನು ಸುಳ್ಳು ದಾಖಲೆಗಳ ಆಧಾರದಲ್ಲಿ ವಂಚನೆ ಮೂಲಕ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಿವೃತ್ತ ಯೋಧ ರಾಮಯ್ಯ ಅವರ ಪುತ್ರಿ ರಾಮಮ್ಮಣಿ ಕೆ.ಆರ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ತನಿಖೆ ಆರಂಭವಾಗಿದೆ.ದೂರಿನ ಪ್ರಕಾರ, ರಾಮಯ್ಯ ಅವರು ಭಾರತೀಯ ಸೇನೆಯಿಂದ ನಿವೃತ್ತರಾದ ನಂತರ ಸರ್ಕಾರವು ಅವರನ್ನು ಗೌರವಿಸಿ ಯಲಹಂಕದ ಸರ್ವೆ ನಂ. 24 ರಲ್ಲಿ ಇರುವ ನಿವೇಶನ ಸಂಖ್ಯೆ 136 ಅನ್ನು ಉಚಿತವಾಗಿ ನೀಡಿತ್ತು. ಅವರು ಈ ಆಸ್ತಿಯಲ್ಲಿ 20×30 ಅಡಿ ಗಾತ್ರದ ಮನೆ ಕಟ್ಟಿಸಿಕೊಂಡು ಕುಟುಂಬದೊಂದಿಗೆ ವಾಸವಿದ್ದರು. ರಾಮಯ್ಯ ಅವರ ಮೊದಲ ಪತ್ನಿಯಾದ ಚನ್ನಕೃಷ್ಣಮ್ಮ ಅವರಿಂದ ನಾಲ್ಕು ಮಕ್ಕಳಿದ್ದು, ಇಬ್ಬರು ಈಗ ಲೆಟ್ ಆಗಿದ್ದಾರೆ. ಎರಡನೇ ಪತ್ನಿ ರುಕ್ಮಿಣಮ್ಮ ಅವರು ಮಕ್ಕಳಿಲ್ಲದೆ ನಿಧನರಾದರು.ಅವರ ಮಗಳಾದ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಅಮೃತಹಳ್ಳಿಯಿಂದ 19 ವರ್ಷದ ಯುವತಿ ಕಾಣೆ – ಕುಟುಂಬದವರು ಕಳವಳದಲ್ಲಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 6 2025: ನಗರದ ಅಮೃತಹಳ್ಳಿ ಹೊರವಲಯದ ನಿವಾಸಿ ಪಾವನಿ ಕೆ.ಎನ್. ಎಂಬ 19 ವರ್ಷದ ಯುವತಿ ಕಳೆದ ಜುಲೈ 4 ರಂದು ಬೆಳಿಗ್ಗೆ ಮನೆಯಿಂದ ಹೊರಡಿದ ಬಳಿಕ ಮರಳದೇ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಯುವತಿಯ ತಂದೆ ನಾಗಮೂರ್ತಿ ಅವರು ಸ್ಥಳೀಯ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಗಮೂರ್ತಿ ಅವರ ದೂರಿನ ಪ್ರಕಾರ, ಪಾವನಿ ಕೆ.ಎನ್. ಅವರು ಜುಲೈ 4 ರಂದು ಬೆಳಿಗ್ಗೆ ಸುಮಾರು 11:00 ಗಂಟೆಗೆ “ಹೊರಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಅಷ್ಟರಲ್ಲಿ ಸಂಜೆವಾಯಿತು, ತಾಯಂದಿರು, ಕುಟುಂಬದವರು ನಿರೀಕ್ಷಿಸಿ ಕಾಯುತ್ತಿದ್ದರೂ ಆಕೆ ಮನೆಗೆ ಮರಳಲಿಲ್ಲ. ಎಲ್ಲಾ ಸನ್ನಿಹಿತಸ್ಥಳಗಳಲ್ಲಿ ಹುಡುಕಿದರೂ ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಗದೆ ಇದ್ದ ಕಾರಣ, ಪೋಷಕರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಕಾಣೆಯಾದ ಯುವತಿಯ ವಿವರಗಳು:ಹೆಸರು: ಪಾವನಿ…

ಮುಂದೆ ಓದಿ..
ಸುದ್ದಿ 

ಜಮೀನಿನ ಹಕ್ಕು ಸಂಬಂಧದ ನಕಲಿ ದಾಖಲೆ: ತಮ್ಮಂದಿರಿಂದಲೇ ರೈತರಿಗೆ ಮೋಸ

Taluknewsmedia.com

Taluknewsmedia.com! ಬೆಂಗಳೂರು, ಜುಲೈ 6. 2025 ಹೆಸರಘಟ್ಟ ಹೋಬಳಿಯ ಕಕ್ಕೆಹಳ್ಳಿ ಗ್ರಾಮದಲ್ಲಿ ಸಂಬಂಧಿಕರಿಂದಲೇ ಜಮೀನಿನ ಹಕ್ಕು ಸಂಬಂಧಿತ ದಾಖಲೆಗಳನ್ನು ನಕಲಿ ಮಾಡಿ ಮೋಸ ಮಾಡಿದ ಆರೋಪದ ಮೇಲೆ ನಾಲ್ವರು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚಿಕ್ಕೇಗೌಡ ಅವರು ರಾಜನಕುಂಟೆ ಪೊಲೀಸ್ ಠಾಣೆಗೆ ಮದ್ಯಾಹ್ನ 12:45ಕ್ಕೆ ಹಾಜರಾಗಿ ನೀಡಿದ ದೂರಿನ ಪ್ರಕಾರ, ಅವರು ರೈತರಾಗಿದ್ದು, ತಮ್ಮ ತಂದೆ ಲೇಟ್ ಹನುಮಯ್ಯ ಮತ್ತು ತಾಯಿ ಗಂಗಮ್ಮ ಅವರಿಗೆ ಐದು ಮಕ್ಕಳು ಇದ್ದರು. ಅವರ ತಮ್ಮ ಮಂಜುನಾಥ್, ನಾಗರಾಜ್ ಮತ್ತು ತಂಗಿ ಸುನಂದ ಸೇರಿ, ಖಾಲಿ ಪತ್ರದಲ್ಲಿ ಸಹಿ ಹಾಕಿಸಿಕೊಂಡು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಕಲಿ ಜಿಪಿಎ ರೂಪಿಸಿ ಜಮೀನಿನ ವರ್ಗಾವಣೆಚಿಕ್ಕೇಗೌಡರ ಪ್ರಕಾರ, ಅವರು ಓದಿಲ್ಲದ ಖಾಲಿ ಕಾಗದದಲ್ಲಿ ಸಹಿ ಹಾಕಿದ ನಂತರ, ಮಂಜುನಾಥ್ ಹಾಗೂ ಟಿ.ಎಚ್. ನಾಗರಾಜ್ ಅವರು ನಕಲಿ ಜಿಪಿಎ ಸೃಷ್ಟಿಸಿ 2025ರ ಮಾರ್ಚ್ 11ರಂದು ತಾಯಿ ಗಂಗಮ್ಮರ ಸಹಿ ಎಂದು…

ಮುಂದೆ ಓದಿ..