ರಸ್ತೆ ಅಪಘಾತ: ಶಿಕ್ಷಕಿ ಮತ್ತು ಸಹೋದ್ಯೋಗಿಗೆ ತೀವ್ರ ಗಾಯ – ಲಾರಿ ಚಾಲಕರ ವಿರುದ್ಧ ಪ್ರಕರಣ ದಾಖಲು
Taluknewsmedia.comಚಿಕ್ಕಬಿದಿರುಕಲ್ಲು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಸ್.ಎನ್.ಎಸ್ ಪಬ್ಲಿಕ್ ಶಾಲೆಯ ಶಿಕ್ಷಕಿ ಮತ್ತು ಸಹೋದ್ಯೋಗಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ರಾ.ಹೆ. 4ರ 8ನೇ ಮೈಲಿನ ಶೋಭಾ ಅಪಾರ್ಟ್ಮೆಂಟ್ ಎದುರು ಸಂಭವಿಸಿದೆ. ಶ್ರೀಮತಿ ಆಶಾರಾಣಿ ಎಚ್.ಸಿ (36), ನಂದಿನಿ ಲೇಔಟ್ 4ನೇ ಬ್ಲಾಕ್ ನಿವಾಸಿ ಹಾಗೂ ಶಾಲಾ ಶಿಕ್ಷಕಿ, ಅವರು ತಮ್ಮ ಯಮಹಾ ಸ್ಕೂಟರ್ (ನಂ. KA-03-HT-0464)ನಲ್ಲಿ ಸಹೋದ್ಯೋಗಿ ಆಯಾ ಶಾರಧಾ (45) ಅವರನ್ನು ಹಿಂಬದಿ ಸವಾರಳಾಗಿ ಕೂರಿಸಿಕೊಂಡು, ಸರ್ಕಾರಿ ಪಠ್ಯಪುಸ್ತಕ ತರಲೆಂದು ಚಿಕ್ಕಬಿದಿರುಕಲ್ಲು ಸರ್ಕಾರಿ ಪ್ರೌಢಶಾಲೆಗೆ ತೆರಳುತ್ತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಶೋಭಾ ಅಪಾರ್ಟ್ಮೆಂಟ್ ಎದುರು ಸವಾರಿಯಲ್ಲಿದ್ದಾಗ, ಹಿಂದಿನಿಂದ ಅತೀ ವೇಗವಾಗಿ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ (ನಂ KA-01-AL-6959) ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಈ ಝಟ್ಟಿನಿಂದ…
ಮುಂದೆ ಓದಿ..
