ಸುದ್ದಿ 

ಗಂಗಸಮುದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ: ಅಂಗಡಿ ಮಾಲೀಕನ ವಿರುದ್ಧ ಕಾನೂನು ಕ್ರಮ

Taluknewsmedia.com

Taluknewsmedia.comಹೊಣಕೆರೆ ಹೋಬಳಿ ವ್ಯಾಪ್ತಿಯ ಗಂಗಸಮುದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟ ಅಂಗಡಿ ಮಾಲೀಕನ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆಗೆ ಬಂದ ಖಚಿತ ಮಾಹಿತಿಯ ಆಧಾರದಲ್ಲಿ ಪಿಎಸ್‌ಐ ಅವರು ಸಿಪಿಸಿ ಪ್ರದೀಪ್, ಸಿಪಿಸಿ ಪ್ರಕಾಶ್ ಹಾಗೂ ಚಾಲಕ ಚೇತನ ಅವರೊಂದಿಗೆ ಗಂಗಸಮುದ್ರಕ್ಕೆ ತೆರಳಿದರು. ಮಾರ್ಗಮಧ್ಯೆ ಇಬ್ಬರು ಪಂಚಾಯತ್ ಸದಸ್ಯರನ್ನು ಕೂಡ ಕರೆದುಕೊಂಡು ತೆರಳಿದ ಪೊಲೀಸರು ಬಾಬು ಪ್ರಾವಿಜನ್ ಸ್ಟೋರ್ ಬಳಿ ದಾಳಿ ನಡೆಸಿದರು. ದಾಳಿಯ ವೇಳೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಮಂದಿ ಮದ್ಯಪಾನ ಮಾಡುತ್ತಿರುವುದನ್ನು ಕಂಡು, ಆ ವ್ಯಕ್ತಿಗಳು ಸ್ಥಳದಿಂದ ಓಡಿ ಹೋಗಿದರು. ನಂತರ ಅಂಗಡಿಯಲ್ಲಿ ಹಾಜರಿದ್ದ ಮಾಲೀಕ ಲೋಕೇಶ್ ಜಿ.ಡಿ (28) ಅವರನ್ನು ವಿಚಾರಿಸಲಾಯಿತು. ಅವರು ಮದ್ಯಪಾನಕ್ಕೆ ಸ್ಥಳ ನೀಡಿದ್ದನ್ನು ಒಪ್ಪಿಕೊಂಡು, ಮದ್ಯಪಾನ ಮಾಡಿದವರು ಯಾರು ಎಂಬುದು ಅವರಿಗೆ ತಿಳಿಯದು ಎಂದು ತಿಳಿಸಿದರು. ಪೋಲೀಸರು ಸ್ಥಳ ಪರಿಶೀಲನೆ…

ಮುಂದೆ ಓದಿ..
ಸುದ್ದಿ 

ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 11 ಹಸುವಿನ ಕರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪಿಗಳು ಬಂಧನ

Taluknewsmedia.com

Taluknewsmedia.comದೇವಲಾಪುರ ಹೋಬಳಿಯ ಕುಂಟಾನಕೊಪ್ಪಲು ಗ್ರಾಮ ಗೇಟ್ ಬಳಿ ಸಂಭವಿಸಿದ ಕಾರು ಅಪಘಾತದಿಂದ ಹಸುವಿನ ಕರುಗಳ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ನಾಗಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಾಗಮಂಗಲ ಕಡೆಯಿಂದ ಹುಲಿಯೂರುದುರ್ಗ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು (ನಂ. ಕೆಎ 01 ಎಂಡಿ 9542) ನಿಗದಿತ ವೇಗ ಮೀರಿ ಅಜಾಗರೂಕತೆಯಿಂದ ಚಾಲನೆ ಮಾಡಲಾಗಿದ್ದು, ಕುಂಟಾನಕೊಪ್ಪಲು ಗೇಟ್ ಬಳಿ ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆ ಕುರಿತು ಮಾಹಿತಿ ಪಡೆದ ನಾಗಮಂಗಲ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಜೆ ಅವರು ಠಾಣೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಕಾರಿನೊಳಗೆ ಸುಮಾರು ಒಂದು ತಿಂಗಳೊಳಗಿನ 11 ಹಸುವಿನ ಕರುಗಳನ್ನು ಪತ್ತೆಹಚ್ಚಲಾಯಿತು. ಈ ಕರುಗಳ ಬಾಯಿ ಮತ್ತು ಕಾಲುಗಳನ್ನು ದಾರಯಿಂದ ಕಟ್ಟಲಾಗಿದ್ದು, ಅವುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು. ಪೊಲೀಸರು ಸ್ಥಳದಲ್ಲಿದ್ದ ಇಬ್ಬರನ್ನು ಬಂಧಿಸಿದ್ದು, ಆರೋಪಿತರನ್ನು…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿ: ಎಮ್.ಡಿ.ಎಮ್.ಎ ಮಾದಕ ವಸ್ತು ವಶಪಡಿಕೆ – ಆರೋಪಿತರ ಬಂಧನ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 24: ದಿನಾಂಕ 22.06.2025 ರಂದು ಮಧ್ಯಾಹ್ನ 2-15 ಗಂಟೆ ಸುಮಾರಿಗೆ ಹುಬ್ಬಳ್ಳಿಯ ವಿದ್ಯಾನಗರದ ಕಲ್ಯಾಣನಗರದಲ್ಲಿರುವ ಗೋಲ್ಡನ್ ಸ್ಟಾರ್ ಅಪಾರ್ಟ್‌ಮೆಂಟ್‌ನ ಎಫ್-2 ಮನೆನಲ್ಲಿ ನಿಷೇಧಿತ ಮಾದಕ ವಸ್ತುವಿನ ಸಂಬಂಧ ಕಾರ್ಯಾಚರಣೆ ನಡೆಸಲಾಯಿತು.ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಆರೋಪಿತರು ಸಂಬಂಧಪಟ್ಟ ಸ್ಥಳದಲ್ಲಿ ನಿಷೇಧಿತ ಎಮ್.ಡಿ.ಎಮ್.ಎ ಮಾದಕ ವಸ್ತುವನ್ನು ತಮ್ಮ ವಶದಲ್ಲಿ ಇಟ್ಟುಕೊಂಡು ಸೇವನೆ ಮಾಡುವ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.ಫಿರ್ಯಾದಿದಾರರು ಹಾಗೂ ಸಿಬ್ಬಂದಿ ಸದಸ್ಯರು ಸೇರಿ ತಕ್ಷಣದ ದಾಳಿಯಲ್ಲಿ ಎಮ್.ಡಿ.ಎಮ್.ಎ ಮಾದಕ ವಸ್ತು ಒಟ್ಟು 43.08 ಗ್ರಾಂ ತೂಕದ ಮೊತ್ತ – ರೂ. 2,19,000/- ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿತರ ಬಳಿ ಇದ್ದ ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ.ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಪರವಾಗಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೀತಾ ಇದೆ. ವರದಿ : ವಿಜಯಕುಮಾರ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಯುವತಿ ಕಾಣೆಯಾಗಿರುವ ಪ್ರಕರಣ

Taluknewsmedia.com

Taluknewsmedia.comಹುಬ್ಬಳ್ಳಿ ನಗರದ ಅಕ್ಷಯ ಕ್ಲಾಸಿಕ್ ಅಪಾರ್ಟಮೆಂಟ್ ನಿವಾಸಿ ಯುವತಿ ಸ್ವಾತಿ (ವಯಸ್ಸು: 23), ವಿದ್ಯಾರ್ಥಿನಿ, ದಿನಾಂಕ 17-06-2025 ರಂದು ಸಂಜೆ 6-15 ಗಂಟೆಗೆ “ಹೊರಗೆ ಹೋಗಿ ಬರುತ್ತೇನೆ” ಎಂದು ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದು, ನಂತರದಿಂದ ಮನೆಗೆ ಮರಳದೇ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಸ್ವಾತಿಯ ತಂದೆ ಶಿವಕುಮಾರಸ್ವಾಮಿ ಹಿರೇಮಠ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಕಾಣೆಯಾದ ಸ್ಥಳ, ಹೊಗುವ ಉದ್ದೇಶ ಮತ್ತು ಎಲ್ಲ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ.ಕಾಣೆಯಾದ ಯುವತಿ ಬಗ್ಗೆ ಮಾಹಿತಿ ಗೊತ್ತಿರುವವರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಸಂಬಂಧಿತ ದೂರವಾಣಿ ಸಂಖ್ಯೆಗೆ ತಕ್ಷಣ ಮಾಹಿತಿ ನೀಡಬೇಕಾಗಿ ವಿನಂತಿಸಲಾಗಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123

ಮುಂದೆ ಓದಿ..
ಸುದ್ದಿ 

ಧಾರವಾಡದಲ್ಲಿ ಗಾಂಜಾ ಹೊಂದಿರುವ ಬಗ್ಗೆ ಸಂಶಯ – ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Taluknewsmedia.com

Taluknewsmedia.com ಜೂನ್ 20 ರಂದು ಮಧ್ಯಾಹ್ನ ಸುಮಾರು 3:30 ಗಂಟೆಯ ಸುಮಾರಿಗೆ ಧಾರವಾಡ ಜಿಲ್ಲೆಯ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಲಗಾರ ಲೇ ಔಟ್, ಬೆಲ್ಲದನಗರ ರಸ್ತೆಯ ಬಳಿಯ ಖುಲ್ಲಾ ಜಾಗೆಯಲ್ಲಿರುವ ಕೆರೆಯ ಹತ್ತಿರ ಗಾಂಜಾ ಎಂಬ ಮಾದಕ ವಸ್ತು ಹೊಂದಿರುವ ಬಗ್ಗೆ ಗಂಭೀರ ಶಂಕೆ ವ್ಯಕ್ತವಾಗಿದೆ.ಸಂಬಂಧಿತ ಸ್ಥಳದಲ್ಲಿ ನಮೂದಾದ ವ್ಯಕ್ತಿಯು ಮಾದಕ ಪದಾರ್ಥ ಗಾಂಜಾವನ್ನು ಹೊಂದಿರಬಹುದೆಂಬ ಅನುಮಾನದ ಕುರಿತು ಫಿರ್ಯಾದಿದಾರರು ಸರ್ಕಾರ ಪರವಾಗಿ ಅಧಿಕೃತ ದೂರನ್ನು ಸಲ್ಲಿಸಿದ್ದು, ಆಧಾರದ ಮೇರೆಗೆ ವಿದ್ಯಾಗಿರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಶಯಿತನ ವಿರುದ್ಧ ಸಧ್ಯಕ್ಕೆ ಕಾನೂನುಬದ್ಧ ತನಿಖೆ ಪ್ರಾರಂಭಿಸಲಾಗಿದ್ದು, ಮಾದಕ ದ್ರವ್ಯ ನಿಷೇಧ ಕಾಯ್ದೆಯಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಜೂಜಾಟ ದಾಳಿ – ಓಪನ್ ಕೋಡ್ ಮೂಲಕ ಜೂಜಾಟ ನಡೆಸುತ್ತಿದ್ದ ವ್ಯಕ್ತಿ ವಿರುದ್ಧ ಪ್ರಕರಣ

Taluknewsmedia.com

Taluknewsmedia.com ಹುಬ್ಬಳ್ಳಿ, ಜೂನ್ 24: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಮಾರುತಿ ಭಾಸಣ್ಯನವರ (ವಯಸ್ಸು: 37, ಸಿಪಿಸಿ: 2555) ಅವರು 20-06-2025 ರಂದು ಠಾಣೆಗೆ ಹಾಜರಾಗಿ ತಮ್ಮ ಅಧಿಕೃತ ಪಟ್ರೋಲಿಂಗ್ ಸಮಯದ ವರದಿಯನ್ನು ಸಲ್ಲಿಸಿದ್ದಾರೆ.ಅದರ ಪ್ರಕಾರ, ಅವರು ಹಾಗೂ ಸಿಪಿಸಿ 29997ನೇ ಸಿಬ್ಬಂದಿ ತಾವAssigned ಪೊಲೀಸ್ ಅಧಿಕಾರಿಗಳ ಆದೇಶದಂತೆ, ದಿನಾಂಕ 20 ರಂದು ಮಧ್ಯಾಹ್ನ 2 ರಿಂದ ರಾತ್ರಿ 9 ಗಂಟೆಯವರೆಗೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಠಾಣಾ ವ್ಯಾಪ್ತಿಯಲ್ಲಿ ಪಟ್ರೋಲಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮದುರಾ ಕಾಲೋನಿಯಲ್ಲಿದ್ದಾಗ ಸಂಜೆ ಸುಮಾರು 5 ಗಂಟೆಗೆ, ಕುಸುಗಲ್ ರಸ್ತೆಯ ಆಪರ್ಡ್ ಕಾಲೇಜು ಹತ್ತಿರ ವ್ಯಕ್ತಿಯೊಬ್ಬನು ರಸ್ತೆಯ ಬದಿಯಲ್ಲಿ ನಿಂತು ಸಾರ್ವಜನಿಕರನ್ನು ಕರೆದು “ಒಂದು ರೂಪಾಯಿಗೆ 90 ರೂ. ಕೊಡುತ್ತೇನೆ” ಎಂಬ ಹೆಸರಿನಲ್ಲಿ ಮುಂಬೈ ಕಾಣಿ ಎನ್ನುವ ಓಪನ್ ಕೋಡ್ ಜೂಜಾಟವನ್ನು ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಬಂದಿತ್ತೆಂದು…

ಮುಂದೆ ಓದಿ..
ಸುದ್ದಿ 

ಕಳ್ಳತನದ ಪ್ರಯತ್ನ ವಿಫಲ – ಅಪರಿಚಿತನ ಓಡಾಟ..

Taluknewsmedia.com

Taluknewsmedia.comನಗರದ ಬಂಕಾಪುರ ಚೌಕ್ ನಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಒಂದರಲ್ಲಿ ದಿನಾಂಕ 16-06-2025ರಂದು ಬೆಳಗಿನ ಜಾವ 3-00 ಗಂಟೆಯ ಸುಮಾರಿಗೆ ಕಳ್ಳತನದ ಪ್ರಯತ್ನ ನಡೆದಿದ್ದು, ಎಟಿಎಂ ಅಲಾರಂ ಬೀಗಿದ ತಕ್ಷಣ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳದಿಂದ ಓಡಿ ಹೋಗಿರುವ ಘಟನೆ ನಡೆದಿದೆ.ಪಿಯಾರ್ದಿದಾರರಾದ ಶ್ರೀ ಮಂಜು ಬಿ., ಹಿರಿಯ ಕಾರ್ಯನಿರ್ವಾಹಕ – ಕ್ಷೇತ್ರ ಸೇವೆ, ರೈಟರ್ ಬಿಸಿನೆಸ್ ಸರ್ವಿಸಸ್ ಪ್ರೈ. ಲಿಮಿಟೆಡ್, ಮುಂಬೈ ಇವರಿಂದ ಈ ಕುರಿತು ದೂರು ನೀಡಲಾಗಿದ್ದು, ಅವರು ಬಿಹೆಚ್ ಇಇಎಲ್ ಲೇಔಟ್, ಆರ್ ಆರ್ ನಗರ, ಬೆಂಗಳೂರು ನಿವಾಸಿಯಾಗಿದ್ದಾರೆ.ದೂರುನ ವಿವರಗಳ ಪ್ರಕಾರ, ಹುಬ್ಬಳ್ಳಿಯ ರೈತ ಸಂಘ, ಯಲಾಪುರ ಬೀದಿ, ಬಂಕಾಪುರ ಚೌಕ್, ಪಿ.ಬಿ. ರಸ್ತೆಯಲ್ಲಿ ನೆಲೆಸಿರುವ ಕೆನರಾ ಬ್ಯಾಂಕ್ ಎಟಿಎಂ (ಐಡಿ: 0595 WS01) ಅನ್ನು ಗುರುತಿಸಲು ಆಯ್ಕೆಯಾಗಿತ್ತು. ಅಪರಿಚಿತ ವ್ಯಕ್ತಿ ಎಟಿಎಂ ಯಂತ್ರದ ಯುಟಿಐ ಮತ್ತು ಪಿಐಆರ್ ಕೇಬಲ್ ತೆಗೆದು ಹಾಕಿ, ಪ್ರೆಂಟ್ ಡೋರ್…

ಮುಂದೆ ಓದಿ..
ಸುದ್ದಿ 

ಅಕ್ರಮ ಸಾರಾಯಿ ಸಾಗಣೆ: ಪೊಲೀಸ್ ಪೆಟ್ರೋಲಿಂಗ್ ವೇಳೆ ಪತ್ತೆ, ಪ್ರಕರಣ ದಾಖಲು

Taluknewsmedia.com

Taluknewsmedia.comಹುಬ್ಬಳ್ಳಿ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ನೇಕಾರ ನಗರ ಬೆಳಗಲಿ ರಸ್ತೆ ಅಮರಜ್ಯೋತಿ ಕಾಲನಿಯಲ್ಲಿ ಅಕ್ರಮ ಸಾರಾಯಿ ಸಂಗ್ರಹಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ದಿನಾಂಕ 18.06.2025 ರಂದು ಹಳೇಹುಬ್ಬಳ್ಳಿ ಠಾಣೆಯ ಅಧಿಕಾರಿಯ ಆದೇಶದ ಮೇರೆಗೆ, ಸಿಪಿಸಿಗಳಾದ 2753 ಹಾಗೂ 2919 ರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕಾರ್ಯದಲ್ಲಿದ್ದ ಪೊಲೀಸ್ ಅಧಿಕಾರಿ, ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಮರಜ್ಯೋತಿ ಕಾಲನಿಯಲ್ಲಿರುವ ಸ್ಥಳದಲ್ಲಿ ಒಂದು ಖಚಿತ ಮಾಹಿತಿ ದೊರೆತಿದ್ದು, ವ್ಯಕ್ತಿಯೊಬ್ಬನು ತನ್ನ ಲಾಭಕ್ಕಾಗಿ ಅಕ್ರಮವಾಗಿ ಅಬಕಾರಿ ಸರಕು ಸಾರಾಯಿ ಸಂಗ್ರಹಿಸಿ ಜನರಿಗೆ ಮಾರಾಟ ಮಾಡುತ್ತಿದ್ದಾನೆ ಎಂಬುದನ್ನು ಪತ್ತೆಹಚ್ಚಿದ್ದಾರೆ. , ಆರೋಪಿತನ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ, 1965ರ ಕಲಂ 32 ಮತ್ತು 34ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಪರವಾಗಿ ದೂರು ದಾಖಲಿಸಲಾಗಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಪ್ರಕರಣ; ಒಬ್ಬನ ವಿರುದ್ಧ ಎಫ್‌ಐಆರ್

Taluknewsmedia.com

Taluknewsmedia.com ತೋರವಿಹಕ್ಕಲ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡಿದ ವ್ಯಕ್ತಿಯ ವಿರುದ್ಧ ನಗರ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.ಪೊಲೀಸರ ಪ್ರಕಾರ, ದಿನಾಂಕ 17-06-2025 ರಂದು ಸಂಜೆ 4.30 ಗಂಟೆ ಸುಮಾರಿಗೆ, ಯುವಕನೊಬ್ಬನು ಸಾರ್ವಜನಿಕ ರಸ್ತೆಯ ಮೇಲೆ ನಿಂತು ಧೂಮಪಾನ ಮಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಅನುಮಾನ ಉಂಟಾಯಿತು. ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿತನು ಮಾದಕ ಪದಾರ್ಥವಾದ ಗಾಂಜಾವನ್ನು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡನು.ತಕ್ಷಣ ಫಿರ್ಯಾದಿದಾರರು ಆರೋಪಿತನನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು, ಆರೋಪಿತನು ಗಾಂಜಾ ಸೇವನೆ ಮಾಡಿರುವುದನ್ನು ದೃಢಪಡಿಸಿ ಲಿಖಿತ ಅಭಿಪ್ರಾಯ ನೀಡಿದರು. ಆ ಬಳಿಕ ಆರೋಪಿತನನ್ನು ಠಾಣೆಗೆ ಕರೆತಂದು, ಎನ್.ಡಿ.ಪಿ.ಎಸ್ ಕಾಯ್ದೆಯ ಸೆಕ್ಷನ್ 27(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸರ್ಕಾರದ ಪರವಾಗಿ ಪೋಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.ಈ ಕುರಿತು ಮುಂದಿನ ತನಿಖೆ ಪ್ರಗತಿಯಲ್ಲಿ ಇದೆ ಎಂದು…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಜೂಜಾಟ ದಾಳಿ: ಆರೂಣ ಬಿಲಾನಾ ಸೇರಿ 5 ಜನರ ವಿರುದ್ಧ ಪ್ರಕರಣ ದಾಖಲು

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 24: ಹಳೇಹುಬ್ಬಳ್ಳಿ ತಿಮ್ಮಸಾಗರ ಪಾಟ ಹತ್ತಿರದ ಖುಲ್ಲಾ ಜಾಗೆಯಲ್ಲಿ ಜೂಜಾಟ ನಡೆಯುತ್ತಿದ್ದ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಆರುಣ ಬಿಲಾನಾ ಎಂಬುವವರು ಹಾಗೂ ಇವರು ಸೇರಿದಂತೆ ಇನ್ನೂ 4-5 ಜನರು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಾಕಿಕೊಂಡು ಇಸ್ಪೆಟ್ ಎಲೆಗಳ ಮೂಲಕ ಅಂದರ್-ಬಾಹರ್ ಆಟವನ್ನಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಬಿದ್ದರು. ಈ ಕುರಿತು ಮಾಹಿತಿ ಬಂದ ತಕ್ಷಣ ಸ್ಥಳೀಯ ಠಾಣೆಯ ಸಿಬ್ಬಂದಿ ಸಿ.ಪಿ.ಸಿ. 1783, 1811 ಮತ್ತು 2962 ನೇದವರನ್ನು ಒಳಗೊಂಡ ತಂಡ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಾಗಿದ್ದು, ಸನಿಹದಲ್ಲಿಯೇ ನಿಂತು ನೋಡಿ ಮಾಡಿ ಪ್ರಕರಣವನ್ನು ದೃಢಪಡಿಸಿದೆ.ಸ್ಥಳದಲ್ಲಿಯೇ ವಾಚ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿ, ಬಳಿಕ ಠಾಣೆಗೆ ಮರಳಿ ದೂರು ದಾಖಲಿಸಿದ್ದು, ಆಧಾರದ ಮೇಲೆ ಹುಬ್ಬಳ್ಳಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 38/2025 ರಂತೆ ಕರ್ನಾಟಕ ಪೊಲೀಸ್ ಕಾಯಿದೆ-1963ರ ಸೆಕ್ಷನ್…

ಮುಂದೆ ಓದಿ..