1064 ಎಕರೆ ಭೂಮಿ ಭೂಹೀನರಿಗೆ ಹಂಚಿಕೆಗೆ ಸಿಪಿಐ(ಎಂಎಲ್) ಒತ್ತಾಯ
Taluknewsmedia.com1064 ಎಕರೆ ಭೂಮಿ ಭೂಹೀನರಿಗೆ ಹಂಚಿಕೆಗೆ ಸಿಪಿಐ(ಎಂಎಲ್) ಒತ್ತಾಯ ರಾಯಚೂರು: ಸಿಂಧನೂರು ತಾಲೂಕಿನ ಜವಳಗೇರ ಗ್ರಾಮದಲ್ಲಿ ನಾಡಗೌಡರ ಕುಟುಂಬ ಕಳೆದ ನಾಲ್ಕೂವರೆ ದಶಕಗಳಿಂದ ಅಕ್ರಮವಾಗಿ ವಶದಲ್ಲಿಟ್ಟಿರುವ 1064 ಎಕರೆ ಭೂಮಿಯನ್ನು ತಕ್ಷಣವೇ ಭೂಹೀನ ರೈತರಿಗೆ ವಿತರಿಸಬೇಕೆಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಕ್ಷವು ಒತ್ತಾಯಿಸಿದೆ. ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಪಕ್ಷದ ಪಾಲಿಟ್ ಬ್ಯುರೋ ಸದಸ್ಯ ಮಾನಸಯ್ಯ ಅವರು ಭೂ ಸುಧಾರಣೆ ಕಾಯ್ದೆಯ 74 ಮತ್ತು 75ನೇ ಕಲಂಗಳ ಅಡಿಯಲ್ಲಿ ಸಿಂಧನೂರು ತಾಲೂಕಿನ ಸರ್ವೇ ನಂ.48ಕ್ಕೆ ಸಂಬಂಧಿಸಿದ ಅಕ್ರಮ ಭೂ ವಹಿವಾಟಿನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಕ್ರಮವಾಗಿ ಭೂಮಿ ವಶಪಡಿಸಿಕೊಂಡವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಬೇಕೆಂದು ಮನವಿಯಲ್ಲಿ ತಿಳಿಸಿದರು. ಇದೇ ವೇಳೆ ಲಿಂಗಸುಗೂರು ತಾಲೂಕಿನಲ್ಲಿ 25ರಿಂದ 30 ವರ್ಷಗಳಿಂದ ಕೃಷಿ ಮಾಡುತ್ತಿರುವ 998 ಭೂಹೀನ ರೈತರ ಅಕ್ರಮ ಸಕ್ರಮ ಅರ್ಜಿಗಳನ್ನು…
ಮುಂದೆ ಓದಿ..
