ರಾಜಕೀಯ ಸುದ್ದಿ 

ಡಾ. ಜಿ. ಪರಮೇಶ್ವರರ ಹೇಳಿಕೆ – ದ್ವೇಷ ಭಾಷಣ ವಿರೋಧಿ ವಿಧೇಯಕದ ಬಗ್ಗೆ ಸ್ಪಷ್ಟನೆ

Taluknewsmedia.com

Taluknewsmedia.comಡಾ. ಜಿ. ಪರಮೇಶ್ವರರ ಹೇಳಿಕೆ – ದ್ವೇಷ ಭಾಷಣ ವಿರೋಧಿ ವಿಧೇಯಕದ ಬಗ್ಗೆ ಸ್ಪಷ್ಟನೆ ಸರ್ಕಾರ ಈಗ ದ್ವೇಷ ಭಾಷಣ ಮತ್ತು ದ್ವೇಷ ಹರಡುವ ವರ್ತನೆಗಳನ್ನು ನಿಯಂತ್ರಿಸಲು ಹೊಸ ‘ದ್ವೇಷ ಭಾಷಣ ತಡೆ ವಿಧೇಯಕ 2025’ನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ. ಈ ಬಿಲ್‌ ಬಗ್ಗೆ ಮೊದಲು ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಚರ್ಚೆಯ ನಂತರ ಕ್ಯಾಬಿನೆಟ್ ಅನುಮೋದನೆ ನೀಡಿದರೆ, ಸರ್ಕಾರ ಈ ವಿಧೇಯಕವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಿದೆ. ಡಾ. ಜಿ. ಪರಮೇಶ್ವರ ಅವರು ಮಾತನಾಡುವಾಗ, ಈ ಬಿಲ್ ಈಗಾಗಲೇ ಕ್ಯಾಬಿನೆಟ್ ಮುಂದೆ ಬಂದಿದೆ ಎಂದು ತಿಳಿಸಿದ್ದಾರೆ. ದ್ವೇಷ ಭಾಷಣ ಮತ್ತು ಅದಕ್ಕೆ ಸಂಬಂಧಿಸಿದ ಅನಾರೋಗ್ಯಕರ ವರ್ತನೆಗಳನ್ನು ತಡೆಯಲು ಇದು ಒಂದು ಮುಖ್ಯ ಹೆಜ್ಜೆ ಎಂದು ಅವರು ಒತ್ತಿ ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ಚರ್ಚೆ ಮುಗಿದ ನಂತರ, ಪಾಸಿಟಿವ್ ನಿರ್ಧಾರ ಕೈಗೊಳ್ಳಲಾದರೆ, ಬಿಲ್‌ನ್ನು ನೇರವಾಗಿ ವಿಧಾನಮಂಡಲದಲ್ಲಿ ಮಂಡಿಸುವ ಎಲ್ಲಾ…

ಮುಂದೆ ಓದಿ..
ರಾಜಕೀಯ ಸುದ್ದಿ 

ವಾಟಾಳ ನಾಗರಾಜ್ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಗಂಭೀರ ಎಚ್ಚರಿಕೆ ನೀಡಿದ್ದಾರೆ..

Taluknewsmedia.com

Taluknewsmedia.comವಾಟಾಳ ನಾಗರಾಜ್ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. “ಸಿಎಂ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ದುಡುಕಬಾರದು” ಎಂದು ಅವರು ಸ್ಪಷ್ಟವಾಗಿ ಹೇಳಿದರು. ಸಿದ್ದರಾಮಯ್ಯರನ್ನು ಬದಲಾಯಿಸುವ ಯಾವ ನಿರ್ಧಾರವೂ ರಾಜ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ರಾಜ್ಯದಲ್ಲಿ ದಂಗೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಹೈಕಮಾಂಡ್ ಯಾವುದೇ ತುರ್ತು ನಿರ್ಧಾರ ಕೈಗೊಳ್ಳದೆ, ವಿಚಾರವನ್ನು ಅಳೆದು ತೂಗಿ, ಯೋಚಿಸಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. “ಅಧಿಕಾರಿಗಳನ್ನು ಟ್ರಾನ್ಸ್‌ಫರ್ ಮಾಡುವಂತೆ ಮುಖ್ಯಮಂತ್ರಿಯನ್ನು ಬದಲಾಯಿಸುವುದು ಸರಿಯಲ್ಲ,” ಎಂಬುದೂ ಅವರ ಎಚ್ಚರಿಕೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿರುವ ನಾಯಕರು, ಅವರ ಮೇಲೆ ಯಾವುದೇ ಗಂಭೀರ ಆರೋಪಗಳಿಲ್ಲ. ಅವರ ವಯಸ್ಸಿನಲ್ಲೂ ಈ ಮಟ್ಟದಲ್ಲಿ ಕೆಲಸ ಮಾಡುವ ಮಟ್ಟದ ನಾಯಕರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷದಲ್ಲಿಯೂ ಇಲ್ಲ ಎಂದು ನಾಗರಾಜ್ ಪ್ರಶಂಸೆ ಮಾಡಿದ್ದಾರೆ.…

ಮುಂದೆ ಓದಿ..
ಸುದ್ದಿ 

ರಾಜಕೀಯ ನಾಯಕರ ವರ್ತನೆಗೆ ಕಿಡಿಕಾರಿರುವ ಜಿ. ಜನಾರ್ಧನ ರೆಡ್ಡಿ, “ಜನರ ಕಷ್ಟ ಯಾರಿಗೂ ಕಾಣುತ್ತಿಲ್ಲ,

Taluknewsmedia.com

Taluknewsmedia.comರಾಜಕೀಯ ನಾಯಕರ ವರ್ತನೆಗೆ ಕಿಡಿಕಾರಿರುವ ಜಿ. ಜನಾರ್ಧನ ರೆಡ್ಡಿ, “ಜನರ ಕಷ್ಟ ಯಾರಿಗೂ ಕಾಣುತ್ತಿಲ್ಲ, ಮಂತ್ರಿಗಳಿಗೆ ತಮ್ಮ ಸ್ಥಾನ ಮಾತ್ರ ಮುಖ್ಯ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, “ರೈತರು ಇಂದು ಪ್ರವಾಹ, ಅತಿವೃಷ್ಠಿ, ಬೆಳೆ ನಾಶ — ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ಆದರೆ ಮಂತ್ರಿಗಳು ಟಿಫನ್‌ ಮೇಜಿನಲ್ಲೇ ಕುಳಿತು ತಮ್ಮ ‘ಸೀಟಿಂಗ್’ ರಾಜಕಾರಣ ಮಾಡ್ತಾ ಇದ್ದಾರೆ. ಸಿಎಂ–ಡಿಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದರೂ, ಕನಿಷ್ಠ ಈ ಜಿಲ್ಲೆಗೆ ಸಂಬಂಧಪಟ್ಟ ಮಂತ್ರಿಗಳು ಇದ್ದಾರೆ ಅಲ್ವಾ? ಯಾರಾದರೂ ಒಂದು ದಿನ ಮುಂಚೆಯೇ ಬಂದು ರೈತರ ಜೊತೆ ಮಾತಾಡಬಹುದಿತ್ತು,” ಎಂದು ಆರೋಪಿಸಿದರು. ಅವರು ಮುಂದುವರಿಸಿದರು:“ರೈತರು ಹೋರಾಟಕ್ಕೆ ಬರ್ತಿದ್ದಾರೆ ಅಂತ ದಿನಾಂಕ ನಿಗದಿ ಪಡಿಸಿದ್ದೇವೆ ಅಂತ ಹೇಳಿದಾಗಲೇ ಸರ್ಕಾರ ಜಾಗೃತಿಯಾಗಬೇಕಾಗಿತ್ತು. ಒಂದು ದಿನ ಮುಂಚೆ ಬಂದಿದ್ದರೆ, ‘ಬೆಂಬಲ ಬೆಲೆ ಕೊಡ್ತೀವಿ, ಖರೀದಿ…

ಮುಂದೆ ಓದಿ..
ರಾಜಕೀಯ ಸುದ್ದಿ 

ಕಾಶಪ್ಪನವರ್ ಅವರಿಂದ ಕನ್ನೇರಿ ಶ್ರೀ ವಿರುದ್ಧ ತೀವ್ರ ವಾಗ್ದಾಳಿ: ‘ನೀನು ಆಕಾಶದಿಂದ ಇಳಿದು ಬಂದಿಲ್ಲ, ಕಾವಿ ಬಿಚ್ಚಿ ಗ್ರೌಂಡ್‌ಗೆ ಬಾ’

Taluknewsmedia.com

Taluknewsmedia.comಕಾಶಪ್ಪನವರ್ ಅವರಿಂದ ಕನ್ನೇರಿ ಶ್ರೀ ವಿರುದ್ಧ ತೀವ್ರ ವಾಗ್ದಾಳಿ: ‘ನೀನು ಆಕಾಶದಿಂದ ಇಳಿದು ಬಂದಿಲ್ಲ, ಕಾವಿ ಬಿಚ್ಚಿ ಗ್ರೌಂಡ್‌ಗೆ ಬಾ’ ಕನ್ಯೇರಿ ಶ್ರೀಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಶಪ್ಪನವರ್ ಅವರು, ಶ್ರೀಗಳ ವರ್ತನೆಗೆ ಹುಚ್ಚು ಹಿಡಿದಿದೆ ಮತ್ತು ‘ಮದ’ (ಅಹಂಕಾರ) ಏರಿದೆ ಎಂದು ಆರೋಪಿಸಿದ್ದಾರೆ. ಕನ್ನೇರಿ ಶ್ರೀಗಳು ‘ನಾನೇ ಶ್ರೇಷ್ಠ, ನಾನೇ ದೇವರು’ ಎಂದು ಹೇಳುತ್ತಿರುವುದು ಅವರ ಬಾಯಿಗೆ ಬಂದ ಮಾತುಗಳಾಗಿವೆ ಎಂದು ಟೀಕಿಸಿದರು. ದೇವಮಾನವನಲ್ಲ, ಮನುಷ್ಯನಾಗಿ ಹುಟ್ಟಿದ್ದಾನೆ: ಕನ್ನೇರಿ ಶ್ರೀಗಳು ಆಕಾಶದಿಂದ ಉದುರಿ ಬಂದವರೇ? ಅವರು ತಾಯಿ ಹೊಟ್ಟೆಗೆ ಜನಿಸಿ, ಮನುಷ್ಯನಾಗಿ ಹುಟ್ಟಿದ್ದಾರೆ. ಈ ಜಗತ್ತಿನಲ್ಲಿ ಇಲ್ಲಿಯವರೆಗೆ ಯಾರೂ ದೇವಮಾನವ ಅಥವಾ ಆಕಾಶದಿಂದ ಇಳಿದು ಬಂದ ಮಾನವ ಎಂದು ಹೇಳುವವರು ಇಲ್ಲ ಎಂದು ಅವರು ಪ್ರಶ್ನಿಸಿದರು. ಆದರೂ, ಕಾವಿ ಧರಿಸಿಕೊಂಡು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಕಾವಿ ಬಿಚ್ಚಿ ಮಾತನಾಡಲು ಸವಾಲು: ಯಾವುದೇ ಧರ್ಮದ…

ಮುಂದೆ ಓದಿ..
ರಾಜಕೀಯ ಸುದ್ದಿ 

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮಾತ್ರಕ್ಕೆ ತಾವು ಬಂಡಾಯಗಾರರು (ರೆಬೆಲ್ಸ್) ಅಲ್ಲ ಎಂದು ಶಿವಮೊಗ್ಗದಲ್ಲಿ ಸ್ಪಷ್ಟಪಡಿಸಿದ್ದಾರೆ.

Taluknewsmedia.com

Taluknewsmedia.comಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮಾತ್ರಕ್ಕೆ ತಾವು ಬಂಡಾಯಗಾರರು (ರೆಬೆಲ್ಸ್) ಅಲ್ಲ ಎಂದು ಶಿವಮೊಗ್ಗದಲ್ಲಿ ಸ್ಪಷ್ಟಪಡಿಸಿದ್ದಾರೆ. ಯತ್ನಾಳ್ ಅವರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ದೃಢಪಡಿಸಿದರು. ಇಡೀ ದೇಶದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಉತ್ತರ ಪ್ರದೇಶ ಮತ್ತು ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಅದು ಬಾಕಿ ಉಳಿದಿದೆ. ಆ ಪ್ರಕ್ರಿಯೆ ನಡೆಯುವವರೆಗೂ ನಮಗೊಂದು ಅವಕಾಶವಿದೆ ಎಂದು ಭಾವಿಸಿ ತಮ್ಮ ಅಭಿಪ್ರಾಯವನ್ನ ಹೇಳಿದ್ದೇವೆ ಎಂದು ಅವರು ವಿವರಿಸಿದರು. ತಾವು ಹೈಕಮಾಂಡ್ ನೀಡಿದ ನಿರ್ಧಾರವನ್ನು ಪಾಲನೆ ಮಾಡುವ ಕಾರ್ಯಕರ್ತರು ಮತ್ತು ಅದರಲ್ಲಿ ನಿರಂತರವಾಗಿ ಇರುತ್ತೇವೆ. ತಮ್ಮ ಅಭಿಪ್ರಾಯವನ್ನು ಒಬ್ಬರಾಗಿ ಹೇಳುವುದಕ್ಕಿಂತ ಗುಂಪಾಗಿ ಹೇಳಲಾಗಿದೆ. ಯಾರನ್ನೋ ವೈಯಕ್ತಿಕವಾಗಿ ಗುರಿ ಮಾಡಿ ಹೇಳಿಲ್ಲ, ಅಥವಾ ಯಾರು ದೊಡ್ಡವರು, ಯಾರು ಸಣ್ಣವರು ಎಂದು ಹೇಳಿಲ್ಲ. ಈಗಿರುವವರು ಕೆಟ್ಟವರು ಅಥವಾ ಒಳ್ಳೆಯವರು ಎಂಬ…

ಮುಂದೆ ಓದಿ..
ಸುದ್ದಿ 

ಚಿಕ್ಕಬಳ್ಳಾಪುರ: ಭೋಗನಂದೀಶ್ವರ ದೇವಾಲಯದ ಹುಂಡಿಯಲ್ಲಿ ವಿಚಿತ್ರ ಪತ್ರಗಳ ಪತ್ತೆ

Taluknewsmedia.com

Taluknewsmedia.comಚಿಕ್ಕಬಳ್ಳಾಪುರ: ಭೋಗನಂದೀಶ್ವರ ದೇವಾಲಯದ ಹುಂಡಿಯಲ್ಲಿ ವಿಚಿತ್ರ ಪತ್ರಗಳ ಪತ್ತೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಭೋಗನಂದೀಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆಯ ವೇಳೆ ಅಚ್ಚರಿ ಮೂಡಿಸುವ ಬೇಡಿಕೆಗಳಿರುವ ಹಲವು ಪ್ರೇಮ ಪತ್ರಗಳು ಮತ್ತು ಫೋಟೋಗಳು ಪತ್ತೆಯಾಗಿವೆ. ಹುಂಡಿಯಲ್ಲಿದ್ದ ಗರಿ-ಗರಿ ನೋಟುಗಳ ಜೊತೆ ಕೆಲವರು ಹಾಕಿದ್ದ ಮಹಿಳೆಯರ ಫೋಟೋಗಳು ಹಾಗೂ ಅದಕ್ಕೆ ಹಿಂಭಾಗದಲ್ಲಿದ್ದ ಮನವಿ ಪತ್ರಗಳು ದೇವಸ್ಥಾನದ ಸಿಬ್ಬಂದಿಯನ್ನು ಬೆಚ್ಚಿಬೀಳುವಂತೆ ಮಾಡಿವೆ. ಫೋಟೋವೊಂದರ ಹಿಂದಿನ ಬರಹ ಹೀಗಿತ್ತು:“ಪದ್ಮಾ, ಮತ್ತೆ ನನ್ನ ಜೀವನಕ್ಕೆ ಬಾ…” ಎಂಬ ಪ್ರೇಮ ಮನವಿ.ಮತ್ತೊಂದು ಚೀಟಿಯಲ್ಲಿ ಯುವಕ ಹೀಗೆ ಬರೆದಿದ್ದಾನೆ:“ನಾನು ಪ್ರೀತಿಸುವ ಹುಡುಗಿಯ ತಂದೆ ತಾಯಿಗೆ ಒಳ್ಳೆಯ ಬುದ್ದಿ ನೀಡಿ, ನಮ್ಮ ಪ್ರೀತಿಗೆ ಮುಕ್ತ ಹೃದಯದಿಂದ ಒಪ್ಪುವಂತೆ ಮಾಡಿ ಭಗವಂತ.” ಇಷ್ಟಕ್ಕೆ ಮಾತ್ರ ಸೀಮಿತವಾಗದೆ, ಕೆಲವರು ತಮ್ಮ ಕುಟುಂಬದ ಸಮಸ್ಯೆಗಳನ್ನು ಬರೆದಿರುವುದು ಕಂಡುಬಂದಿದೆ.“ಗಂಡನಿಗೆ ಒಳ್ಳೆಯ ಉದ್ಯೋಗ ಸಿಗಲಿ”, “ನನ್ನ ಮಗ ಓದಿನಲ್ಲಿ ಮುಂದೆ ಬೆಳಗಲಿ,…

ಮುಂದೆ ಓದಿ..
ರಾಜಕೀಯ ಸುದ್ದಿ 

ಬಿಜೆಪಿಯಲ್ಲಿ ಅಧಿಕಾರದ ಕಿತ್ತಾಟದ ಟೀಕೆ ಮತ್ತು ರೆಬೆಲ್ ನಾಯಕರ ದೆಹಲಿ ಯಾತ್ರೆ..

Taluknewsmedia.com

Taluknewsmedia.comಬಿಜೆಪಿಯಲ್ಲಿ ಅಧಿಕಾರದ ಕಿತ್ತಾಟದ ಟೀಕೆ ಮತ್ತು ರೆಬೆಲ್ ನಾಯಕರ ದೆಹಲಿ ಯಾತ್ರೆ.. ಅಧಿಕಾರದ ಕಿತ್ತಾಟದಿಂದಾಗಿ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಮಾತನಾಡುತ್ತಾ ಟೀಕಿಸಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರವು ಬಿಜೆಪಿ ಹೋರಾಟ ಮಾಡಿದ ಬಳಿಕ ಸ್ಪಂದಿಸಿದೆ ಎಂದೂ ಅವರು ತಿಳಿಸಿದರು. ಈ ನಡುವೆ, ಬಿಜೆಪಿ ರೆಬೆಲ್ ನಾಯಕರು ದೆಹಲಿ ಯಾತ್ರೆ ಕೈಗೊಂಡಿದ್ದು, ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ತಂಡದಲ್ಲಿ ಜಿ.ಎಂ. ಸಿದ್ದೇಶ್ವರ್, ಬಿ.ವಿ. ನಾಯಕ್, ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹಾಗೂ ಅರಸೀಕೆರೆಯ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಭಾಗಿಯಾಗಿದ್ದರು.

ಮುಂದೆ ಓದಿ..
ಸುದ್ದಿ 

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ಅಸ್ತ್ರ ಪ್ರಯೋಗ; ವೇಣುಗೋಪಾಲ್ ಜೊತೆ ಹೈ ವೋಲ್ಟೇಜ್ ಸಭೆ..

Taluknewsmedia.com

Taluknewsmedia.comಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ಅಸ್ತ್ರ ಪ್ರಯೋಗ; ವೇಣುಗೋಪಾಲ್ ಜೊತೆ ಹೈ ವೋಲ್ಟೇಜ್ ಸಭೆ.. ಮೊನ್ನೆಷ್ಟೇ ರಾಜಕೀಯ ಶಾಶ್ವತವಲ್ಲ ಎಂದು ವೈರಾಗ್ಯದ ಮಾತುಗಳನ್ನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೆನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಜೊತೆ 15 ನಿಮಿಷಕ್ಕೂ ಹೆಚ್ಚು ಕಾಲ ಹೈ ವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ. ಈ ಸಭೆಯ ನಂತರ, ಮಂಗಳೂರಿನ ಕಾವೇರಿ ಗೆಸ್ಟ್ ಹೌಸ್ನಲ್ಲಿ ನಡೆದ ಲಂಚ್ ಮೀಟಿಂಗ್‌ನಲ್ಲಿ ಸಿಎಂ, ವೇಣುಗೋಪಾಲ್ ಸೇರಿದಂತೆ ಸಚಿವರಾದ ಹೆಬ್ಬಾಳ್ಕರ್, ದಿನೇಶ್ ಗುಂಡುರಾವ್, ಜಮೀರ್, ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಸ್ಪೀಕರ್ ಖಾದರ್ ಭಾಗಿಯಾಗಿದ್ದರು. ಈ ಭೋಜನಕೂಟದಲ್ಲಿ ನಾಟಿಕೋಳಿ ಸಾರು, ನೀರ್ದೋಸೆ ಮತ್ತು ವಿವಿಧ ಬಗೆಯ ಮೀನಿನ ಖಾದ್ಯಗಳು ಇದ್ದವು. ಸಭೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ್ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಮತ್ತು ದೆಹಲಿಯಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಿನ್ನೆ ನಡೆದಿದೆ ಮನಕಲಕುವ ಘಟನೆ.

Taluknewsmedia.com

Taluknewsmedia.comಗ್ಯಾಸ್ ಗೀಸರ್ ದುರಂತ—ನವವಿವಾಹಿತೆಯ ಸಾವು ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಿನ್ನೆ ನಡೆದಿದೆ ಮನಕಲಕುವ ಘಟನೆ. ಮನೆ ಸ್ನಾನಗೃಹದಲ್ಲಿ ಅಳವಡಿಸಿದ್ದ ಗ್ಯಾಸ್ ಗೀಸರ್‌ನಿಂದ ಹೊರಬಿದ್ದ ಕಾರ್ಬನ್ ಮಾನಾಕ್ಸೈಡ್ ಅನಿಲಕ್ಕೆ ಉಸಿರುಗಟ್ಟಿಕೊಂಡು 24 ವರ್ಷದ ಭೂಮಿಕಾ ಎಂಬ ಯುವತಿ ದುರಂತ ಅಂತ್ಯ ಕಂಡಿದ್ದಾಳೆ. ನವವಿವಾಹಿತೆಯಾದ ಭೂಮಿಕಾ ಸ್ನಾನದ ನಿಮಿತ್ತ ಒಳಗೆ ತೆರಳಿದ್ದರೂ ಬಹಳ ಹೊತ್ತಿನವರೆಗೆ ಹೊರಗೆ ಬಾರದ ಕಾರಣ ಕುಟುಂಬಸ್ಥರು ತಪಾಸಣೆ ನಡೆಸಿ ಅವಳು ಅಚೇತನ ಸ್ಥಿತಿಯಲ್ಲಿ ಕುಸಿದು ಬಿದ್ದಿರುವುದು ಗಮನಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ ಬದುಕಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ತಜ್ಞರ ಪ್ರಕಾರ ಮುಚ್ಚಿದ ಸ್ನಾನಗೃಹಗಳಲ್ಲಿ ಗ್ಯಾಸ್ ಗೀಸರ್ ಬಳಕೆ ಅತ್ಯಂತ ಅಪಾಯಕಾರಿ. ಅನುಚಿತ ವಾತಾಯನ ಹಾಗೂ ಗಾಳಿ ಸಂಚಾರದ ಕೊರತೆಯಿಂದ ಗಂಭೀರ ಅನಿಲ ವಿಷಕಾರಿ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಸಾರ್ವಜನಿಕರು ಇಂತಹ ಘಟನೆಗಳನ್ನು ತಪ್ಪಿಸಲು ಗ್ಯಾಸ್ ಗೀಸರ್‌ಗಳನ್ನು ಸ್ನಾನಗೃಹದ ಹೊರಭಾಗದಲ್ಲಿ ಅಳವಡಿಸುವುದು…

ಮುಂದೆ ಓದಿ..
ರಾಜಕೀಯ ಸುದ್ದಿ 

ದೆಹಲಿಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮೊದಲ ಪ್ರತಿಕ್ರಿಯೆ

Taluknewsmedia.com

Taluknewsmedia.comದೆಹಲಿಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮೊದಲ ಪ್ರತಿಕ್ರಿಯೆ “ನಾನು ಮೊದಲು ಒಂದು ಖಾಸಗಿ ಮದುವೆ ಕಾರ್ಯಕ್ರಮಕ್ಕಾಗಿ ದೆಹಲಿಗೆ ಬಂದಿದ್ದೇನೆ. ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ನನ್ನೊಂದಿಗೆ ಜೈಲಿನಲ್ಲಿ ಕೆಲಸ ಮಾಡಿದ ಒಬ್ಬ ಅಧಿಕಾರಿಯ ಮಗನ ಮದುವೆ ಇದೆ. ಅವರು ನನಗೆ ಅಗತ್ಯ ಸಂದರ್ಭದಲ್ಲಿ ಸಾಕಷ್ಟು ಸಹಾಯಮಾಡಿದ ಕಾರಣ, ಈ ಕಾರ್ಯಕ್ರಮಕ್ಕೆ ಹಾಜರಾಗುವುದು ನನ್ನ ಕರ್ತವ್ಯವೂ ಹೌದು. ಇದರ ಬಳಿಕ 14ನೇ ತಾರೀಖಿನ ‘ವೋಟ್ ಫಾರ್ ಸೂರಿ’ ರ್ಯಾಲಿಯ ವ್ಯವಸ್ಥೆಗಳನ್ನೂ ನೋಡಿಕೊಳ್ಳಬೇಕು. ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅವರಿಗೆ ವಸತಿ, ಆಹಾರ, ಸಾರಿಗೆ—ಟ್ರೈನ್‌ದಿಂದ ಬರುವವರು, ಬಸ್‌ ಕನೆಕ್ಷನ್, ಎಲ್ಲೆಲ್ಲಿ ತಂಗಬೇಕು—ಇವುಗಳನ್ನೆಲ್ಲ ಸಂಯೋಜಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ಈ ಕಾರಣಕ್ಕಾಗಿ ಇಂದೇ ರಾತ್ರಿ ಕೆಲರೊಂದಿಗೆ ಸಭೆ ನಡೆಸಿ, ಅಗತ್ಯ ತಂಡಗಳನ್ನು ನಿಯೋಜಿಸಬೇಕಾಗಿದೆ. ನಾಳೆ ಬೆಳಗ್ಗೆ ಕ್ಯಾಬಿನೆಟ್ ಸಭೆಯೂ ಇದೆ. ಕ್ಯಾಬಿನೆಟ್‌ ನಂತರ ಮಂತ್ರಿಗಳೊಂದಿಗೆ ಸಭೆ ನಡೆಸಿ,…

ಮುಂದೆ ಓದಿ..