ಸುದ್ದಿ 

ಆಸ್ಪತ್ರೆಯ ಎಸಿ ಕಾಪರ್ ಪೈಪ್ ಕಳವು: ₹25,000 ಮೌಲ್ಯದ pipe ಕಳ್ಳತನ

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್ 1: 2025ನಗರದ ಪ್ರಕೃತಿ ಆಸ್ಪತ್ರೆಯಲ್ಲಿ ಕಳವು ಪ್ರಕರಣ ನಡೆದಿದ್ದು, ಎಸಿ ವ್ಯವಸ್ಥೆಗೆ ಅಳವಡಿಸಿದ್ದ ಸುಮಾರು 30 ಅಡಿ ಉದ್ದದ ಕಾಪರ್ ಪೈಪ್ ಕಳ್ಳರು ಕದ್ದಿರುವ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ. ಆಸ್ಪತ್ರೆಯ ವ್ಯವಸ್ಥಾಪಕರು ನೀಡಿದ ದೂರಿನ ಪ್ರಕಾರ, ಜುಲೈ 13ರಂದು ರಾತ್ರಿ 10 ಗಂಟೆಗೆ ಎಸಿ ಪರಿಶೀಲಿಸಿದಾಗ ಎಲ್ಲವೂ ಸಹಜವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಜುಲೈ 14ರ ಬೆಳಿಗ್ಗೆ 7 ಗಂಟೆಗೆ ಮರುಪರಿಶೀಲನೆ ಮಾಡಿದಾಗ ಎಸಿ ಕೆಲಸ ಮಾಡುತ್ತಿಲ್ಲವೆಂಬುದನ್ನು ಗಮನಿಸಿದರು. ತಕ್ಷಣ ಬಿಲ್ಡಿಂಗ್ ಹೊರಭಾಗದಲ್ಲಿರುವ ಬಿಲ್ಲಿಂಗ್ ಏರಿಯಾವರೆಗೆ ಹೋಗಿ ಪರಿಶೀಲಿಸಿದಾಗ, ಅಳವಡಿಸಲಾಗಿದ್ದ ಕಾಪರ್ ಪೈಪ್ ಕಳ್ಳತನಗೊಂಡಿರುವುದು ಕಂಡುಬಂದಿತು. ಕಳವಾದ pipe ಅನ್ನು ಎಸಿ ಬಿಲ್ಲಿಂಗ್ ಏರಿಯಾದಲ್ಲಿ ಅಳವಡಿಸಲಾಗಿದ್ದು, ಶ್ರಮಪಟ್ಟು ಅಳವಡಿಸಿದ ಈ pipe ನ ಮೌಲ್ಯವು ಸುಮಾರು ₹25,000 ಆಗಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ನಿರ್ವಾಹಕರು ಈ ಬಗ್ಗೆ ಶಂಕೆ…

ಮುಂದೆ ಓದಿ..
ಸುದ್ದಿ 

ಬಸ್‌ನಲ್ಲಿ 50,000 ರೂ. ನಗದು ಕಳವು: ಅಪರಿಚಿತನ ಸಾಹಸಕ್ಕೆ ವ್ಯಾಪಾರಿ ಬಲಿ

Taluknewsmedia.com

Taluknewsmedia.comಬೆಂಗಳೂರು, ಆಗಸ್ಟ್ 1 : 2025ತೂಬಗೆರೆಯೊಂದರಲ್ಲಿ ಬಟ್ಟೆ ಅಂಗಡಿಯನ್ನು ನಡೆಸುವ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಬಸ್‌ನಲ್ಲಿ 50,000 ರೂಪಾಯಿ ನಗದು ಕಳವಾದ ಘಟನೆ ವರದಿಯಾಗಿದೆ. ಈ ಘಟನೆ ತಂತ್ರಭರಿತವಾಗಿ ನಡೆದಿದ್ದು, ಅಪರಿಚಿತ ವ್ಯಕ್ತಿಯೊಬ್ಬನು “ಕಾಲು ಫ್ರಾಕ್ಚರ್” ಆಗಿದೆ ಎಂದು ಹೇಳಿ ಸೀಟು ಪಡೆದು ನಂತರ ಹಣ ಕದ್ದಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿಯ ಪ್ರಕಾರ, ವ್ಯಾಪಾರ ಸಂಬಂಧಿತ ಕೆಲಸಕ್ಕಾಗಿ ವ್ಯಕ್ತಿಯು 29 ಜುಲೈ 2025 ರಂದು ಬೆಳಗ್ಗೆ 8 ಗಂಟೆಗೆ ತೂಬಗೆರೆಯಿಂದ ನಗದು ಹಣದೊಂದಿಗೆ ಬೆಂಗಳೂರಿಗೆ ಹೊರಟಿದ್ದರು. KA57F1968 ಸಂಖ್ಯೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅವರು ದೊಡ್ಡಬಳ್ಳಾಪುರದ ಮಾರ್ಗವಾಗಿ ಬರುತ್ತಿದ್ದರು. ಮಧ್ಯದಲ್ಲಿ ಬ್ಯಾಟರಾಯನಪುರ ಬಸ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾಲು ಫ್ರಾಕ್ಚರ್ ಆಗಿದೆ ಎಂದು ಹೇಳಿ ಸೀಟು ಕೇಳಿದ. ಮಾನವೀಯತೆಯಿಂದ ಪೀಡಿತ ವ್ಯಕ್ತಿ ಸೀಟನ್ನು ನೀಡಿದ ಬಳಿಕ, ಎಸ್ಟ್ರೀಮ್ ಮಾಲ್ ನಿಲ್ದಾಣದ ಬಳಿ ಆ ಅಪರಿಚಿತನು ಇಳಿದು…

ಮುಂದೆ ಓದಿ..
ಸುದ್ದಿ 

ಮಾದಕ ವಸ್ತು ಮಾರಾಟಕ್ಕೆ ಯತ್ನ: ತೆಲಂಗಾಣ ಮೂಲದ ವ್ಯಕ್ತಿಯಿಂದ 990 ಗ್ರಾಂ ಗಾಂಜಾ ವಶ – ಗಂಗಮ್ಮನ ಗುಡಿ ಪೊಲೀಸ್ ದಾಳಿ.

Taluknewsmedia.com

Taluknewsmedia.comಬೆಂಗಳೂರು, ಜುಲೈ 01 – ನಗರದ ಕೆ.ಜಿ.ಹಳ್ಳಿ ವ್ಯಾಪ್ತಿಯ ಅಂಗಾಳಪರಮೇಶ್ವರಿ ದೇವಸ್ಥಾನ ರಸ್ತೆ (ರೈಲ್ವೆ ಪ್ಯಾರಲಲ್ ರಸ್ತೆಯ ಬಳಿ) ಪಾಳು ಬಿದ್ದ ಮನೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 990 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ದಿನಾಂಕ 29-07-2025 ರಂದು ಮಧ್ಯಾಹ್ನ 3:05ಕ್ಕೆ ಪಿಎಸ್‌ಐ ಕವೀಶ್.ಎಸ್ ಅವರಿಗೆ ಬಾತ್ಮೀದಾರರಿಂದ ಮಾಹಿತಿ ದೊರಕಿದ್ದು, ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಖಚಿತ ವರದಿ ಸಿಕ್ಕಿತು. ಅವರು ACP ಪೀಣ್ಯ ಉಪ ವಿಭಾಗದ ಅನುಮತಿ ಪಡೆದು, ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿದರು. ಮಧ್ಯಾಹ್ನ 3:30ಕ್ಕೆ ನಡೆದ ದಾಳಿಯ ವೇಳೆ, ಸಿಮೆಂಟ್ ಬಣ್ಣದ ಪ್ಯಾಂಟ್ ಮತ್ತು ಜರ್ಕೀನ್ ಧರಿಸಿದ್ದ ವ್ಯಕ್ತಿಯೊಬ್ಬ ಬೂದು ಬಣ್ಣದ ಬ್ಯಾಗ್‌ನೊಂದಿಗೆ ಪಾಳು ಮನೆಯ ಬಳಿ ಶಂಕಿತವಾಗಿ ನಿಂತಿದ್ದನು. ಪೊಲೀಸರು ಹತ್ತಿರ ಹೋಗುತ್ತಲೇ, ಆತನು ಓಡಿ ಪಾಳು ಮನೆಯ ಓಣಿಯೊಳಗೆ…

ಮುಂದೆ ಓದಿ..
ಸುದ್ದಿ 

ಚಾಲಕನಾಗಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವಕ ನಾಪತ್ತೆ: ಕುಟುಂಬಸ್ಥರಿಂದ ಆತಂಕ

Taluknewsmedia.com

Taluknewsmedia.comಕೆಜಿ ಹಳ್ಳಿ ನಿವಾಸಿ, 20 ವರ್ಷದ ವಿನಯ್ ಕುಮಾರ್ ಎಂಬ ಯುವಕ ಕಳೆದ 13 ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಂತೆ ಅವರ ಸೋದರಿಯವರುಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಜಲಿಯವರ ಪ್ರಕಾರ, ವಿನಯ್ ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 18-07-2025 ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಆದರೆ ಆ ದಿನದ ನಂತರದಿಂದ ಇವತ್ತಿನವರೆಗೆ ಅವರು ಮನೆಗೆ ಮರಳಿಲ್ಲ. ಅದೇ ದಿನ ರಾತ್ರಿ ಅವರ ಮೊಬೈಲ್ ಸಂಖ್ಯೆಗಳಿಗೂ ಕರೆ ಮಾಡಿದಾಗ ಫೋನುಗಳು ಸ್ವಿಚ್ ಆಫ್ ಆಗಿವೆ. ವಿನಯ್ ಕುಟುಂಬದವರೊಂದಿಗೆ ಸಂಪರ್ಕ ಕೂಡ ಸಾಧಿಸಿಲ್ಲ. ಅಂಜಲಿ ಅವರು ನೀಡಿದ ಮಾಹಿತಿಯಂತೆ, ವಿನಯ್‌ಗೆ ಕನ್ನಡ ಸ್ವಲ್ಪ ಬರುವುದು ಹಾಗೂ ಹಿಂದಿಯಲ್ಲಿ ಚೆನ್ನಾಗಿ ಮಾತನಾಡುತ್ತಾರೆ. ಅವರಿಗೆ ಯಾವುದೇ ಸ್ನೇಹಿತರು ಇಲ್ಲ, ಮತ್ತು ಎಲ್ಲೆಡೆ ಹುಡುಕಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ತಮ್ಮನನ್ನು ಪತ್ತೆ ಹಚ್ಚುವಂತೆ ಅವರು…

ಮುಂದೆ ಓದಿ..
ಸುದ್ದಿ 

ಮನೆ ಬೀಗ ಹಾಕಿ ಚಿನ್ನದ ಚೈನ್ ಕಳವು – ಕಳ್ಳತನ ಪ್ರಕರಣ ದಾಖಲು

Taluknewsmedia.com

Taluknewsmedia.comಬೆಂಗಳೂರು, ಜುಲೈ 30 – ಆನೇಕಲ್ ಪ್ರದೇಶದಲ್ಲಿ ಮನೆ ಬೀಗ ಹಾಕಿ ಒಳನುಗ್ಗಿದ ದುಷ್ಕರ್ಮಿಗಳು, ಗಾದ್ರೇಜ್ ಬೀರುವಿನಲ್ಲಿ ಇಡಲಾಗಿದ್ದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಸ್ಥಳೀಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ಶ್ರೀಮತಿ ರಮಾ ಕೊಂ ರಾಮು ಅವರು, ತಾವು ಗಂಡ ಹಾಗೂ ಮಕ್ಕಳೊಂದಿಗೆ ವಾಸವಿದ್ದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ದಿನಾಂಕ 30-07-2025 ರಂದು ಬೆಳಗ್ಗೆ 7:30 ಗಂಟೆಗೆ ಅವರ ಮಕ್ಕಳು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದು, ನಂತರ ಬೆಳಗ್ಗೆ 9:00 ಗಂಟೆಗೆ ರಮಾ ದೆಯೂ ಸಹ ತನ್ನ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಗಂಡನು ಮನೆಯಲ್ಲೇ ಇದ್ದನು. ಸಂಜೆ 6:30ರ ಸುಮಾರಿಗೆ ಮನೆಗೆ ಹಿಂತಿರುಗಿದಾಗ ಬಾಗಿಲಿಗೆ ಬೀಗ ಹಾಕಿರುವುದನ್ನು ಅವರು ಗಮನಿಸಿದರು. ತಕ್ಷಣ ಮನೆ ಮಾಲೀಕರ ಸಹಾಯದಿಂದ ಬೀಗ ತೆಗೆಯಲಾಯಿತು. ಮನೆಯೊಳಗೆ ಪ್ರವೇಶಿಸಿದಾಗ…

ಮುಂದೆ ಓದಿ..
ಸುದ್ದಿ 

ಸೋಂಪುರ ಗೇಟ್ ಬಳಿ ಶಶಿಕಲಾ ಮತ್ತು ಮಗ ಕಾಣೆಯಾಗಿದೆ – ಪತ್ತೆಹಚ್ಚುವಂತೆ ಕುಟುಂಬದ ಮನವಿ

Taluknewsmedia.com

Taluknewsmedia.comಸರ್ಜಾಪುರ, ಜುಲೈ1, 2025 ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿಯ ಸೋಂಪುರ ಗೇಟ್ ನಲ್ಲಿ ವಾಸವಾಗಿದ್ದ ಶಶಿಕಲಾ ಮತ್ತು ಅವರ ಮಗ ವಿನಯ್ ಕುಮಾರ್ ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದು, ಈ ಕುರಿತು ಅವರ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಯಚೂರು ಜಿಲ್ಲೆಯ ಉಟಕನೂರು ಗ್ರಾಮ ಮೂಲದ ಕುಟುಂಬವು ಕಳೆದ 18 ವರ್ಷಗಳಿಂದ ಬೆಂಗಳೂರು ನಗರದಲ್ಲಿ ವಾಸವಿದ್ದು, ಬಸವಲಿಂಗಪ್ಪ ರವರು ವಿದ್ಯುತ್ ತಜ್ಞನಾಗಿ ಕೆಲಸ ಮಾಡುತ್ತಿದ್ದಾರೆ. ದಿನಾಂಕ 26-07-2025 ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಶಶಿಕಲಾ ಅವರು ತಮ್ಮ ಮಗನೊಂದಿಗೆ ಮನೆಯಿಂದ ಹೊರಟ್ಟಿದ ಬಳಿಕ ವಾಪಸ್ ಬಂದಿಲ್ಲ. ಸಂಬಂಧಿಕರು ಹಾಗೂ ಆತ್ಮೀಯರ ಮನೆಗಳಲ್ಲಿ ಹುಡುಕಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯಾವುದೇ ವಿಳಾಸ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು 30-07-2025 ರಂದು ಸಂಜೆ 7 ಗಂಟೆಗೆ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ಸ್ಥಳೀಯ ಪೊಲೀಸರು…

ಮುಂದೆ ಓದಿ..
ಸುದ್ದಿ 

ಮಟನ್ ಅಂಗಡಿಗೆ ಕಳ್ಳರು ನುಗ್ಗಿ ₹20,000 ನಗದು ಹಾಗೂ ಸ್ಟವ್ ಕಳ್ಳತನ

Taluknewsmedia.com

Taluknewsmedia.comಆನೇಕಲ್, ಜುಲೈ 31:ಆನೇಕಲ್ ಚಂದಾಪುರ ಮುಖ್ಯರಸ್ತೆಯ ಜೈಭೀಮ್ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಮಟನ್ ಅಂಗಡಿಗೆ ಕಳ್ಳರು ನುಗ್ಗಿ ₹20,000 ನಗದು ಹಾಗೂ ಒಂದು ಗ್ಯಾಸ್ ಸ್ಟವ್ ಸ್ಟವ್ ಅನ್ನು ಕದ್ದಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಅಂಗಡಿಯ ಮಾಲೀಕರಾದ ಕೆ. ಸಾದೀಕ್ ಪಾಷ್ ಅವರು ದಿನಾಂಕ 31/07/2025 ರಂದು ಬೆಳಿಗ್ಗೆ 11 ಗಂಟೆಗೆ ಠಾಣೆಗೆ ಹಾಜರಾಗಿ ದೂರು ನೀಡಿದವರಾಗಿದ್ದು, ಅವರು ತಮ್ಮ ಅಂಗಡಿಯನ್ನು 30ನೇ ತಾರೀಕಿನ ರಾತ್ರಿ ಸುಮಾರು 8.30ಕ್ಕೆ ಮುಚ್ಚಿ ಮನೆಗೆ ತೆರಳಿದ್ದರು. ಆದರ ದಿನ ಬೆಳಗ್ಗೆ 5.40ರ ಸುಮಾರಿಗೆ ಅಂಗಡಿ ತೆರೆಯಲು ಬಂದಾಗ ಮುಂಭಾಗದ ಬಾಗಿಲು ಒಡೆದು ಹಾಕಿರುವುದು ಗಮನಕ್ಕೆ ಬಂತು. ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ ಕ್ಯಾಶ್ ಬಾಕ್ಸ್‌ನಲ್ಲಿಟ್ಟಿದ್ದ ₹20,000 ನಗದು ಹಾಗೂ ಗ್ಯಾಸ್ ಸ್ಟವ್ ಕಳ್ಳತನವಾಗಿರುವುದು ತಿಳಿದುಬಂದಿದೆ. ಅನಾಮಿಕ ಕಿಡಿಗೇಡಿಗಳು ಅಂಗಡಿಯೊಳಗೆ ನುಗ್ಗಿ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಸಂದರ್ಭಕ್ಕೆ ಸಂಬಂಧಿಸಿದಂತೆ ಆನೇಕಲ್…

ಮುಂದೆ ಓದಿ..
ಸುದ್ದಿ 

” ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ “

Taluknewsmedia.com

Taluknewsmedia.comಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್…… ಆದ್ದರಿಂದ…… ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ….. ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ……. ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ…… ಸಾವು – ಸೋಲು – ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು ಇವುಗಳ ಕಾರಣಕ್ಕಾಗಿಯೇ ಆಗಿರುತ್ತದೆ.ಆಸ್ಪತ್ರೆ, ಪೋಲೀಸ್, ನ್ಯಾಯಾಲಯ, ದೇವರು, ಧರ್ಮ, ಸ್ವಾಮಿಗಳು ಎಲ್ಲವುಗಳ ಸುತ್ತ ನಾವು ಸುತ್ತುವುದು ಮತ್ತು ಅನೇಕ ಭ್ರಮಾತ್ಮಕ ಮೌಢ್ಯಗಳಿಗೆ ಒಳಗಾಗುವುದು ಸಹ ಈ ಮೂರರ ಕಾರಣಕ್ಕಾಗಿ.ಇವುಗಳನ್ನು ಘನತೆಯಿಂದ ಸ್ವೀಕರಿಸುವ, ವಾಸ್ತವವಾಗಿ ಎದುರಿಸುವ, ಸಹಜವಾದ ಕ್ರಿಯೆ ಎನ್ನುವ ಸಾಮಾಜಿಕ ವಾತಾವರಣ ನಮ್ಮ ವ್ಯವಸ್ಥೆಯಲ್ಲಿ ಇಲ್ಲ.ಮನುಷ್ಯ ಸಂಘ ಜೀವಿ. ಒಂದು ವೇಳೆ ವೈಯಕ್ತಿಕ ನೆಲೆಯಲ್ಲಿ ಇವುಗಳನ್ನು ಸ್ವಾಭಾವಿಕವಾಗಿ ಒಪ್ಪಿಕೊಂಡರು ನಮ್ಮ ಸುತ್ತಮುತ್ತಲಿನ ಜನರ ಪ್ರತಿಕ್ರಿಯೆ ಅತ್ಯಂತ ನಕಾರಾತ್ಮಕವಾಗಿ ಇರುತ್ತದೆ. ಅದನ್ನು ಎದುರಿಸುವುದೇ ಒಂದು ದೊಡ್ಡ ಸವಾಲು.ಇದು ಹೇಳುವಷ್ಟು ಸುಲಭವಲ್ಲ. ಆದರೆ…

ಮುಂದೆ ಓದಿ..
ಸುದ್ದಿ 

ಬಾಲಕನ ಅಪಹರಿಸಿ ಬರ್ಬರ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು..

Taluknewsmedia.com

Taluknewsmedia.comಬೆಂಗಳೂರು: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್‌ನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಗಳಾಗಿ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಗುರುವಾರ ತಡರಾತ್ರಿ ಕಗ್ಗಲೀಪುರ ರಸ್ತೆಯ ಬಳಿಯಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಳಿಮಾವು ಠಾಣೆ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ, ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್ಐ ಅರವಿಂದ್ ಕುಮಾರ್ ಅವರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.ಘಟನೆಯಲ್ಲಿ ಗುರುಮೂರ್ತಿಯ ಎರಡೂ ಕಾಲುಗಳು ಮತ್ತು ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಬೆಂಗಳೂರು ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ನಿಶ್ಚಿತ್ ಮತ್ತು ಅವನ ಪೋಷಕರು ವಾಸಿಸುತ್ತಿದ್ದರು. ನಿಶ್ಚಿತ್‌ನ ತಂದೆ ನಗರದ ಪ್ರತಿಷ್ಠಿತ…

ಮುಂದೆ ಓದಿ..
ಸುದ್ದಿ 

ಜಮೀನಿಗೆ ಅಕ್ರಮ ಪ್ರವೇಶ, ಹಲ್ಲೆ – ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲು

Taluknewsmedia.com

Taluknewsmedia.comಬೆಂಗಳೂರು, ಜುಲೈ 29:ಸರ್ಜಾಪುರ ಹೋಬಳಿ, ಹಲಹಳ್ಳಿ ಗ್ರಾಮದಲ್ಲಿ ಜಮೀನಿನ ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿ ಉಂಟಾದ ಜಗಳವು ಹಲ್ಲೆಗೆ reason ಆಗಿ, ಪೋಲೀಸ್ ಠಾಣೆಗೆ ದೂರು ನೀಡಿದ ಘಟನೆ ಬೆಳಕಿಗೆ ಬಂದಿದೆ. ಬಾಬು ಅವರ ಹೇಳಿಕೆಯಂತೆ, ಅವರು ಸರ್ವೆ ನಂ.71 ರಲ್ಲಿ ಇರುವ 29 ಗುಂಟೆ ಜಮೀನನ್ನು ದಿನಾಂಕ 03/06/2024 ರಂದು ಕುಸುಮಾ ಆರ್ ಶೆಟ್ಟಿ ಎಂಬುವವರಿಂದ ಖರೀದಿಸಿದ್ದರು. ಈ ಜಮೀನಿಗೆ ಭೂ ಪರಿವರ್ತನೆಯನ್ನೂ ಮಾನ ಜಿಲ್ಲಾಧಿಕಾರಿಗಳಿಂದ 24/05/2024 ರಂದು ಪಡೆದು, ಸುತ್ತಲೂ ಕಾಂಪೌಂಡ್ ಗೋಡೆಯನ್ನೂ ಕಟ್ಟಿಸಿದ್ದಾಗಿ ತಿಳಿಸಿದ್ದಾರೆ. ಆದರೆ ದಿನಾಂಕ 26/07/2025 ರಂದು ಮಧ್ಯಾಹ್ನ 2:30 ಗಂಟೆ ಸುಮಾರಿಗೆ, ಬಾಬು ಅವರ ಅಣ್ಣನ ಮಗ ವಿನೋದ್ ಅವರಿಂದ ಫೋನ್ ಕರೆ ಬಂದಿದ್ದು, “ಯಾರೋ 5-6 ಜನರು ಜಮೀನಿಗೆ ಬಂದು ಕಾಂಪೌಂಡ್ ಗೋಡೆಯನ್ನು ಒಡೆಯುತ್ತಿದ್ದಾರೆ” ಎಂಬ ಮಾಹಿತಿ ನೀಡಿದ್ದಾನೆ. ಬಾಬು ಅವರು ಸ್ಥಳಕ್ಕೆ ತಕ್ಷಣ ತೆರಳಿದಾಗ, ಗೌರಮ್ಮ, ಆಕೆಯ…

ಮುಂದೆ ಓದಿ..