ಶಿರಹಟ್ಟಿ ಶಾಸಕರ ಲೋಕಾಯುಕ್ತ ಬಲೆ: ಭ್ರಷ್ಟಾಚಾರದ ‘ತಡೆಗೋಡೆ’ ಕುಸಿದಾಗ…
ಶಿರಹಟ್ಟಿ ಶಾಸಕರ ಲೋಕಾಯುಕ್ತ ಬಲೆ: ಭ್ರಷ್ಟಾಚಾರದ ‘ತಡೆಗೋಡೆ’ ಕುಸಿದಾಗ… ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಂಕಧಾಳ ಗ್ರಾಮದಲ್ಲಿ ರಸ್ತೆಯ ಪಕ್ಕದ ಜನರ ರಕ್ಷಣೆಗಾಗಿ ಒಂದು ಭದ್ರವಾದ ‘ತಡೆಗೋಡೆ’ ನಿರ್ಮಾಣವಾಗಬೇಕಿತ್ತು. ಆದರೆ ದುರಂತವೆಂದರೆ, ಆ ಗೋಡೆ ಎದ್ದು ನಿಲ್ಲುವ ಮೊದಲೇ ಅದನ್ನು ನಿರ್ಮಿಸಬೇಕಾದ ಜನಪ್ರತಿನಿಧಿಯ ನೈತಿಕತೆಯ ತಡೆಗೋಡೆ ಲೋಕಾಯುಕ್ತ ದಾಳಿಗೆ ಧೂಳೀಪಟವಾಗಿದೆ. ಒಬ್ಬ ವೈದ್ಯರಾಗಿ ಸಮಾಜದ ರೋಗ ವಾಸಿಮಾಡಬೇಕಾದವರು ಮತ್ತು ಒಬ್ಬ ಶಾಸಕರಾಗಿ ಕ್ಷೇತ್ರದ ಹಿತ ಕಾಯಬೇಕಾದವರು ಇಂದು ಭ್ರಷ್ಟಾಚಾರದ ಕಡುಬಣ್ಣದ ಸುಳಿಗೆ ಸಿಲುಕಿದ್ದಾರೆ. ಗುತ್ತಿಗೆದಾರ ವಿಜಯ ಪೂಜಾರ ನೀಡಿದ ದೂರಿನ ಮೇರೆಗೆ ನಡೆದ ಈ ನಾಟಕೀಯ ಬೆಳವಣಿಗೆಯು ರಾಜಕೀಯ ವ್ಯವಸ್ಥೆಯ ಒಳಗಿನ ವ್ಯವಸ್ಥಿತ ಕೊಳೆ ಮತ್ತು ನೈತಿಕ ಅಧಃಪತನವನ್ನು ಜಗಜ್ಜಾಹೀರುಗೊಳಿಸಿದೆ. ಸ್ಟೆತಸ್ಕೋಪ್ ಹಿಡಿಯಬೇಕಾದ ಕೈಗೆ ‘ಕೆಂಪು ನೀರು’ ಅಂಟಿದಾಗ… ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ವೃತ್ತಿ ಮತ್ತು ಪ್ರವೃತ್ತಿಯ ನಡುವಿನ ವೈರುಧ್ಯ ಆಘಾತಕಾರಿಯಾಗಿದೆ. ವೈದ್ಯಕೀಯ…
ಮುಂದೆ ಓದಿ..
