ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ – ಗಂಡನ ವಿರುದ್ಧ ಕೇಸು ದಾಖಲು
ಬೆಂಗಳೂರು ಗ್ರಾಮಾಂತರ, ಜುಲೈ 8, 2025: ತಾವು ಹಲವು ವರ್ಷಗಳಿಂದ ಗಂಡನಿಂದ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಒಳಗಾಗುತ್ತಿದ್ದೇನೆ ಎಂಬ ಪತ್ನಿಯ ದೂರಿನ ಮೇರೆಗೆ, ಗಂಡನ ವಿರುದ್ಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ದೂರುದಾರರಾದ ಮಹಿಳೆ ತಮ್ಮ ಮನವಿಯಲ್ಲಿ, ತವರು ಮನೆ ಗಂಡರಗೋಳಿಪುರವಾಗಿದ್ದು, 2018ರ ಮೇ 9 ರಂದು ಕನ್ನಮಂಗಲ ಗ್ರಾಮದ ಎಲ್.ಜಿ. ಮಹಲ್ ಕಲ್ಯಾಣ ಮಂಟಪದಲ್ಲಿ ಹರೀಶ್ ಎಸ್.ಆರ್ ಅವರೊಂದಿಗೆ ವಿವಾಹವಾಗಿದೆ ಎಂದು ತಿಳಿಸಿದ್ದಾರೆ. ದಂಪತಿಗೆ 2019ರ ಜನವರಿ 31ರಂದು ಮಗುವೂ ಆಗಿದೆ. ಆದರೆ ಮದುವೆಯ ಬಳಿಕ, ಗಂಡ ಮೊಬೈಲ್ನಲ್ಲಿ ಇತರ ಮಹಿಳೆಯರೊಂದಿಗೆ ಮಾತನಾಡುತ್ತಿದ್ದುದು ಕಂಡು ಬಂದು ವಿಚಾರಿಸಿದಾಗ, ತಪ್ಪು ಒಪ್ಪಿಕೊಂಡಿದ್ದ. ನಂತರವೂ ಪ್ರತಿದಿನ ಮದ್ಯಪಾನ ಮಾಡಿ ಮನೆಯವರಿಗೆ ವಿರೋಧವಾಗಿ ಮಾತನಾಡಿದೆಯೆಂದು ಆರೋಪಿಸಿ, ಜಗಳವಾಡಿ, ದೈಹಿಕವಾಗಿ ಹೊಡೆದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನು ಎಂದು ದೂರಿನಲ್ಲಿ ಹೇಳಲಾಗಿದೆ. 07 ಜುಲೈ 2025ರಂದು ರಾತ್ರಿ ಸುಮಾರು 7:30ರ…
ಮುಂದೆ ಓದಿ..
