ಸುದ್ದಿ 

ಹಿರಿಯ ರೈತ ನಾರಾಯಣ ಗೌಡ ರಿಗೆ ರಸ್ತೆಯ ಅಪಘಾತದಲ್ಲಿ ಗಂಭೀರ ಗಾಯ : ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸಿದ ಬೈಕ್ ಸವಾರ.

ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ನಾಗತಿಹಳ್ಳಿ ಗ್ರಾಮದಲ್ಲಿ ನಡೆದ ಒಂದು ರಸ್ತೆ ಅಪಘಾತದಲ್ಲಿ ಹಿರಿಯ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಬೈಕ್ ಸವಾರ ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸಿದ್ದರಿಂದ ಗಾಯಾಳು ಕುಟುಂಬದವರು ಈಗ ಪೊಲೀಸ್ ದೂರು ದಾಖಲಿಸಿದ್ದಾರೆ.ಎನ್. ನಿಕೇಶ್ (38), ರವರ ಪ್ರಕಾರ ನಾಗತಿಹಳ್ಳಿ ಗ್ರಾಮ, ತಮ್ಮ ತಂದೆ ಎನ್.ಎಂ. ನಾರಾಯಣಗೌಡ (65) ಅವರು “ಕದಬಹಳ್ಳಿಗೆ ಹೋಗಿ ಬರುತ್ತೇನೆ” ಎಂದು ಹೊಂಡಾ ಡಿಯೋ ಸ್ಕೂಟರ್ (ನಂ. ಕೆಎ-41-ಇ.ಕ್ಯೂ-7137) ನಲ್ಲಿ ಹೊರಟಿದ್ದರು. ಬಳಿಕ, ಅವರ ಗ್ರಾಮಸ್ಥ ಎನ್.ಟಿ. ನಾಗರಾಜೇಗೌಡ ಅವರನ್ನು ಸ್ಕೂಟರ್ ಹಿಂಬದಿಯಲ್ಲಿ ಕೂರಿಸಿಕೊಂಡು ಎ.ನಾಗತಿಹಳ್ಳಿ ಕಡೆಗೆ ವಾಪಸ್ಸಾಗುತ್ತಿದ್ದರು.ತಮ್ಮ ಗ್ರಾಮದ ಎನ್.ಟಿ. ಬಾಲಮೂರ್ತಿ ಅವರ ತೋಟದ ಹತ್ತಿರ ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ, ಎದುರಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಹೋಂಡಾ ಶೈನ್ ಬೈಕ್ (ನಂ. ಕೆಎ-50-ವೈ-8184) ಡಿಕ್ಕಿಯಾಗಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ.ಅಪಘಾತ ಮಾಡಿದ ಬೈಕ್ ಸವಾರನು ಇದೇ…

ಮುಂದೆ ಓದಿ..
ಅಂಕಣ 

ಸಾವಿನ ಮಾರ್ಗಗಳ ಹುಡುಕಾಟದಲ್ಲಿ ಮಾನವ ಜನಾಂಗ……….

ಬಟ್ಟೆ ಇಲ್ಲದೆ, ಊಟವಿಲ್ಲದೆ, ವಸತಿ ಇಲ್ಲದೆ, ಕುಟುಂಬಗಳಿಲ್ಲದೆ, ವಾಹನಗಳಿಲ್ಲದೆ, ಶಾಲಾ-ಕಾಲೇಜುಗಳಿಲ್ಲದೆ, ಆಸ್ಪತ್ರೆ, ಸರ್ಕಾರಗಳಿಲ್ಲದೆ ಹೇಗೋ ಬದುಕುತ್ತಿದ್ದ ಮಾನವ ಅತ್ಯಂತ ವೇಗವಾಗಿ ತನ್ನ ಸುಖ ಭೋಗಕ್ಕೆ ಎಷ್ಟೆಲ್ಲಾ ಸಾಧ್ಯವೋ ಅಷ್ಟೆಲ್ಲಾ ಅನುಕೂಲಗಳನ್ನು ಮಾಡಿಕೊಳ್ಳುತ್ತಾ ಇಂದಿನ ಪರಿಸ್ಥಿತಿ ತಲುಪಿದ್ದಾನೆ……ಗಂಟೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಸಂಚರಿಸಬಹುದಾದ ಯುದ್ಧ ವಿಮಾನಗಳು, ಚಂದ್ರಗ್ರಹ, ಮಂಗಳ ಲೋಕಕ್ಕೆ ಹೋಗಬಹುದಾದ ರಾಕೆಟ್ ಗಳು, ವಿಶ್ವದ ಯಾವ ಜಾಗವನ್ನು ಬೇಕಾದರೂ ಮನೆಯಲ್ಲಿ ಕುಳಿತು ನೋಡಬಹುದಾದ ಸಂಪರ್ಕ ಸಾಧನಗಳು, ಯಾರೊಂದಿಗೆ ಬೇಕಾದರೂ ಸಂವಹನ ನಡೆಸಬಹುದಾದ ಮಾಧ್ಯಮಗಳು, ಇನ್ನೂ ಮುಂದುವರೆದು ಇತ್ತೀಚೆಗೆ ಬೆಳವಣಿಗೆ ಆಗುತ್ತಿರುವ ಎಐ ತಂತ್ರಜ್ಞಾನ, ಜೊತೆಗೆ ವಿಧವಿಧದ ಭಕ್ಷ್ಯ ಭೋಜನಗಳನ್ನು, ಬಣ್ಣ ಬಣ್ಣದ ಬಟ್ಟೆಗಳನ್ನು, ಮಾದಕ ಪಾನೀಯಗಳನ್ನು, ಅತ್ಯುತ್ತಮ ಸಂಬಂಧಗಳನ್ನು, ವೈಭವೋಪೇತ ಮನೆಗಳು ಎಲ್ಲವನ್ನು ಇಟ್ಟುಕೊಂಡು, ಸುಖಪಡಬೇಕಾದ ಕಾಲದಲ್ಲಿ ಮನುಷ್ಯ ಸಾವಿನ ಮಾರ್ಗಗಳ ಹುಡುಕಾಟದಲ್ಲಿರುವುದು ” ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ” ಎಂಬ…

ಮುಂದೆ ಓದಿ..
ಸುದ್ದಿ 

ಜೆ.ಪಿ ನಗರದಲ್ಲಿ ಹೋಂಡಾ ಆ್ಯಕ್ಟಿವಾ ಕಳ್ಳತನ – ಸೆಕ್ಯೂರಿಟಿ ಗಾರ್ಡಿನ ದ್ವಿಚಕ್ರ ವಾಹನ.

ಬೆಂಗಳೂರು, ಜೂನ್ 19:ನಗರದ ಜಯನಗರ 4ನೇ ಬ್ಲಾಕ್‌ನ ಎನ್.ಪಿ.ಎಸ್ ಶಾಲೆಯ ಎದುರು ನಿಲ್ಲಿಸಿದ್ದ ಒಂದು ಸೆಕೆಂಡ್ ಹ್ಯಾಂಡ್ ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನವು ಕಾಣೆಯಾಗಿರುವ ಪ್ರಕರಣ ನಡೆದಿದೆ. ಗಾಡಿಯ ಮಾಲೀಕರಾಗಿರುವ ಸೆಕ್ಯೂರಿಟಿ ಗಾರ್ಡು ಈ ಬಗ್ಗೆ ತಿಲಕ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.2024ರಲ್ಲಿ ಖರೀದಿಸಿದ KA-03-JS-8638 ನೋಂದಾಯಿತ ನಂಬರ್ ಹೊಂದಿರುವ 2018 ಮಾದರಿಯ ಗ್ರೇ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಅನ್ನು ಅವರು ಪ್ರತಿದಿನದಂತೆ 2025ರ ಜೂನ್ 11ರಂದು ಬೆಳಿಗ್ಗೆ 7:30ರ ಸಮಯದಲ್ಲಿ ಶಾಲೆಯ ಮುಂದೆ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 2:00 ಗಂಟೆ ಸುಮಾರಿಗೆ ವಾಪಸ್ ಬಂದಾಗ, ವಾಹನವು ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿದ್ದು, ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ.ಬದರಿನಾಥ್ ಚಟರ್ಜಿಯವರು ಕೆಲ ದಿನಗಳ ಹಿಂದೆ ಗಾಡಿಯ ಕೀ ಕಳೆದುಕೊಂಡ ಕಾರಣ ಸ್ಕೂಟರ್ ಅನ್ನು ಡೈರೆಕ್ಟ್ ಸ್ಟಾರ್ಟ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಇದನ್ನು ಅಪಾಯದ ಅವಕಾಶವನ್ನಾಗಿ ಮಾಡಿಕೊಂಡು…

ಮುಂದೆ ಓದಿ..
ಸುದ್ದಿ 

ಮಹಿಳೆಯ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ಹಾಗೂ ಜೀವ ಬೆದರಿಕೆ: ಚರಣ್‌ಜಿತ್‌ಸಿಂಗ್ ಎಂಬುವವನ ವಿರುದ್ಧ ಪಿಸಿಆರ್ ದಾಖಲೆ.

ಬೆಂಗಳೂರು, ಜೂನ್ 19, 2025 –ಬೆಂಗಳೂರು ನಗರದ ಚಿಕ್ಕಪೇಟೆಯಲ್ಲಿ ಅತಿಥಿ ಲಾಡ್ಜ್‌ ಒಂದರಲ್ಲಿ ಮಹಿಳೆಯೊಬ್ಬರ ಇಚ್ಛೆಯ ವಿರುದ್ಧ ಲೈಂಗಿಕ ಕ್ರಿಯೆ ನಡೆಸಿ, ತಡೆಯೊಡ್ಡಿದಾಗ ಪ್ರಾಣ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ನ್ಯಾಯಾಲಯದ ಆದೇಶದಂತೆ ಪಿಸಿಆರ್ ದಾಖಲಿಸಿ, ಪ್ರಕರಣ ದಾಖಲಾತಿ ನಡೆಯುತ್ತಿದೆ.ಶ್ರೀಮತಿ ಜೋಶಿನ್ ಫರ್ನಾಂಡಿಸ್ ಅವರು ನೀಡಿದ ದೂರಿನ ಪ್ರಕಾರ, 2019ರ ಏಪ್ರಿಲ್ 24ರಂದು ಗೋವಾದಲ್ಲಿ ಚರಣ್‌ಜಿತ್‌ಸಿಂಗ್ ಕಲಾ ಎಂಬಾತನ ಪರಿಚಯವಾಗಿತ್ತು. ಅವರು ಕಾಲಕಾಲಕ್ಕೆ ಭೇಟಿಯಾಗುತ್ತಿದ್ದು, 2025ರ ಫೆಬ್ರವರಿ 18ರಂದು ಇಬ್ಬರೂ ಚಿಕ್ಕಪೇಟೆಯ ಶಿವಗಂಗಾ ಲಾಡ್ಜ್‌ನಲ್ಲಿ 15 ದಿನಗಳ ಕಾಲ ರೂಂ ಬುಕ್ ಮಾಡಿಕೊಂಡಿದ್ದರು.ಶ್ರೀಮತಿ ಜೋಶಿನ್ ರವರ ಆರೋಪದ ಪ್ರಕಾರ, ಚರಣ್‌ಜಿತ್‌ಸಿಂಗ್ ಪ್ರತಿದಿನ ಮದ್ಯಪಾನ ಮಾಡಿ, ಆಕೆಯ ಸ್ಪಷ್ಟ ವಿರೋಧವನ್ನು ಲೆಕ್ಕಿಸದೇ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಈ ಕೃತ್ಯಕ್ಕೆ ತಡೆ ನೀಡಲು ಯತ್ನಿಸಿದಾಗ, ಕತ್ತನ್ನು ಹಿಸುಕಿ ಕೊಲ್ಲಲು ಪ್ರಯತ್ನ ಪಟ್ಟು, ಆಕೆಗೆ ಪ್ರಾಣ…

ಮುಂದೆ ಓದಿ..
ಸುದ್ದಿ 

ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ – ಲಕ್ಷಾಂತರ ರೂಪಾಯಿ ವಂಚನೆಯ ಪ್ರಕರಣ ದಾಖಲೆ

ಬೆಂಗಳೂರು, ಜೂನ್ 19:ನಗರದ ಚಿಕ್ಕಪೇಟೆ ಪ್ರದೇಶದಲ್ಲಿರುವ ‘ಅರಾಧನಾ ಟೆಕ್ಸ್ಟೈಲ್ಸ್’ ಅಂಗಡಿಯಲ್ಲಿ ವ್ಯಾಪಾರದ ಹೆಸರಿನಲ್ಲಿ ನಂಬಿಕೆ ದ್ರೋಹ ಹಾಗೂ ಲಕ್ಷಾಂತರ ರೂಪಾಯಿಗಳ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅಂಗಡಿಯ ಮಾಲಕರು ನಾಲ್ವರು ವ್ಯಕ್ತಿಗಳ ವಿರುದ್ಧ ಪಿಸಿಆರ್ (PCR) ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ. ಮಾಹಿತಿ ಪ್ರಕಾರ, ಅಂಗಡಿಯ ನಿರ್ವಹಣೆಗೆ ನೇಮಿಸಲಾಗಿದ್ದ ಹರೇಂದ್ರನಾಥ ಎಂಬಾತನು ಮಾಲಕರ ವಿಶ್ವಾಸಕ್ಕೆ ಧಕ್ಕೆ ತಂದಿರುವುದಾಗಿ ಆರೋಪಿಸಲಾಗಿದೆ. ಅಂಗಡಿಯ ಕೀಲಿಯನ್ನು ಪಡೆದ ನಂತರ, ಮಾಲಿಕರ ಅನುಮತಿಯಿಲ್ಲದೆ ರೂ. 18 ಲಕ್ಷ ಮೌಲ್ಯದ ಸೀರೆಗಳನ್ನು ಯಾವುದೇ ಬಿಲ್ ರವಾನೆ ಇಲ್ಲದೇ ಮಾರಾಟ ಮಾಡಿದ್ದಾರೆ. ಅಷ್ಟರಲ್ಲಿ, ಕೌಟುಂಬಿಕ ಸಮಸ್ಯೆ ಹೆಸರಿನಲ್ಲಿ ಫೋನ್ ಪೇ ಮೂಲಕ ರೂ. 6,86,300/- ಹಣ ಪಡೆದಿದ್ದು, ಒಂದು ತಿಂಗಳಲ್ಲಿ ಹಿಂದಿರುಗಿಸುತ್ತೇನೆ ಎಂಬ ಭರವಸೆ ನೀಡಿದರೂ ಈವರೆಗೆ ಹಣ ವಾಪಸ್ಸಾಗಿಲ್ಲ. ಇದೇ ರೀತಿಯಲ್ಲಿ, ಇನ್ನಿಬ್ಬರು ಸೀರೆ ಏಜೆಂಟ್‌ಗಳಾದ ರಮೇಶ್…

ಮುಂದೆ ಓದಿ..
ಸುದ್ದಿ 

ಹೆಚ್‌ಎಸ್‌ಆರ್ ಲೇಔಟ್‌ ನಲ್ಲಿ ಪಿಜಿ ದೊರೆಯುತ್ತದೆ ಎಂದು ನಂಬಿಸಿ, ಯುವಕನಿಂದ ₹1.17 ಲಕ್ಷ ವಂಚನೆ

ಬೆಂಗಳೂರು, ಜೂನ್ 19 – ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ (ಪೇಯಿಂಗ್ ಗೆಸ್ಟ್‌) ಬೇಕೆಂದು ಹುಡುಕುತ್ತಿದ್ದ ಒಬ್ಬ ಸಾಫ್ಟ್‌ವೇರ್ ಉದ್ಯೋಗಿಯು ಆನ್‌ಲೈನ್ ವಂಚನೆಗೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅರ್ಜಿದಾರರಾದ ಪ್ರಶಾಂತ್ ಕುಮಾರ್ ಪ್ರಜಾಪತಿ ಅವರು ಈ ಸಂಬಂಧ ದೂರು ದಾಖಲಿಸಿದ್ದಾರೆ.ಪ್ರಶಾಂತ್ ರವರು #72, ಫಸ್ಟ್ ಫ್ಲೋರ್, 14ನೇ ಮೇನ್, 16ನೇ ಕ್ರಾಸ್‌ ರೋಡ್, ಐಪಿಎಸ್ ಕಾಲೋನಿ, ಸೆಕ್ಟರ್ 4, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದು, BUYSTARS ARKRMY TECHNOLOGY PVT LTD ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು MagicBricks ಎಂಬ ಹೌಸಿಂಗ್ ವೆಬ್‌ಸೈಟ್‌ ಮೂಲಕ ಪಿಜಿ ಹುಡುಕುತ್ತಿದ್ದ ಸಂದರ್ಭದಲ್ಲಿ ‘ಸ್ವಸ್ತಿಕ್’ ಎಂಬ ವ್ಯಕ್ತಿ (ಮೊಬೈಲ್: 7879588250) ಪಿಜಿ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪಿಜಿ ಇರುವುದಾಗಿ ತಿಳಿಸಿದರು.ಇದನ್ನು ನಂಬಿದ ಪ್ರಶಾಂತ್ ಮೊದಲು ₹2,000 ಟೋಕನ್ ಅಮೌಂಟ್ ಅನ್ನು 2025ರ ಜೂನ್ 8 ರಂದು QR…

ಮುಂದೆ ಓದಿ..
ಸುದ್ದಿ 

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳಿಂದ ವಿಶೇಷ ಶೋಧನೆ – ನಿಷೇಧಿತ ವಸ್ತುಗಳ ಪತ್ತೆ!

ಬೆಂಗಳೂರು, ಜೂನ್ 19:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 16-06-2025 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷ ಶೋಧನಾ ಕಾರ್ಯಾಚರಣೆ ನಡೆಯಿತು. ಉಪ ಪೊಲೀಸ್ ಆಯುಕ್ತ (ಅಪರಾಧ-2) ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಶೋಧನೆಯ ವೇಳೆ ಪತ್ತೆಯಾದ ವಸ್ತುಗಳು: ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ) PI ಕಿರಣ್ ಕುಮಾರ್ ಮತ್ತು ತಂಡವು ವಿಚಾರಣಾಧೀನ ಬಂಧಿಗಳು ತಂಗಿರುವ ಬ್ಯಾರಕ್ ನಂ.5/2ರಲ್ಲಿ ಶೋಧನೆ ನಡೆಸಿ ₹5,500 ನಗದು, ಕಸ್ತೂರಿ ಮೇತಿ ಸೊಪ್ಪು, ಬೆಂಕಿ ಪೊಟ್ಟಣ, SK ಬೀಡಿ ಪ್ಯಾಕೆಟ್‌ಗಳು, ಗಾಂಜಾ ಸೇದುವ ಕೊಳವೆಗಳು, ಚಾಕುಗಳು, ಗುಟ್ಕಾ ಪ್ಯಾಕೆಟ್‌ಗಳು ಮತ್ತು ಸುಣ್ಣದ ಡಬ್ಬಿಗಳನ್ನು ಪತ್ತೆಹಚ್ಚಿದ್ದಾರೆ. ವಿಶೇಷ ವಿಚಾರಣಾ ದಳ PI ಶಿವಕುಮಾರ್ ಹಾಗೂ PI ಶ್ರೀನಿವಾಸ ಜಿ.ಟಿ ನೇತೃತ್ವದ ತಂಡವು VIP ಸೆಕ್ಯೂರಿಟಿ ಬ್ಯಾರಕ್ ನಂ.2, ರೂಮ್ ನಂ.2ರಲ್ಲಿ ಸಜಾ…

ಮುಂದೆ ಓದಿ..
ಸುದ್ದಿ 

ಲಕ್ಕಸಂದ್ರದಲ್ಲಿ ಅಪರಿಚಿತನಿಂದ ಯುವಕನ ಮೇಲೆ ಹಲ್ಲೆ: ತಲೆ ಹಾಗೂ ಕಾಲಿಗೆ ಗಂಭೀರ ಗಾಯ.

ಬೆಂಗಳೂರು, ಜೂನ್ 19: ನಗರದ ಲಕ್ಕಸಂದ್ರದಲ್ಲಿ ಇತ್ತೀಚೆಗೆ ಸಂಭವಿಸಿದ ಅಪರಿಚಿತ ವ್ಯಕ್ತಿಯ ಹಲ್ಲೆ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ದುಶ್ಚಟದ ಹಿನ್ನೆಲೆಯಲ್ಲಿ ನಡೆದ ಈ ಗಲಾಟೆಯಲ್ಲಿ ಯುವಕನೊಬ್ಬನ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಂದ್ರ ಮೋಹನ್ ನೀಡಿದ ದೂರಿನ ಪ್ರಕಾರ, ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತಮ್ಮ ಚಿಕ್ಕಮ್ಮ ಚಂದ್ರಕಲಾ ಅವರ ಮಗ ಉಮಾ ಮಹೇಶ್ ಸಹ ಕೂಲಿ ಕೆಲಸ ಮಾಡಿಕೊಂಡು ಜೊತೆಯಲ್ಲಿ ವಾಸವಾಗಿದ್ದರು. ಜೂನ್ 15 ರಂದು ಸಂಜೆ 7 ಗಂಟೆಯ ಸುಮಾರಿಗೆ ಉಮಾ ಮಹೇಶ್ ಚಂದ್ರ ಮೋಹನ್ ರವರಿಗೆ ಕರೆಮಾಡಿ, ಲಕ್ಕಸಂದ್ರದ ಸಾರ್ವಜನಿಕ ಶೌಚಾಲಯದ ಬಳಿ ಯಾರೋ ಅಪರಿಚಿತ ವ್ಯಕ್ತಿ ತಲೆಗೆ ಕಲ್ಲು ಹೊಡೆದು ಗಾಯಗೊಳಿಸಿದ್ದಾನೆಂದು ತಿಳಿಸಿದನು. ಚಂದ್ರ ಮೋಹನ್ ತಕ್ಷಣ ಸ್ಥಳಕ್ಕೆ ಧಾವಿಸಿದಾಗ ಉಮಾ ಮಹೇಶ್ ಶೌಚಾಲಯದ ಬಾಗಿಲ ಬಳಿ ತಲೆಯಿಂದ ರಕ್ತಸ್ರಾವವಾಗುತ್ತಾ ಅಸ್ವಸ್ಥ…

ಮುಂದೆ ಓದಿ..
ಸುದ್ದಿ 

ಆತ್ಮಾನಂದ ಸರಸ್ವತಿ ಸ್ವಾಮೀಜಿಯ ವಿವಾದಾಸ್ಪದ ಹೇಳಿಕೆ: ಧಾರ್ಮಿಕ ದ್ವೇಷ ಪ್ರಚೋದನೆ ಆರೋಪದಲ್ಲಿ ಎಫ್‌ಐಆರ್ ದಾಖಲು.

ಬೆಂಗಳೂರು, ಜೂನ್ 19, 2025:ಸುಬ್ರಮಣ್ಯಪುರ ಠಾಣಾ ಪೊಲೀಸ್ ಇಲಾಖೆ ಧರ್ಮಗಳ ನಡುವೆ ದ್ವೇಷ ಸೃಷ್ಟಿಸುವ ನಿಟ್ಟಿನಲ್ಲಿ ನೀಡಲಾದ ವಿವಾದಾತ್ಮಕ ಭಾಷಣದ ಕುರಿತಂತೆ ಆತ್ಮಾನಂದ ಸರಸ್ವತಿ ಸ್ವಾಮೀಜಿಯ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಂಬಂಧವಾಗಿ ಪೊಲೀಸ್ ಇಲಾಖೆ ತಕ್ಷಣ ಕ್ರಮ ತೆಗೆದುಕೊಂಡಿದೆ.ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ವಿನಯ್ ಕುಮಾರ್ ಎ.ಬಿ (ಹೆಚ್‌.ಸಿ 9784) ಅವರು ಠಾಣೆಗೆ ಹಾಜರಾಗಿ ನೀಡಿದ ಮಾಹಿತಿ ಪ್ರಕಾರ, 2025ರ ಜೂನ್ 16ರಂದು ಬೆಳಿಗ್ಗೆ 9:30ರ ಸಮಯದಲ್ಲಿ ಸೋಷಿಯಲ್ ಮೀಡಿಯಾ ನಿಗಾವಣೆಯ ವೇಳೆಯಲ್ಲಿ varthabharati.in ಎಂಬ ಜಾಲತಾಣದಲ್ಲಿ ದಿನಾಂಕ 15-06-2025 ರಂದು ರಾತ್ರಿ 10:36ಕ್ಕೆ ಅಪ್ಲೋಡ್ ಮಾಡಿದ ವಿವಾದಾತ್ಮಕ ವಿಡಿಯೋ ಪತ್ತೆಯಾಯಿತು.ವೀಡಿಯೊದಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು, “ದುಷ್ಟರನ್ನು ಕೊಲ್ಲುವುದು ಹಿಂದೂ ಧರ್ಮದ ಧ್ಯೇಯ. ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಗುಂಪುಗಳನ್ನು ನಾಶಮಾಡಬೇಕು. ಪ್ರತಿಯೊಬ್ಬರೂ ಶಿವಾಜಿಯಾಗಿ ಹೊರಬಂದು ಪಾಪಿಗಳ ವಿರುದ್ಧ ಹೋರಾಡಬೇಕು,” ಎಂಬಂತಹ…

ಮುಂದೆ ಓದಿ..
ಸುದ್ದಿ 

ನಿರ್ಮಾಣ ಭವನದಲ್ಲಿ ಸುರಕ್ಷತಾ ಲೋಪ: ಕಾರ್ಮಿಕನ ದುರ್ಘಟನಾತ್ಮಕ ಸಾವು

ಬೆಂಗಳೂರು, ಜೂನ್ 19: ನಗರದ ಪೂರ್ಣಪ್ರಜ್ಞ ಲೇಔಟ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಭವನದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬ ದುರ್ಘಟನೆಯಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಮಲ್ಲಪ್ಪ ಎಂದು ಗುರುತಿಸಲಾಗಿದೆ. ಮತ್ತೊಮ್ಮೆ ಕಾಮಗಾರಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಕಾರ್ಮಿಕರ ಜೀವಕ್ಕೆ ಹಾನಿಯಾದ ದುಃಖಕರ ಘಟನೆ ವರದಿಯಾಗಿದೆ. ಸುಮಾರು 12 ವರ್ಷಗಳಿಂದ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಮಲ್ಲಪ್ಪ ಅವರು ಕಳೆದ ಒಂದು ವರ್ಷದಿಂದ ಮೆಸ್ತ್ರಿ ಮಂಜುನಾಥ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.ಜೂನ್ 15ರಂದು ಬೆಳಗ್ಗೆ ಸುಮಾರು 7:30ಕ್ಕೆ ಮಲ್ಲಪ್ಪ ಅವರನ್ನು ಮೆಸ್ತ್ರಿ ಮಂಜುನಾಥ್ ಕರೆದುಕೊಂಡು ಹೋಗಿ, ಪೂರ್ಣಪ್ರಜ್ಙ ಲೇಔಟ್‌ನ ಕುಮಾರನ್ ಸ್ಕೂಲ್ ಹತ್ತಿರ ನಿರ್ಮಾಣದಲ್ಲಿದ್ದ ಬಿಲ್ಡಿಂಗ್‌ನಲ್ಲಿ ಕೆಲಸಕ್ಕೆ ಹಚ್ಚಿದ್ದರು. ಈ ಭವನ ಬಸವಯ್ಯ ಎಂಬುವವರಿಗೆ ಸೇರಿದ್ದು, ಕಾಮಗಾರಿ ಕಂಟ್ರಾಕ್ಟರ್ ರಮೇಶ್ ಅವರ ನಿಯಂತ್ರಣದಲ್ಲಿತ್ತು.ಮಧ್ಯಾಹ್ನ 12:00 ಗಂಟೆ ಸಮಯದಲ್ಲಿ ಲಿಫ್ಟ್ ವಾಹನದ ಮೂಲಕ ಕಬ್ಬಿಣದ ಕಾಲಮ್ ಬಾಕ್ಸ್‌ನ್ನು ಮೇಲಂತಸ್ತಿಗೆ…

ಮುಂದೆ ಓದಿ..