ದಾವಣಗೆರೆ ದಕ್ಷಿಣದ ‘ರಣ’ರಂಗ: ಶಾಮನೂರು ಸಾಮ್ರಾಜ್ಯದ ಮೂರನೇ ಪೀಳಿಗೆಗೆ ‘ಸಾಮಾನ್ಯ’ನ ಸವಾಲು!
ದಾವಣಗೆರೆ ದಕ್ಷಿಣದ ‘ರಣ’ರಂಗ: ಶಾಮನೂರು ಸಾಮ್ರಾಜ್ಯದ ಮೂರನೇ ಪೀಳಿಗೆಗೆ ‘ಸಾಮಾನ್ಯ’ನ ಸವಾಲು! ದಾವಣಗೆರೆ ಎಂದರೆ ತಟ್ಟನೆ ನೆನಪಾಗುವುದು ಘಮಘಮಿಸುವ ಬೆಣ್ಣೆ ದೋಸೆ. ಆದರೆ ಇಂದು ದಾವಣಗೆರೆಯ ಗಲ್ಲಿಗಲ್ಲಿಗಳಲ್ಲಿ ದೋಸೆಯ ಘಮಲಿಗಿಂತಲೂ ಚುನಾವಣಾ ರಾಜಕಾರಣದ ಕಾವು ಹೆಚ್ಚಾಗಿದೆ. ಹಿರಿಯ ರಾಜಕೀಯ ಧುರೀಣ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಎದುರಾಗಿರುವ ಈ ಉಪಚುನಾವಣೆಯು ಕೇವಲ ಒಂದು ಕ್ಷೇತ್ರದ ಅಖಾಡವಲ್ಲ; ಬದಲಾಗಿ ಈ ‘ಬೆಣ್ಣೆ ನಗರಿ’ಯ ಮೇಲೆ ಮುಂದಿನ ದಿನಗಳಲ್ಲಿ ಯಾರ ಅಧಿಪತ್ಯವಿರಲಿದೆ ಎಂಬುದನ್ನು ನಿರ್ಧರಿಸುವ ಪ್ರತಿಷ್ಠೆಯ ಕಣವಾಗಿದೆ. ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ವಾರಸುದಾರ ಸಮರ್ಥ್ ಮಲ್ಲಿಕಾರ್ಜುನ ಮತ್ತು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಶ್ರೀನಿವಾಸ್ ದಾಸಕರಿಯಪ್ಪ ನಡುವಿನ ಈ ‘ಬಿಗ್ ಫೈಟ್’ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರವು ಕಳೆದ 30 ವರ್ಷಗಳಿಂದ ಶಾಮನೂರು ಕುಟುಂಬದ ಭದ್ರಕೋಟೆಯಾಗಿದೆ. ಆದರೆ ನಾಗಮ್ಮ ಕೇಶವಮೂರ್ತಿ ಬಡಾವಣೆಯಿಂದ ಹಿಡಿದು…
ಮುಂದೆ ಓದಿ..
