ನ್ಯಾಯದ ರಕ್ಷಕನಿಗೇ ಅನ್ಯಾಯ: ವಿಶ್ವನಾಥಪುರ ಪೊಲೀಸ್ ಠಾಣೆಯ ಘಟನೆಯಿಂದ ನಾವೂ ತಿಳಿಯಬೇಕಾದ ಕಟು ಸತ್ಯಗಳು…
ನ್ಯಾಯದ ರಕ್ಷಕನಿಗೇ ಅನ್ಯಾಯ: ವಿಶ್ವನಾಥಪುರ ಪೊಲೀಸ್ ಠಾಣೆಯ ಘಟನೆಯಿಂದ ನಾವೂ ತಿಳಿಯಬೇಕಾದ ಕಟು ಸತ್ಯಗಳು… ಕೈಕೋಳ ತೊಡಿಸಬೇಕಾದ ಕೈಗಳೇ ಅಪರಾಧಿಗಳೊಂದಿಗೆ ಕೈಕುಲುಕಿದರೆ ಸಾಮಾನ್ಯ ನಾಗರಿಕ ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು? ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯಬೇಕಾದ ಪೊಲೀಸ್ ಇಲಾಖೆಯೇ ಅಕ್ರಮ ಎಸಗುವವರ ರಕ್ಷಣೆಗೆ ನಿಂತರೆ, ಅದು ಕೇವಲ ಕರ್ತವ್ಯ ಲೋಪವಲ್ಲ, ಬದಲಾಗಿ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಬಿದ್ದ ಕೊಡಲಿ ಪೆಟ್ಟು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಘಟನೆಯು ಈ ಆತಂಕಕಾರಿ ಸತ್ಯವನ್ನು ನಮ್ಮ ಮುಂದಿಟ್ಟಿದೆ. ವ್ಯವಸ್ಥೆಯ ಕೊಳಕನ್ನು ತೊಳೆಯಲು ಹೊರಟ ಒಬ್ಬ ಯುವ ವಕೀಲ, ಇಂದು ಅದೇ ವ್ಯವಸ್ಥೆಯ ದಬ್ಬಾಳಿಕೆಯ ವಿರುದ್ಧ ಏಕಾಂಗಿಯಾಗಿ ಬೀದಿಯಲ್ಲಿ ನಿಂತಿರುವ ದೃಶ್ಯ ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿದೆ. ಸಾಮಾಜಿಕ ಬದ್ಧತೆ ಹೊಂದಿರುವ ಯುವ ವಕೀಲ ನಿಖಿಲ್ ಅವರು ಕಳೆದ ತಿಂಗಳು ತೋರಿದ ಧೈರ್ಯ ಮೆಚ್ಚುವಂತದ್ದು. ಕತ್ತಲ ರಾತ್ರಿಯಲ್ಲಿ ನಡೆಯುತ್ತಿದ್ದ ಬೃಹತ್…
ಮುಂದೆ ಓದಿ..
