ಕೃಷಿ ಹೊಂಡಗಳು: ಜೀವದಾತನೊ ಅಥವಾ ಜೀವ ಹರಣಿಯೊ? ಕೊಪ್ಪಳದ ಈ ಘಟನೆ ನಮಗೆ ಪಾಠವಾಗಲಿ…
ಕೃಷಿ ಹೊಂಡಗಳು: ಜೀವದಾತನೊ ಅಥವಾ ಜೀವ ಹರಣಿಯೊ? ಕೊಪ್ಪಳದ ಈ ಘಟನೆ ನಮಗೆ ಪಾಠವಾಗಲಿ… ನಮ್ಮ ಹಳ್ಳಿಗಳ ಹಸಿರು ಮೈಸಿರಿಯ ನಡುವೆ ಇಂದು ಕೃಷಿ ಹೊಂಡಗಳು ಕ್ರಾಂತಿಕಾರಿ ಬದಲಾವಣೆ ತಂದಿವೆ. ಮಳೆಯಾಶ್ರಿತ ಕೃಷಿಯನ್ನೇ ನಂಬಿದ ಸಾವಿರಾರು ರೈತರಿಗೆ ‘ಕೃಷಿ ಹೊಂಡ’ಗಳು ಜೀವದಾತನಂತೆ ಆಸರೆಯಾಗಿವೆ. ಬರಗಾಲದ ದಿನಗಳಲ್ಲಿ ಒಣಗುತ್ತಿರುವ ಬೆಳೆಗೆ ಅಮೃತವಾಗಬೇಕಿದ್ದ ಈ ನೀರು, ಇಂದು ದುರದೃಷ್ಟವಶಾತ್ ಎಳೆ ಜೀವಗಳನ್ನು ನುಂಗುವ ‘ಮೃತ್ಯುಕೂಪ’ಗಳಾಗಿ ಪರಿಣಮಿಸುತ್ತಿವೆ. ಕೃಷಿ ಭಾಗ್ಯದ ಕನಸು ಕಾಣುವ ಬೆನ್ನಲ್ಲೇ, ಸುರಕ್ಷತೆಯ ಕೊರತೆಯಿಂದಾಗಿ ಇಂತಹ ಹೊಂಡಗಳು ಜಲಸಮಾಧಿಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಕೊಪ್ಪಳದ ಯರೇ ಹಂಚಿನಾಳದಲ್ಲಿ ನಡೆದ ಇತ್ತೀಚಿನ ಘಟನೆಯು ಕೃಷಿ ಹೊಂಡಗಳ ಸುರಕ್ಷತೆಯ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ದೈನಂದಿನ ಬದುಕಿನ ಅತ್ಯಂತ ಸಾಮಾನ್ಯ ಕೆಲಸವೊಂದು ಮೃತ್ಯುವಿನ ದಾರಿಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇ ಹಂಚಿನಾಳ ಗ್ರಾಮದ…
ಮುಂದೆ ಓದಿ..
