ಸರ್ಕಾರಿ ನೌಕರಿ ಸಿಕ್ಕಿದ ಮೇಲೆ ಬದಲಾದ ಬದುಕು: ಹೈದರಾಬಾದ್ನ ಈ ಘಟನೆ ನಮಗೇನು ಕಲಿಸುತ್ತದೆ?
ಸರ್ಕಾರಿ ನೌಕರಿ ಸಿಕ್ಕಿದ ಮೇಲೆ ಬದಲಾದ ಬದುಕು: ಹೈದರಾಬಾದ್ನ ಈ ಘಟನೆ ನಮಗೇನು ಕಲಿಸುತ್ತದೆ? ಮದುವೆಯೆಂಬುದು ಪರಸ್ಪರ ನಂಬಿಕೆ ಮತ್ತು ಸಹಕಾರದ ಮೇಲೆ ಕಟ್ಟುವ ಸುಂದರ ಗೋಪುರ. ಒಬ್ಬರ ಕನಸಿಗೆ ಮತ್ತೊಬ್ಬರು ನೀರೆರೆದು ಪೋಷಿಸುವುದು, ಬೆಳೆಯುವ ಹಾದಿಯಲ್ಲಿ ಏಣಿಯಾಗುವುದು ಸಂಸಾರದ ಪರಮಧರ್ಮ. ಆದರೆ, ಅದೇ ಏರಿ ಬಂದ ಏಣಿಯನ್ನೇ ಕಾಲಿನಿಂದ ಒದ್ದು ಬೀಳಿಸುವಂತಹ ಘಟನೆಗಳು ನಡೆದಾಗ ಮಾನವ ಸಂಬಂಧಗಳ ಮೇಲಿನ ವಿಶ್ವಾಸವೇ ಅಲುಗಾಡುತ್ತದೆ. ತನ್ನ ಪತ್ನಿಯ ಉನ್ನತ ಶಿಕ್ಷಣದ ಕನಸಿಗೆ ಹೆಗಲಾಗಿ ನಿಂತು, ಆಕೆಯನ್ನು ಉನ್ನತ ಅಧಿಕಾರಿಯನ್ನಾಗಿ ಮಾಡಿದ 41 ವರ್ಷದ ನಾಗೆಲ್ಲಿ ಶ್ರೀನಿವಾಸ್ ಎಂಬುವವರ ಬದುಕು ಇಂದು ದುರಂತವಾಗಿ ಅಂತ್ಯಗೊಂಡಿದೆ. ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ರಾಮಕೃಷ್ಣಪುರದಲ್ಲಿ ನಡೆದ ಈ ಘಟನೆ ಕೇವಲ ಒಂದು ಸುದ್ದಿಯಲ್ಲ; ಇದು ಆಧುನಿಕ ಸಂಬಂಧಗಳಲ್ಲಿ ಆವರಿಸುತ್ತಿರುವ ‘ನೈತಿಕ ದಿವಾಳಿತನ’ ಮತ್ತು ಅಧಿಕಾರವು ತರುವ ಅಹಂಕಾರದ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಾದ ಕಾಲಘಟ್ಟವನ್ನು…
ಮುಂದೆ ಓದಿ..
