ಬಡವರ ಬದುಕಿಗೆ ಕೊಡಲಿಪೆಟ್ಟು ನೀಡಲು ಸುಪ್ರೀಂ ಕೋರ್ಟ್ ಆದೇಶದ ದುರುಪಯೋಗ? ಹೈಕೋರ್ಟ್ನಿಂದ ಅಧಿಕಾರಿಗಳ ತಪ್ಪು ವ್ಯಾಖ್ಯಾನದ ಮುಖವಾಡ ಬಯಲು!
ಬಡವರ ಬದುಕಿಗೆ ಕೊಡಲಿಪೆಟ್ಟು ನೀಡಲು ಸುಪ್ರೀಂ ಕೋರ್ಟ್ ಆದೇಶದ ದುರುಪಯೋಗ? ಹೈಕೋರ್ಟ್ನಿಂದ ಅಧಿಕಾರಿಗಳ ತಪ್ಪು ವ್ಯಾಖ್ಯಾನದ ಮುಖವಾಡ ಬಯಲು! ಕಾನೂನಿನ ಹೆಸರಿನಲ್ಲಿ ಬಡವರ ಬದುಕಿನೊಂದಿಗೆ ಚೆಲ್ಲಾಟ ಬೀದಿ ಬದಿ ವ್ಯಾಪಾರ ಎನ್ನುವುದು ಕೇವಲ ಒಂದು ಆರ್ಥಿಕ ಚಟುವಟಿಕೆಯಲ್ಲ; ಅದು ಲಕ್ಷಾಂತರ ಕುಟುಂಬಗಳ ಹಸಿವು ನೀಗಿಸುವ ಏಕೈಕ ಬದುಕಿನ ಮಾರ್ಗ. ಆದರೆ, ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು “ಸುಪ್ರೀಂ ಕೋರ್ಟ್ ಆದೇಶ ನೀಡಿದೆ” ಎನ್ನುವ ನೆಪವೊಡ್ಡಿ ನಡೆಸುತ್ತಿರುವ ತೆರವು ಕಾರ್ಯಾಚರಣೆಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಮಂಗಳೂರಿನ ಸಂಡೇ ಬಜಾರ್ನಲ್ಲಿ ನಡೆದ ಘಟನೆ ಇದಕ್ಕೆ ಜ್ವಲಂತ ಉದಾಹರಣೆ. ಅಧಿಕಾರಿಗಳು ಸುಪ್ರೀಂ ಕೋರ್ಟ್ ತೀರ್ಪನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆಯೇ ಅಥವಾ ಅದರ ಅಸಲಿ ಆಶಯವನ್ನೇ ತಪ್ಪು ವ್ಯಾಖ್ಯಾನಿಸಿ ಬಡವರ ಬದುಕನ್ನು ಕಸಿದುಕೊಳ್ಳುತ್ತಿದ್ದಾರೆಯೇ ಎಂಬ ಸತ್ಯ ಈಗ ಹೈಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್ ಆದೇಶದ ಅಸಲಿ ಮುಖ – ಇದು ತೆರವಿಗಾಗಿ ಅಲ್ಲ! ಮಂಗಳೂರು ಮಹಾನಗರ…
ಮುಂದೆ ಓದಿ..
