ಕರ್ತವ್ಯದ ವೇಳೆಯಲ್ಲೇ ‘ಮದ್ಯ’ಪಾನ: ವಿಜಯಪುರದ ಕೆಬಿಜೆಎನ್ಎಲ್ ಸಿಬ್ಬಂದಿಗಳ ಅಸಲಿ ಮುಖವಾಡ ಬಯಲು!…
ಕರ್ತವ್ಯದ ವೇಳೆಯಲ್ಲೇ ‘ಮದ್ಯ’ಪಾನ: ವಿಜಯಪುರದ ಕೆಬಿಜೆಎನ್ಎಲ್ ಸಿಬ್ಬಂದಿಗಳ ಅಸಲಿ ಮುಖವಾಡ ಬಯಲು!… “ಸರ್ಕಾರಿ ಕೆಲಸ ದೇವರ ಕೆಲಸ” ಎಂಬ ನಾಣ್ಣುಡಿ ನಮ್ಮ ಸಾರ್ವಜನಿಕ ಸೇವಾ ವ್ಯವಸ್ಥೆಯ ಅಡಿಪಾಯವಾಗಬೇಕಿತ್ತು. ಆದರೆ, ಇಂದಿನ ವಾಸ್ತವದಲ್ಲಿ ಈ ಮಾತು ಕೇವಲ ಕಚೇರಿಗಳ ಗೋಡೆಯ ಮೇಲಿನ ಫಲಕಕ್ಕಷ್ಟೇ ಸೀಮಿತವಾಗಿದೆ. ಜನಸಾಮಾನ್ಯರ ತೆರಿಗೆ ಹಣದಲ್ಲಿ ಸುಖ ಜೀವನ ನಡೆಸುವ ಸರ್ಕಾರಿ ನೌಕರರು, ಅದೇ ಜನರ ಸೇವೆ ಮಾಡುವುದನ್ನು ಬಿಟ್ಟು ಮೋಜು-ಮಸ್ತಿಗೆ ಇಳಿದಾಗ ಇಡೀ ವ್ಯವಸ್ಥೆಯೇ ನೈತಿಕವಾಗಿ ದಿವಾಳಿಯಾಗುತ್ತದೆ. ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಇತ್ತೀಚೆಗೆ ಬಯಲಾದ ಘಟನೆಯು, ಈ ನೈತಿಕ ಪತನದ ಪರಮಾವಧಿಯನ್ನು ಬಿಂಬಿಸುತ್ತಿದೆ. ವಿಜಯಪುರ ಜಿಲ್ಲೆಯ ರೈತರ ಪಾಲಿಗೆ ಜೀವನಾಡಿಯಾಗಬೇಕಾದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಇಂದು ಬೇರೆಯದೇ ಕಾರಣಕ್ಕೆ ಸುದ್ದಿಯಲ್ಲಿದೆ. ಆಲಮೇಲದ ಹೊಲಗಾಲುವೆ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಟಮಟ ಮಧ್ಯಾಹ್ನವೇ ತಮ್ಮ ಕರ್ತವ್ಯಕ್ಕೆ ತಿಲಾಂಜಲಿ ಇಟ್ಟು ಡಾಬಾದಲ್ಲಿ ಮದ್ಯಪಾನ…
ಮುಂದೆ ಓದಿ..
