ರೈತನಿಗೇಕೆ ಈ ದುಸ್ಥಿತಿ? ಟೊಮ್ಯಾಟೋ 1 ರೂಪಾಯಿ, ಕೊತ್ತಂಬರಿ ರಸ್ತೆಪಾಲು: ಕೃಷಿ ಬಿಕ್ಕಟ್ಟಿನ ಕಟು ಸತ್ಯಗಳು
ರೈತನಿಗೇಕೆ ಈ ದುಸ್ಥಿತಿ? ಟೊಮ್ಯಾಟೋ 1 ರೂಪಾಯಿ, ಕೊತ್ತಂಬರಿ ರಸ್ತೆಪಾಲು: ಕೃಷಿ ಬಿಕ್ಕಟ್ಟಿನ ಕಟು ಸತ್ಯಗಳು ನಗರದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹತ್ತು ರೂಪಾಯಿ ಹೆಚ್ಚಾದರೆ ಸಾಕು, ಗ್ರಾಹಕರು ಬೆಲೆ ಏರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ಅದೇ ಬೆಲೆ ಪಾತಾಳಕ್ಕೆ ಕುಸಿದಾಗ ಆ ಬೆಳೆಯನ್ನು ಬೆಳೆದ ರೈತನ ಬದುಕು ಹೇಗೆ ಸುಟ್ಟುಹೋಗುತ್ತದೆ ಎಂಬುದು ಯಾರಿಗೂ ಕಾಣದ ಸತ್ಯ. ಇಂದು ನಗರವಾಸಿಗಳು “ತರಕಾರಿ ಅಗ್ಗವಾಯಿತು” ಎಂದು ಸಂಭ್ರಮಿಸುತ್ತಿದ್ದರೆ, ಇತ್ತ ಹಳ್ಳಿಗಳಲ್ಲಿ ರೈತ ತಾನು ಸಾಲ ಮಾಡಿ ಬೆಳೆದ ಬೆಳೆಯನ್ನು ರಸ್ತೆಗೆ ಚೆಲ್ಲಿ ಕಣ್ಣೀರು ಹಾಕುತ್ತಿದ್ದಾನೆ. ಬೆಳಗಾವಿ ಮತ್ತು ದಾವಣಗೆರೆಯ ಇತ್ತೀಚಿನ ಘಟನೆಗಳು ಕೇವಲ ಸುದ್ದಿಯಲ್ಲ, ಅವು ನಮ್ಮ ಕೃಷಿ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ. ಕೆಜಿಗೆ ಕೇವಲ 1 ರೂಪಾಯಿ! ಟೊಮ್ಯಾಟೋ ಬೆಳೆಗಾರರ ಕಣ್ಣೀರು ದಾವಣಗೆರೆ ಜಿಲ್ಲೆಯ ರೈತರ ಸ್ಥಿತಿ ಇಂದು ವರ್ಣನಾತೀತವಾಗಿದೆ. ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ…
ಮುಂದೆ ಓದಿ..
