ಮೈಸೂರು ಜೆಡಿಎಸ್ ಕೋಟೆಯಲ್ಲಿ ಕ್ಷಿಪ್ರ ಕ್ರಾಂತಿ: ಜಿ.ಟಿ. ದೇವೇಗೌಡರಿಗೆ ‘ಗೇಟ್ ಪಾಸ್’, ಸಾರಾ ಮಹೇಶ್ ಎಂಟ್ರಿ?
ಮೈಸೂರು ಜೆಡಿಎಸ್ ಕೋಟೆಯಲ್ಲಿ ಕ್ಷಿಪ್ರ ಕ್ರಾಂತಿ: ಜಿ.ಟಿ. ದೇವೇಗೌಡರಿಗೆ ‘ಗೇಟ್ ಪಾಸ್’, ಸಾರಾ ಮಹೇಶ್ ಎಂಟ್ರಿ? ಮೈಸೂರು ಭಾಗದ ರಾಜಕೀಯವೆಂದರೆ ಅದು ಯಾವಾಗಲೂ ಕುತೂಹಲದ ಹುತ್ತ. ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಡೆಸುವ ಕಸರತ್ತುಗಳು ಈಗ ಹೊಸ ತಿರುವು ಪಡೆದುಕೊಂಡಿವೆ. ವಿಶೇಷವಾಗಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೀಸುತ್ತಿರುವ ಬದಲಾವಣೆಯ ಗಾಳಿ ಇಡೀ ರಾಜ್ಯ ರಾಜಕಾರಣದ ಗಮನ ಸೆಳೆಯುತ್ತಿದೆ. ಜೆಡಿಎಸ್ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ‘ದಳಪತಿಗಳು’ ಒಂದು ದೊಡ್ಡ ಮಟ್ಟದ ‘ಕ್ಷಿಪ್ರ ಕ್ರಾಂತಿ’ಗೆ ಸಜ್ಜಾಗುತ್ತಿದ್ದು, ದಶಕಗಳ ಕಾಲ ಕ್ಷೇತ್ರವನ್ನು ಆಳಿದ ನಾಯಕನಿಗೆ ಗೇಟ್ ಪಾಸ್ ನೀಡುವ ಸಿದ್ಧತೆಗಳು ತೆರೆಮರೆಯಲ್ಲಿ ಪೂರ್ಣಗೊಂಡಿವೆ. ಜಿ.ಟಿ. ದೇವೇಗೌಡರಿಗೆ ಜೆಡಿಎಸ್ನಿಂದ ‘ಗೇಟ್ ಪಾಸ್’? ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕ ಜಿ.ಟಿ. ದೇವೇಗೌಡ (GTD) ಅವರು ಪಕ್ಷದಲ್ಲಿದ್ದೂ ಇಲ್ಲದಂತಿರುವ ‘ಅತಂತ್ರ’ ಸ್ಥಿತಿಯಲ್ಲಿದ್ದಾರೆ. ಜೆಡಿಎಸ್ ಶಾಸಕರಾಗಿದ್ದರೂ, ಬಹಿರಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರನ್ನು…
ಮುಂದೆ ಓದಿ..
