ಬೆಂಗಳೂರಿನಲ್ಲಿ ಮನೆ ಕಟ್ಟುವವರಿಗೆ ಬಿಗ್ ರಿಲೀಫ್: ನೀವು ತಿಳಿಯಲೇಬೇಕಾದ ಪ್ರಮುಖ ಬದಲಾವಣೆಗಳು..
ಬೆಂಗಳೂರಿನಲ್ಲಿ ಮನೆ ಕಟ್ಟುವವರಿಗೆ ಬಿಗ್ ರಿಲೀಫ್: ನೀವು ತಿಳಿಯಲೇಬೇಕಾದ ಪ್ರಮುಖ ಬದಲಾವಣೆಗಳು.. ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತದೊಂದು ಮನೆ ಕಟ್ಟಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜೀವಮಾನದ ಕನಸು. ಆದರೆ, ನಗರದ ಕಟ್ಟುನಿಟ್ಟಾದ ಕಟ್ಟಡ ಉಪವಿಧಿಗಳು (Building Bylaws) ಮತ್ತು ನಕ್ಷೆ ಮಂಜೂರಾತಿ ನಿಯಮಗಳು ಸಾಮಾನ್ಯ ಜನರಿಗೆ ಅನೇಕ ಬಾರಿ ಸವಾಲಾಗಿ ಪರಿಣಮಿಸುತ್ತವೆ. ಈ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರವು ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ನಕ್ಷೆ ಉಲ್ಲಂಘನೆಯ ಕಾರಣದಿಂದ ಸಂಕಷ್ಟಕ್ಕೀಡಾಗಿದ್ದ ಸಾವಿರಾರು ಮನೆ ಮಾಲೀಕರಿಗೆ ನೆಮ್ಮದಿ ನೀಡುವ ಉದ್ದೇಶದಿಂದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ವ್ಯಾಪ್ತಿಯಲ್ಲಿ ಹೊಸ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹೊಸ ಕರಡು ಅಧಿಸೂಚನೆಯ ಅತ್ಯಂತ ಪ್ರಮುಖ ಬದಲಾವಣೆಯೆಂದರೆ ಕಟ್ಟಡ ಉಲ್ಲಂಘನೆಯ ಮಿತಿಯನ್ನು ಹೆಚ್ಚಿಸಿರುವುದು. ಈ ಹಿಂದೆ, ಮಂಜೂರಾತಿ ನಕ್ಷೆಗಿಂತ ಕೇವಲ ಶೇ. 5 ರಷ್ಟು ಹೆಚ್ಚುವರಿ…
ಮುಂದೆ ಓದಿ..
