ಧಾರವಾಡದ ವಿದ್ಯಾರ್ಥಿ ಆತ್ಮಹತ್ಯೆ: ವ್ಯವಸ್ಥೆಯ ಕರಾಳ ಮುಖ ಮತ್ತು ಪೊಲೀಸ್ ಅಧಿಕಾರಿಯ ‘ತಲೆದಂಡ’
ಧಾರವಾಡದ ವಿದ್ಯಾರ್ಥಿ ಆತ್ಮಹತ್ಯೆ: ವ್ಯವಸ್ಥೆಯ ಕರಾಳ ಮುಖ ಮತ್ತು ಪೊಲೀಸ್ ಅಧಿಕಾರಿಯ ‘ತಲೆದಂಡ’ ವಿದ್ಯಾಕಾಶಿ ಎಂದೇ ಪ್ರಸಿದ್ಧವಾದ ಧಾರವಾಡದ ಪವಿತ್ರ ಮಣ್ಣಿನಲ್ಲಿ ಇಂದು ಆತಂಕ ಮತ್ತು ಆಕ್ರೋಶದ ಕಾರ್ಮೋಡ ಕವಿದಿದೆ. ಕಲಿಯಲು ಬಂದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ವ್ಯವಸ್ಥೆಯೇ ಇಂದು ಅವರ ಪಾಲಿಗೆ ಯಮನಂತೆ ವರ್ತಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಧಾರವಾಡದ ವಿದ್ಯಾಗಿರಿಯಲ್ಲಿ ನಡೆದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣವು ಕೇವಲ ಒಂದು ವೈಯಕ್ತಿಕ ಸಾವಲ್ಲ; ಬದಲಾಗಿ ಇದು ವ್ಯವಸ್ಥೆಯೊಳಗಿನ ನೈತಿಕ ಪತನ ಮತ್ತು ಭ್ರಷ್ಟಾಚಾರದ ಕರಾಳ ಮುಖಕ್ಕೆ ಹಿಡಿದ ಕನ್ನಡಿ. ರಕ್ಷಿಸಬೇಕಾದವರೇ ಕಿರುಕುಳ ನೀಡಿ ಪ್ರಾಣ ತೆಗೆಯುವ ಹಂತಕ್ಕೆ ಹೋದಾಗ, ಸಾಮಾನ್ಯ ನಾಗರಿಕರು ಇನ್ಯಾರನ್ನು ನಂಬಬೇಕು? ವಿದ್ಯಾರ್ಥಿಯ ಸಾವಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಇಲಾಖೆಯು ವಿದ್ಯಾಗಿರಿ ಪೊಲೀಸ್ ಠಾಣೆಯ ಸಿಪಿಐ ರಫೀಕ್ ತಹಶಿಲ್ದಾರ್ ಅವರನ್ನು ಅಮಾನತುಗೊಳಿಸಿದೆ. ಉನ್ನತ ಮಟ್ಟದ ಅಧಿಕಾರಿಯೊಬ್ಬರ ಈ ‘ತಲೆದಂಡ’ ಇಲಾಖೆಯಲ್ಲಿ ಸಂಚಲನ…
ಮುಂದೆ ಓದಿ..
