ಹಾಸನಾದ ‘ಲಂಚ’ದ ಹಾದಿ: ಫೋನ್ ಪೇ ಮೂಲಕ ಲಂಚ ಪಡೆದು ಸಿಕ್ಕಿಬಿದ್ದ ಇಂಜಿನಿಯರ್ ಕಥೆ..
ಹಾಸನಾದ ‘ಲಂಚ’ದ ಹಾದಿ: ಫೋನ್ ಪೇ ಮೂಲಕ ಲಂಚ ಪಡೆದು ಸಿಕ್ಕಿಬಿದ್ದ ಇಂಜಿನಿಯರ್ ಕಥೆ.. ತಂತ್ರಜ್ಞಾನ ಬೆಳೆದಂತೆಲ್ಲಾ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಬಹುದು, ಭ್ರಷ್ಟಾಚಾರಕ್ಕೆ ಲಗಾಮು ಬೀಳಬಹುದು ಎಂಬುದು ನಮ್ಮೆಲ್ಲರ ಸದಾಶಯವಾಗಿತ್ತು. ಆದರೆ, ಹಳೆಯ ಕಾಲದ ಭ್ರಷ್ಟಾಚಾರಕ್ಕೆ ಆಧುನಿಕ ತಂತ್ರಜ್ಞಾನವೇ ಹದವಾದ ವೇದಿಕೆಯಾಗುತ್ತಿರುವುದು ಈ ಕಾಲದ ಅತಿದೊಡ್ಡ ವಿಪರ್ಯಾಸ. ಜನಸಾಮಾನ್ಯರಿಗೆ ಸಿಗಬೇಕಾದ ವಿದ್ಯುತ್ ಸೇವೆಯಂತಹ ಮೂಲಭೂತ ಹಕ್ಕುಗಳಿಗೂ ಇಂದಿನ ಡಿಜಿಟಲ್ ಯುಗದಲ್ಲಿ ‘ದರಪಟ್ಟಿ’ ಸಿದ್ಧವಾಗಿರುವುದು ವ್ಯವಸ್ಥೆಯ ದೌರ್ಭಾಗ್ಯ. ಡಿಜಿಟಲ್ ಹೆಜ್ಜೆಗುರುತುಗಳು ಅಳಿಸಲಾಗದ ಸಾಕ್ಷ್ಯಗಳಾಗಿ ಉಳಿಯುತ್ತವೆ ಎಂಬ ಕನಿಷ್ಠ ಜ್ಞಾನವಿಲ್ಲದ ಇಂದಿನ ಅಧಿಕಾರಿಗಳ ಈ ಮಟ್ಟದ ನಿರ್ಲಜ್ಜತನವನ್ನು ನಾವು ಏನೆನ್ನಬೇಕು? ಈ ಪ್ರಕರಣದಲ್ಲಿ ನಮ್ಮನ್ನು ದಂಗಾಗಿಸುವುದು ಸೆಸ್ಕ್ (CESC) ಜೂನಿಯರ್ ಇಂಜಿನಿಯರ್ ಶ್ರೀಧರ್ ತೋರಿರುವ ಅತೀವ ಆತ್ಮವಿಶ್ವಾಸ ಮತ್ತು ತಾಂತ್ರಿಕ ಯುಗದ ಅಜ್ಞಾನ. ಸಾಮಾನ್ಯವಾಗಿ ಭ್ರಷ್ಟರು ಹಣ ಪಡೆದ ಕುರುಹು ಇರಬಾರದೆಂದು ಕತ್ತಲಲ್ಲಿ ನಗದು ರೂಪದ ವ್ಯವಹಾರ ಮಾಡುತ್ತಾರೆ.…
ಮುಂದೆ ಓದಿ..
