ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕಹಿ ವಾಸ್ತವ: 90 ಕಿ.ಮೀ ರಸ್ತೆಯಲ್ಲಿ ಒಂದೇ ಒಂದು ಬಸ್ ನಿಲ್ದಾಣವಿಲ್ಲವೇ?…
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕಹಿ ವಾಸ್ತವ: 90 ಕಿ.ಮೀ ರಸ್ತೆಯಲ್ಲಿ ಒಂದೇ ಒಂದು ಬಸ್ ನಿಲ್ದಾಣವಿಲ್ಲವೇ?… ಕಲ್ಯಾಣ ಕರ್ನಾಟಕದ ರಣ ಬಿಸಿಲು ಕೇವಲ ಹವಾಮಾನದ ವೈಪರೀತ್ಯವಲ್ಲ, ಅದು ಈ ಭಾಗದ ಜನರ ಸಹನೆಯ ಅಗ್ನಿಪರೀಕ್ಷೆಯೂ ಹೌದು. ನೆತ್ತಿ ಸುಡುವ 45 ಡಿಗ್ರಿ ಉಷ್ಣಾಂಶದಲ್ಲಿ ಬದುಕು ಸಾಗಿಸುವುದೇ ಒಂದು ಸಾಹಸವಾಗಿರುವಾಗ, ಮೂಲಸೌಕರ್ಯಗಳ ಕೊರತೆಯು ಈ ಜನರ ಪಾಲಿಗೆ ಮರಣಶಾಸನದಂತೆ ಪರಿಣಮಿಸಿದೆ. ಇತ್ತೀಚೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾಡಿರುವ ಗಂಭೀರ ಆರೋಪಗಳು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹರಿವಾಣದಲ್ಲಿರುವ ತೂತುಗಳನ್ನು ಮತ್ತೊಮ್ಮೆ ಬೆತ್ತಲಾಗಿಸಿವೆ. ಕಲಬುರಗಿ ಮತ್ತು ಯಾದಗಿರಿ ನಡುವಿನ 90 ಕಿಲೋಮೀಟರ್ ಸಂಚಾರವು ಇಂದು ಪ್ರಯಾಣಿಕರಿಗೆ ಒಂದು ಅಕ್ಷಮ್ಯ ಅಪರಾಧದಂತೆ ತೋರುತ್ತಿದೆ. ಹೈಟೆಕ್ ಸಿಟಿಗಳ ಮಾತಾಡುವ ಕಾಲದಲ್ಲಿ, ಎರಡು ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ರಸ್ತೆಯುದ್ದಕ್ಕೂ ಒಂದು ತಂಗುದಾಣವೂ…
ಮುಂದೆ ಓದಿ..
