ವಿಮೆ ಎಂಬ ಹೆಸರಿನಲ್ಲಿ ರೈತರಿಗೆ ‘ಅಕ್ಷಯ ಪಾತ್ರೆ’ಯೋ ಅಥವಾ ಕಂಪನಿಗಳಿಗೆ ‘ಕುಬೇರನ ಗಣಿಯೋ’? ಪರಮೇಶ್ವರ್ ನೀಡಿದ ಎಚ್ಚರಿಕೆಯ ಆಳ-ಅಗಲ…
ವಿಮೆ ಎಂಬ ಹೆಸರಿನಲ್ಲಿ ರೈತರಿಗೆ ‘ಅಕ್ಷಯ ಪಾತ್ರೆ’ಯೋ ಅಥವಾ ಕಂಪನಿಗಳಿಗೆ ‘ಕುಬೇರನ ಗಣಿಯೋ’? ಪರಮೇಶ್ವರ್ ನೀಡಿದ ಎಚ್ಚರಿಕೆಯ ಆಳ-ಅಗಲ… ಬೆಳೆ ನಷ್ಟವಾದಾಗ ಆಸರೆಯಾಗಬೇಕಿದ್ದ ವಿಮೆ, ಇಂದು ರೈತನ ಪಾಲಿಗೆ ಮರೀಚಿಕೆಯಾಗುತ್ತಿದೆ. ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಬಾರದಿದ್ದಾಗ, ಸಂಕಷ್ಟದ ಸುಳಿಯಲ್ಲಿರುವ ಅನ್ನದಾತನ ಬದುಕು ಈಗ ಕಾರ್ಪೊರೇಟ್ ಕಂಪನಿಗಳ ಲಾಭದ ದಾಳವಾಗಿ ಪರಿಣಮಿಸಿದೆ. ರೈತರು ತಮ್ಮ ಅಲ್ಪ ಆದಾಯದಲ್ಲಿ ವಿಮಾ ಕಂತು ಪಾವತಿಸುವುದು ನೆಮ್ಮದಿಯ ನಾಳೆಗಳಿಗಾಗಿ. ಆದರೆ, ವಿಮಾ ಕಂಪನಿಗಳು ಸಂಕಷ್ಟದ ಸಮಯದಲ್ಲಿ ರೈತರ ಕೈ ಹಿಡಿಯುವ ಬದಲು, ತಾಂತ್ರಿಕ ಕಾರಣಗಳನ್ನೊಡ್ಡಿ ಕೈ ಬಿಡುತ್ತಿವೆ. ಇತ್ತೀಚೆಗೆ ತುಮಕೂರಿನಲ್ಲಿ ನಡೆದ ತ್ರೈಮಾಸಿಕ ಕೆಡಿಪಿ (KDP) ಸಭೆಯಲ್ಲಿ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಮಾ ಕಂಪನಿಗಳ ವಿರುದ್ಧ ತೋರಿದ ಆಕ್ರೋಶವು, ಕೃಷಿ ವಿಮೆ ಎಂಬ ವ್ಯವಸ್ಥೆಯೊಳಗಿನ ವ್ಯವಸ್ಥಿತ ವೈಫಲ್ಯವನ್ನು ಬೆತ್ತಲೆ ಮಾಡಿದೆ.…
ಮುಂದೆ ಓದಿ..
