ಜೀವನಾಂಶ ನೀಡದಿದ್ದರೆ ಜೈಲು ಫಿಕ್ಸ್! ಪತಿಯಂದಿರಿಗೆ ಹೈಕೋರ್ಟ್ ನೀಡಿದ ಪ್ರಮುಖ ಎಚ್ಚರಿಕೆಗಳು…
ಜೀವನಾಂಶ ನೀಡದಿದ್ದರೆ ಜೈಲು ಫಿಕ್ಸ್! ಪತಿಯಂದಿರಿಗೆ ಹೈಕೋರ್ಟ್ ನೀಡಿದ ಪ್ರಮುಖ ಎಚ್ಚರಿಕೆಗಳು… ಕೌಟುಂಬಿಕ ಕಲಹಗಳ ಕಾರಣದಿಂದ ದಂಪತಿಗಳು ಬೇರ್ಪಟ್ಟಾಗ, ಪತ್ನಿ ಮತ್ತು ಮಕ್ಕಳ ಬದುಕು ಬೀದಿಗೆ ಬೀಳಬಾರದು ಎಂಬುದು ಕಾನೂನಿನ ಮೂಲ ಆಶಯ. ವಿಚ್ಛೇದನ ಅಥವಾ ಪ್ರತ್ಯೇಕ ವಾಸದ ಸಂದರ್ಭದಲ್ಲಿ ನೀಡಬೇಕಾದ ‘ಜೀವನಾಂಶ’ (Maintenance) ಎಂಬುದು ಕೇವಲ ಆರ್ಥಿಕ ನೆರವಲ್ಲ; ಅದು ಸಂವಿಧಾನಬದ್ಧವಾದ ಸಾಮಾಜಿಕ ನ್ಯಾಯದ ಭಾಗವಾಗಿದೆ. ಇದನ್ನು ಕೇವಲ ಒಂದು ಆಯ್ಕೆ ಎಂದು ಭಾವಿಸಿ ಅಸಡ್ಡೆ ತೋರುವ ಪತಿಯಂದಿರಿಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಕಠಿಣ ಸಂದೇಶ ರವಾನಿಸಿದೆ. ಮಂಗಳೂರಿನ ದಂಪತಿಗಳ ನಡುವಿನ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ಡಾ. ಕೆ. ಮನ್ಮಥ ರಾವ್ ಅವರಿದ್ದ ನ್ಯಾಯಪೀಠವು ಅತ್ಯಂತ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸಿದೆ. ಅನೇಕ ಪ್ರಕರಣಗಳಲ್ಲಿ ಪತಿಯಂದಿರು ಕೌಟುಂಬಿಕ ನ್ಯಾಯಾಲಯದ ಆದೇಶಗಳನ್ನು ಲಘುವಾಗಿ ಪರಿಗಣಿಸುತ್ತಾರೆ.…
ಮುಂದೆ ಓದಿ..
