ಸುದ್ದಿ 

ಮಹಿಳೆಯೊಬ್ಬರಿಗೆ ಅಸಭ್ಯ ವರ್ತನೆ ಹಾಗೂ ಜೀವ ಬೆದರಿಕೆ: ಇಬ್ಬರ ವಿರುದ್ಧ ಪೊಲೀಸ್ ದೂರು..

ಸಾರ್ವಜನಿಕ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿ ಮಹಿಳೆಯೊಬ್ಬರ ಮಾನಕ್ಕೆ ಧಕ್ಕೆಯುಂಟುಮಾಡಿದ ಆರೋಪ ಮತ್ತು ಬಳಿಕ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಮಹಿಳೆಯೊಬ್ಬರು ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಅಶೋಕ್ ಹಾಗೂ ಆಶಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶ್ರೀಮತಿ ರಾಜೇಶ್ವರಿ ಅವರು ನೀಡಿದ ದೂರಿನ ಪ್ರಕಾರ, 18 ಜೂನ್ 2025 ರಂದು ಬೆಳಿಗ್ಗೆ ಸುಮಾರು 6:00 ಗಂಟೆಗೆ, ಅವರ ತಂಗಿ ವನಜಾಕ್ಷಿ ಅವರು ಅಂಜನಾಪುರದ 80 ಅಡಿ ರಸ್ತೆಯ ಡಿಪೋದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಅಶೋಕ್ ಎಂಬಾತನು ತನ್ನ ಡಿಯೋ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಂಗಿಯನ್ನು ತಡೆದು “ಎಲ್ಲಿ ಹೋಗುತ್ತಿದ್ದೀಯಾ?” ಎಂದು ಕೇಳಿದ್ದನು. ತದನಂತರ, ಆಕೆಯ ಕೈ ಹಿಡಿದು ಎಳೆದಾಡಿ, “ನನ್ನ ಜೊತೆಗೆ ಬಾ” ಎಂದು ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ವನಜಾಕ್ಷಿ ಶಬ್ದ ಮಾಡಿದಾಗ, ಅಶೋಕ್ ಸ್ಥಳದಿಂದ ಪರಾರಿಯಾದನು.…

ಮುಂದೆ ಓದಿ..
ಸುದ್ದಿ 

ಜಾಮೀನಿನ ನಿಯಮ ಉಲ್ಲಂಘಿಸಿದ ಆರೋಪಿಗೆ ಮತ್ತೆ ದಸ್ತಗಿರಿ – ಬಿಡದಿ ಪೊಲೀಸರು ತಕ್ಷಣದ ಕ್ರಮ

392 ಐಪಿಸಿ ಕಾಲಂ ಅಡಿಯಲ್ಲಿ ದೂರು ದಾಖಲಾಗಿದ್ದ ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಜಯ್ ಕುಮಾರ್ (28), ನ್ಯಾಯಾಲಯದ ಜಾಮೀನಿನ ನಿಯಮಗಳನ್ನು ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ, ಬಿಡದಿ ಠಾಣಾ ಪೊಲೀಸರು ಆತನನ್ನು ಮರುದಸ್ತಗಿರಿ ಮಾಡಿದ್ದಾರೆ. ಅಜಯ್ ಕುಮಾರ್, ಮಡಿವಾಳ ಜನಾಂಗದವನು, ಕೆಂಗೇರಿ ಉಪನಗರದ ಬಂಡೆಮಠದ ಬಳಿಯ 1ನೇ ಅಡ್ಡರಸ್ತೆಯ ನಿವಾಸಿಯಾಗಿದ್ದು, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿರುತ್ತಿದ್ದ. ಆತನ ವಿರುದ್ಧದ ಪ್ರಕರಣಗಳು ಬಿಡದಿ ಪೊಲೀಸ್ ಠಾಣೆಯಲ್ಲಿ ಮೊ.ನಂ-57/2021 ಹಾಗೂ ಮೊ.ನಂ-323/2021 ರಂತೆ ದಾಖಲಾಗಿದ್ದು, ಸುತ್ತೋಲೆ ಪ್ರಕರಣಗಳು ಕ್ರಮವಾಗಿ ಸಿ.ಸಿ ನಂ-09/2022 ಮತ್ತು ಸಿ.ಸಿ ನಂ-20/2022 ರಂತೆ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಆರೋಪಿ ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗುತ್ತಿರುವುದರಿಂದ, ನ್ಯಾಯಾಲಯವು ಈಗಾಗಲೇ ಎರಡು ಉದ್ಘೋಷಣೆಗಳನ್ನು ಹೊರಡಿಸಿದ್ದರ ಬಗ್ಗೆ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಮೊ.ನಂ-57/2021 ಪ್ರಕರಣದಲ್ಲಿ 2024ರ ಫೆಬ್ರವರಿ 8ರಂದು ಹಾಗೂ ಮೊ.ನಂ-323/2021 ಪ್ರಕರಣದಲ್ಲಿ 2023ರ ಆಗಸ್ಟ್ 24ರಂದು ಉದ್ಘೋಷಣೆಯನ್ನು ಜಾರಿಗೆ ತಂದಿರುವುದಾಗಿ ವರದಿಯಿದೆ.…

ಮುಂದೆ ಓದಿ..
ಕ್ರೈಂ ಸುದ್ದಿ ಸುದ್ದಿ 

ಹೊಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನ: ಯುವಕನಿಂದ ಪೊಲೀಸರಿಗೆ ದೂರು

ನಗರದ ನಿವಾಸಿಯಾದ 23 ವರ್ಷದ ಎಲೆಕ್ಟ್ರಿಷಿಯನ್ ವರುಣ್ ಕುಮಾರ್ ಅವರು ತಮ್ಮ ತಾಯಿ ಹೆಸರಿನಲ್ಲಿ ನೋಂದಾಯಿತ ಹೊಂಡಾ ಡಿಯೋ (ನಂ: KA-41-EP-9216) ದ್ವಿಚಕ್ರ ವಾಹನ ಕಳ್ಳತನವಾಗಿದ್ದು, ಈ ಕುರಿತು ಕೆಂಗೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ವರುಣ್ ಕುಮಾರ್ ಅವರು ದಿನಾಂಕ 10 ಜೂನ್ 2025 ರಂದು ರಾತ್ರಿ 8:30ರ ಸುಮಾರಿಗೆ ತಮ್ಮ ಮನೆ ಮುಂಭಾಗದಲ್ಲಿ ವಾಹನವನ್ನು ನಿಲ್ಲಿಸಿದ್ದರು. ಆದರೆ, ಮರುದಿನ ಬೆಳಗ್ಗೆ ಸುಮಾರು 6:30ರ ವೇಳೆಗೆ ಅವರು ವಾಹನವನ್ನು ನೋಡಲು ಬಂದಾಗ ಅದು ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿತ್ತು. ತಕ್ಷಣವೇ ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ವಾಹನ ಪತ್ತೆಯಾಗದೆ ಹೋದ ಹಿನ್ನೆಲೆಯಲ್ಲಿ, ಯಾರೋ ಅಪರಿಚಿತರು ವಾಹನವನ್ನು ಕಳ್ಳತನ ಮಾಡಿರಬಹುದು ಎಂಬ ಅನುಮಾನದಿಂದ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳತನವಾದ ಹೊಂಡಾ ಡಿಯೋ2019ರ ಮಾದರಿಯದುವಾಗಿದ್ದು,ಆರೆಂಜ್-ಗ್ರೇ ಬಣ್ಣದಲ್ಲಿ ಇತ್ತು.ಚ್ಯಾಸಿಸ್ ನಂಬರ್ ME4JF39HDKG003253…

ಮುಂದೆ ಓದಿ..
ಕ್ರೈಂ ಸುದ್ದಿ ಸುದ್ದಿ 

ಬೃಹತ್ ಉದ್ಯಮ ವಂಚನೆ: ಇಬ್ಬರು ಆರೋಪಿಗಳಿಂದ ಕೋಟ್ಯಂತರ ಮೊತ್ತ, ಮೋಸ….

ಉದ್ಯಮದ ಹೆಸರಿನಲ್ಲಿ ನಂಬಿಕೆ ಮೂಡಿಸಿ ಹೂಡಿಕೆದಾರರಿಂದ ಕೋಟ್ಯಾಂತರ ಹಣ ಪಡೆದು ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗೌತಮ್ ಪಿ.ಕೆ. ಅವರು ನೀಡಿದ ಮಾಹಿತಿಯಂತೆ, 2019ರ ಡಿಸೆಂಬರ್‌ನಲ್ಲಿ ಎಂ.ಜಿ. ರಸ್ತೆಯಲ್ಲಿನ ತಮ್ಮ ಅಣ್ಣನ ಆಫೀಸ್‌ನಲ್ಲಿ ಜಯರಾಮ್ ಹಾಗೂ ರೋಷನ್ ಎಂಬುವವರನ್ನು ಭೇಟಿಯಾಗಿದ್ದರು. ಜಯರಾಮ್ ತನ್ನನ್ನು “ಮಾಜಿ ಗವರ್ನರ್ ಸೆಕ್ರೇಟರಿ” ಎಂದು ಪರಿಚಯಿಸಿ, “ಆಲ್ ಇಂಡಿಯಾ ರೋಬೋಟಿಕ್ ಎಜ್ಯುಕೇಶನ್” ಎಂಬ ಹೆಸರಿನಲ್ಲಿ ಬೃಹತ್ ಕೇಂದ್ರ ಸರ್ಕಾರಿ ಟೆಂಡರ್‌ ಬಗ್ಗೆ ಭರವಸೆ ನೀಡಿದ್ದಾರೆ. ಹೀಗೆಯೇ ₹3 ಕೋಟಿ ಮೊತ್ತದ ಬಂಡವಾಳ ಬೇಕೆಂದು ಹೇಳಿ, ಆರೋಪಿಗಳು ಗೌತಮ್ ಹಾಗೂ ಆತನ ಸಹ ಹೂಡಿಕೆದಾರರಿಂದ ಹಂತ ಹಂತವಾಗಿ ₹2,50,53,400/- ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ಈ ಹಣವನ್ನು ಹೂಡಿಕೆ ಮಾಡಿ ಲಾಭ ಹಂಚಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಹೆಚ್ಚಿನ ಲಾಭದ ನಂಬಿಕೆಯಿಂದ ‘SKILLSCULPT LLP’ ಎಂಬ ಕಂಪನಿಯನ್ನು ಸ್ಥಾಪನೆಗೊಳಿಸಿ, ಖಾತೆ ಮೂಲಕ…

ಮುಂದೆ ಓದಿ..
ಕ್ರೈಂ ಸುದ್ದಿ ಸುದ್ದಿ 

ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್ ಪಾರ್ಕಿಂಗ್‌ನಿಂದ ದ್ವಿಚಕ್ರ ವಾಹನ ಕಳ್ಳತನ..

ಅರುಲ್ ಆನಂದನ್ ಅವರು ದೊಡ್ಡತೋಗೂರಿನ ಕೀರ್ತಿ ಪ್ರೈಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ತಮ್ಮ ಸುಜಿಕಿ ಆಕ್ಸಿಸ್ 125 (ವಾಹನ ಸಂಖ್ಯೆ KA-05-LQ-4304) ದ್ವಿಚಕ್ರ ವಾಹನವನ್ನು ದಿನಾಂಕ 27-05-2025ರಂದು ರಾತ್ರಿ 8:45 ಗಂಟೆಗೆ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಪರಿವಾರಿಕ ಕಾರಣಗಳಿಂದ ಊರಿಗೆ ತೆರಳಿದ್ದ ದೂರುದಾರರು 10-06-2025ರಂದು ಬೆಳಿಗ್ಗೆ 7:30 ಗಂಟೆಗೆ ವಾಪಸ್ ಬಂದು ನೋಡಿದಾಗ ತಮ್ಮ ವಾಹನವು ಪಾರ್ಕಿಂಗ್‌ನಲ್ಲಿ ಕಾಣಿಸದ ಹಿನ್ನೆಲೆ ತಡವಾಗಿ ಬಂದು ಪೊಲೀಸ್ ಠಾಣೆಗೆ ದೂರು ನೀಡಿದರು. ಯಾರೋ ಅಪರಿಚಿತ ವ್ಯಕ್ತಿಗಳು ಪಾರ್ಕಿಂಗ್‌ನಲ್ಲಿದ್ದ ವಾಹನವನ್ನು ಕಳ್ಳತನ ಮಾಡಿದ ಅನುಮಾನ ವ್ಯಕ್ತವಾಗಿದೆ. ಕಳ್ಳತನವಾದ ವಾಹನದ ವಿವರಗಳು: ವಾಹನದ ಬ್ರ್ಯಾಂಡ್: ಸುಜಿಕಿ ಆಕ್ಸಿಸ್ 125 ಮಾದರಿ: 2022 ಬಣ್ಣ: ಮ್ಯಾಟ್ ಬ್ಲ್ಯಾಕ್ ವಾಹನ ಸಂಖ್ಯೆ: KA-05-LQ-4304 ಎಂಜಿನ್ ನಂ.: AF217288981 ಚೆಸ್ಸಿಸ್ ನಂ.: MB8DP12DLN8E31421 ಅಂದಾಜು ಮೌಲ್ಯ: ₹75,000 ಪೊಲೀಸರು IPC ಸೆಕ್ಷನ್ 379 ಅಡಿಯಲ್ಲಿ ಕೇಸು ದಾಖಲಿಸಿಕೊಂಡು…

ಮುಂದೆ ಓದಿ..
ಸುದ್ದಿ 

ಸ್ನ್ಯಾಕ್ಸ್ ತರಲು ಹೋಗಿ ನಾಪತ್ತೆಯಾದ ಯುವಕ : ಕುಟುಂಬಸ್ಥರು ಚಿಂತಾಗ್ರಸ್ತರಾಗಿದ್ದಾರೆ.

ಬೆಂಗಳೂರು, ಜೂನ್ 22: ನಗರದ ನಿವಾಸಿ 26 ವರ್ಷದ ಯುವಕ ವರುಣ್ ಕುಮಾರ್ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ವರುಣ್ ಅವರ ಅಕ್ಕ ನಾದ ನಯನರವರ ಪ್ರಕಾರ, ವರುಣ್ ಕುಮಾರ್ ಅವರು ದಿನಾಂಕ 17-06-2025 ರಂದು ಮದ್ಯಾಹ್ನ ಸುಮಾರು 2:30 ಗಂಟೆಗೆ “ಸ್ನ್ಯಾಕ್ಸ್ ತೆಗೆದುಕೊಂಡು 5 ನಿಮಿಷದಲ್ಲಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೋದ ವರುಣ್ ಅವರು ಇದುವರೆಗೆ ಮನೆಗೆ ವಾಪಸ್ ಬಂದಿಲ್ಲ.ಅನೇಕ ಬಾರಿ ನಯನ ಅವರು ವರುಣ್ ಮೊಬೈಲ್ ನಂಬರ್‌ಗೆ ಸಂಪರ್ಕಿಸಲು ಯತ್ನಿಸಿದರೂ, ಅವರು ಕರೆ ಸ್ವೀಕರಿಸುತ್ತಿಲ್ಲ. ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ವಿಚಾರಣೆ ಮಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಈ ಹಿನ್ನೆಲೆಯಲ್ಲಿ ವರುಣ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ನಯನ ಠಾಣೆಗೆ ದೂರು ದಾಖಲಿಸಿದ್ದಾರೆ. ಮೈಕೊ ಬಡಾವಣೆಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಕ್ರಮ ಆರಂಭಿಸಿದೆ.ವರುಣ್ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಸಾರ್ವಜನಿಕರು ಹತ್ತಿರದ ಪೊಲೀಸ್…

ಮುಂದೆ ಓದಿ..
ಸುದ್ದಿ 

ಬಿಟಿಎಂ ಲೇಔಟ್‌ನಲ್ಲಿ ಅಕ್ರಮ ಎಲ್‌ಪಿ‌ಜಿ ಸಿಲಿಂಡರ್‌ ದಾಸ್ತಾನು: ಶಾಲಾ ಮಕ್ಕಳಿಗೆ ಅಪಾಯದ ನೆರಳು..

ಬೆಂಗಳೂರು, ಜೂನ್ 22 – ನಗರದ ಬಿಟಿಎಂ ಲೇಔಟ್ 2ನೇ ಹಂತದ ಎಸ್.ಎನ್.ಎನ್ ಅಪಾರ್ಟ್‌ಮೆಂಟ್ ಹಾಗೂ ಏಕ್ಯ ಶಾಲೆಯ ಸಮೀಪ ಅಕ್ರಮವಾಗಿ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿ, ಕಮರ್ಶಿಯಲ್ ಸಿಲಿಂಡರ್‌ಗಳಿಗೆ ಪುನಃ ಭರ್ತಿ (ರೀ-ಫಿಲ್ಲಿಂಗ್) ಮಾಡುತ್ತಿರುವ ಶಂಕೆಯ ಕುರಿತಂತೆ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಲಭಿಸಿದ್ದು, ತನಿಖೆಗಾಗಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿನಾಂಕ 18/06/2025 ರಂದು ಬೆಳಿಗ್ಗೆ 11:50ರ ವೇಳೆಗೆ ಸಿಸಿಬಿ ಕಛೇರಿಗೆ ಈ ಕುರಿತು ಭಾತ್ಮೀ ಮಾಹಿತಿ ಲಭಿಸಿದೆ. ಆಧಾರದ ಮೇಲೆ ಸಿಸಿಬಿಯ ಎಎಸ್‌ಐ ಮೊಹಮ್ಮದ್ ಜಬೀವುಲ್ಲಾ ಮತ್ತು ಎಎಸ್‌ಐ ಶ್ರೀನಿವಾಸ.ಟಿ ಅವರು ಮಧ್ಯಾಹ್ನ 12:40ರ ಸುಮಾರಿಗೆ ಬಿಟಿಎಂ ಲೇಔಟ್ 2ನೇ ಹಂತದ ಎಸ್.ಎನ್.ಎನ್ ಅಪಾರ್ಟ್‌ಮೆಂಟ್ ಹಾಗೂ ಏಕ್ಯ ಶಾಲೆಯ ಸಮೀಪದ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಸಾವಿರಾರು ಜನರು ವಾಸವಿರುವ ಅಪಾರ್ಟ್‌ಮೆಂಟ್ ಹಾಗೂ ಶಾಲೆಯಲ್ಲಿ ಮಕ್ಕಳು ಹಾಜರಿರುವ ಪರಿಸರದಲ್ಲಿಯೇ,…

ಮುಂದೆ ಓದಿ..
ಸುದ್ದಿ 

ಹುಳಿಮಾವು ಕೆರೆಯ ಬಳಿ ಅಕ್ರಮ ರಕ್ತಚಂದನ ಸಾಗಣಿಕೆ : ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ…

ಬೆಂಗಳೂರು, ಜೂನ್ 22: ನಗರದ ಹುಳಿಮಾವು ಕೆರೆಯ ಬಳಿ ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾಸಗಿ ಭಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಹೆಚ್.ಸಿ. ನಯಾಜ್ ಅಹ್ಮದ್, ಆನಂದ್ ಕುಮಾರ್ ಡಿ.ಎನ್ ಹಾಗೂ ನಾಗರಾಜ್ ನಾಯಕ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಈ ಕಾರ್ಯಾಚರಣೆಯನ್ನು ನಡೆಸಿತು.ಸಂಜೆ ಸುಮಾರು 8 ಗಂಟೆಗೆ ಹುಳಿಮಾವು ಕೆರೆಯ ಬಳಿ ಖಾಲಿ ಜಾಗದಲ್ಲಿ ಶಂಕಾಸ್ಪದವಾಗಿ ನಿಂತಿದ್ದ ಇಬ್ಬರನ್ನು ಪೊಲೀಸರ ತಂಡ ವಶಕ್ಕೆ ತೆಗೆದುಕೊಂಡಿದೆ. ಬಂಧಿತರನ್ನು ವಿಚಾರಣೆ ನಡೆಸಿದಾಗ ಅವರು ಮೊಹಮ್ಮದ್ ಖುರ್ಷಿದ್ ಖಾನ್ (47, ದೆಹಲಿ ಮೂಲ) ಮತ್ತು ಶರವಣನ್ (43, ಯಶವಂತಪುರ, ಬೆಂಗಳೂರು) ಎಂದು ಗುರುತಿಸಲಾಗಿದೆ.ಅವರ ಬಳಿ ಇದ್ದ ಪ್ಲಾಸ್ಟಿಕ್ ಚೀಲದಲ್ಲಿ ಒಟ್ಟು 10 ರಕ್ತಚಂದನದ ಮರದ ತುಂಡುಗಳು, ಸುಮಾರು 97 ಕಿಲೋಗ್ರಾಂ ತೂಕದವು, ಪತ್ತೆಯಾಗಿದೆ. ಈ ತುಂಡುಗಳು ವಿವಿಧ ಉದ್ದ…

ಮುಂದೆ ಓದಿ..
ಅಂಕಣ 

೭೭ ರ ಹರೆಯದ ಕೂಲಿಕಾರ ಚೆನ್ನಪ್ಪನ ಸ್ವಗತ…..

ಇಂದಿಗೆ ಸರಿಯಾಗಿ ನಾನು ಕೂಲಿ ಕೆಲಸ ಮಾಡಲು ಆರಂಭಿಸಿ ೭೦ ವರ್ಷವಾಯಿತು.೭ ನೇ ವಯಸ್ಸಿನಲ್ಲಿ ಪ್ರಾರಂಭವಾದ ನನ್ನ ಕೂಲಿ ಕೆಲಸ ಈಗಿನ ನನ್ನ ೭೭ ನೆಯ ಈ ವಯಸ್ಸಿನಲ್ಲೂ ನಿರಂತರವಾಗಿ ನಡೆಯುತ್ತಿದೆ…………….ಕೂಲಿ ಎಂದರೆ ಪೇಟೆ ಅಂಗಡಿಗಳಲ್ಲಿ ತರಕಾರಿ ಮೂಟೆ ಹೊರುವುದು. ಲಾರಿಗಳಿಗೆ ಮೂಟೆ ತುಂಬುವುದು ಮತ್ತು ಇಳಿಸುವುದು.ಈಗಿನ ಯುವ ಜನಾಂಗಕ್ಕೆ ತುಂಬಾ ಆಶ್ಚರ್ಯವಾಗಬಹುದು ಅಥವಾ ಕೆಲವರು ನಂಬದೇ ಇರಬಹುದು. ಇಲ್ಲಿಯವರೆಗೂ ನಾನು ಒಮ್ಮೆಯೂ ಯಾವುದೇ ಗಾಯ ಅಥವಾ ಖಾಯಿಲೆಯಿಂದ ಆಸ್ಪತ್ರೆಗೆ ಹೋಗಿಲ್ಲ. ೬೫ ನೆಯ ವಯಸ್ಸಿನಲ್ಲಿ ಒಮ್ಮೆ ಹೊಟ್ಟೆ ನೋವು ಮತ್ತು ೭೩ ನೆಯ ವಯಸ್ಸಿನಲ್ಲಿ ಹಲ್ಲು ನೋವು ಬಂದಾಗ ಔಷಧಿ ಅಂಗಡಿಯಿಂದ ಎರಡೆರಡು ಮಾತ್ರೆ ತೆಗೆದುಕೊಂಡಿದ್ದು ಬಿಟ್ಟರೆ ಆಕಡೆ ತಲೆಯೇ ಹಾಕಿಲ್ಲ. ನನಗೆ ೬ ಜನ ಮಕ್ಕಳು. ೪ ಗಂಡು ೨ ಹೆಣ್ಣು. ಎಲ್ಲಾ ಹೆರಿಗೆಗಳು ಸಹಜವಾಗಿ ಮತ್ತು ಮನೆಯಲ್ಲಿಯೇ ಆಗಿದೆ.ಎರಡು ದಿನಕ್ಕೆ ಒಮ್ಮೆ ಹಲ್ಲುಜ್ಜುವ…

ಮುಂದೆ ಓದಿ..
ಸುದ್ದಿ 

ಜೊತೆಯಲ್ಲೆ ಇದ್ದ ಗೆಳೆಯನಿಂದ ಅಡುಗೆ ಕಾರ್ಮಿಕನಿಗೆ ಗಂಭೀರ ಹಲ್ಲೆ.

ಬೆಂಗಳೂರು, ಜೂನ್ 21: ನಗರದ ಅಂಚೆಪೇಟೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಬಿಹಾರದ ಕಾರ್ಮಿಕನೊಬ್ಬನಿಗೆ ಜೊತೆಯಲ್ಲೆ ಇದ್ದ ಗೆಳೆಯನೇ ತೀವ್ರ ಹಲ್ಲೆ ಮಾಡಿರುವ ಘಟನೆ ಬೆಳಿಗ್ಗೆ ಬೆಳಕಿಗೆ ಬಂದಿದೆ.ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ ನಾಗೇಂದ್ರ ಎಂಬುವರು ಮೂಲತಃ ಬಿಹಾರ ರಾಜ್ಯದ ಸೀತಾಮಧಿ ಜಿಲ್ಲೆ, ನಾಗಪುರಠಾಣೆ ವ್ಯಾಪ್ತಿಗೆ ಸೇರಿರುವ ಸಿರಸಿ ಗ್ರಾಮದ ನಿವಾಸಿ. ಸುಮಾರು ಐದು ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದು, ದಿಲೀಪ್ ಎಂಬುವವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಇದ್ದರು. ಅವರೊಂದಿಗೆ ಚಿಕ್ಕಪೇಟೆಯ ಪ್ಯಾರಾಮೌಂಟ್ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕೆಲಸಮಾಡುವ ನಾಲ್ವರು ಸೇರಿ ಒಟ್ಟೂ ಐವರು ಒಂದೆ ಕೋಣೆಯಲ್ಲಿ ವಾಸಿಸುತ್ತಿದ್ದರು.ದಿನಾಂಕ ಜೂನ್ 17ರ ರಾತ್ರಿ 10 ಗಂಟೆ ವೇಳೆಗೆ ನಾಗೇಂದ್ರ ಅವರ ಹೆಂಡತಿಯ ತಂಗಿಯ ಮಗ ಶರವಣ್ ಹಾಗೂ ಇನ್ನೊಬ್ಬ ಸಹಪಾಟಿಯಾದ ಮನೀಶ್ ಕುಮಾರ್ ಚರೋಸಿಯಾ ನಡುವೆ ಗಲಾಟೆ ಉಂಟಾಗಿತ್ತು. ಬಳಿಕ ಊಟದ…

ಮುಂದೆ ಓದಿ..