ಬಡ್ಡಿದಂಧೆಯ ಕರಾಳ ಮುಖ: ಬೆಂಗಳೂರಿನ ಆಟೋ ಚಾಲಕನ ಆತ್ಮಹತ್ಯೆ ಬಿಚ್ಚಿಟ್ಟ ಆಘಾತಕಾರಿ ಸತ್ಯಗಳು..
ಬಡ್ಡಿದಂಧೆಯ ಕರಾಳ ಮುಖ: ಬೆಂಗಳೂರಿನ ಆಟೋ ಚಾಲಕನ ಆತ್ಮಹತ್ಯೆ ಬಿಚ್ಚಿಟ್ಟ ಆಘಾತಕಾರಿ ಸತ್ಯಗಳು.. ಬೆಂಗಳೂರು ಎನ್ನುವುದು ಕೋಟಿ ಕನಸುಗಳ ನಗರ. ಆದರೆ ಈ ಜಗಮಗಿಸುವ ಬೆಳಕಿನ ಹಿಂದೆ ‘ಮೀಟರ್ ಬಡ್ಡಿ’ ಎಂಬ ಮಾಫಿಯಾದ ಕರಾಳ ನೆರಳು ಬಡವರ ಬದುಕನ್ನು ಹೇಗೆ ಕಬಳಿಸುತ್ತಿದೆ ಎಂಬುದಕ್ಕೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಮಾಲ್ ಉದ್ದೀನ್ ಅವರ ಸಾವಿನ ಘಟನೆಯೇ ಸಾಕ್ಷಿ. ಬದುಕಿನ ಬಂಡಿ ಎಳೆಯಲು ಆಟೋ ಹತ್ತಿದ ವ್ಯಕ್ತಿ, ಸಾಲಗಾರರ ಕ್ರೌರ್ಯಕ್ಕೆ ಬಲಿಯಾಗಿ ಇಂದು ಮಣ್ಣಾಗಿದ್ದಾರೆ. ಜಮಾಲ್ ಅವರ ಈ ದುರಂತ ಅಂತ್ಯವು ನಮ್ಮ ಸಮಾಜದ ಕ್ರೂರ ಮುಖವನ್ನು ಮತ್ತು ಸಾಮಾನ್ಯ ಮನುಷ್ಯನ ಅಸಹಾಯಕತೆಯನ್ನು ಬೆತ್ತಲೆ ಮಾಡಿದೆ. ಯಾವುದೇ ದಂಧೆಕೋರ ಮೊದಲಿಗೆ ಸಹಾಯಹಸ್ತ ಚಾಚುವ ದಯಾಮಯಿಯಂತೆ ಕಾಣಿಸಿಕೊಳ್ಳುತ್ತಾನೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಜಮಾಲ್ ಅವರಿಗೆ ಸಾಲ ನೀಡಿದ ವ್ಯಕ್ತಿ ಆರಂಭದಲ್ಲಿ ಹೂಡಿದ್ದು ಇದೇ ತಂತ್ರ.…
ಮುಂದೆ ಓದಿ..
